Congress | ಅರಗ ಜ್ಞಾನೇಂದ್ರ ಅವರೇ ನೀವೊಬ್ಬ ಅಪ್ರಬುದ್ದ ರಾಜಕಾರಿಣಿ
ಬೆಂಗಳೂರು : ಬೆಂಗಳೂರಿನ ಜೆಜೆ ನಗರದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರ ಗೊಂದಲದ ಹೇಳಿಕೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ತರಾಟೆಗೆ ತೆಗೆದುಕೊಂಡಿದೆ.
ಕಾಂಗ್ರೆಸ್ ಟ್ವೀಟ್ ನಲ್ಲಿ.. ಅರಗ ಜ್ಞಾನೇಂದ್ರ ಅವರೇ ನೀವೊಬ್ಬ ಅಪ್ರಬುದ್ದ ರಾಜಕಾರಿಣಿ, ಅಸಮರ್ಥ ಗೃಹಸಚಿವ ಎಂದು ಕಿಡಿಕಾರಿದೆ.
'@JnanendraAraga ಅವರೇ ನೀವೊಬ್ಬ ಅಪ್ರಬುದ್ದ ರಾಜಕಾರಿಣಿ, ಅಸಮರ್ಥ ಗೃಹಸಚಿವ.
ಗೃಹಸಚಿವರ ಮಾಹಿತಿಯ'ಸೋರ್ಸ್' ಪೊಲೀಸ್ ವರದಿ ಆಗಿರಬೇಕೇ ಹೊರತು 'ವಾಟ್ಸಾಪ್ ಫಾರ್ವರ್ಡ್ ಮೆಸೇಜುಗಳಲ್ಲ!
ಬಿಜೆಪಿ ಟೋಪಿ ಹಾಕಿದಾಗ ಒಂದು ಮಾತು, ಟೋಪಿ ತೆಗೆದಾಗ ಮತ್ತೊಂದು ಮಾತು!
ಬಿಜೆಪಿ ಟೋಪಿಯ ಮಹಿಮೆಯೇ ಅಂತದ್ದು! 'ಸುಳ್ಳು' ತಕ್ಷಣ ಜಾಗೃತವಾಗಿಬಿಡುತ್ತದೆ!
— Karnataka Congress (@INCKarnataka) April 6, 2022
ಜೊತೆಗೆ ಗೃಹಸಚಿವರ ಮಾಹಿತಿಯ‘ಸೋರ್ಸ್‘ ಪೊಲೀಸ್ ವರದಿ ಆಗಿರಬೇಕೇ ಹೊರತು ‘ವಾಟ್ಸಾಪ್ ಫಾರ್ವರ್ಡ್ ಮೆಸೇಜುಗಳಲ್ಲ ಎಂದು ಕಾಂಗ್ರೆಸ್ ಸಲಹೆ ನೀಡಿದೆ.
ಬಿಜೆಪಿ ಟೋಪಿ ಹಾಕಿದಾಗ ಒಂದು ಮಾತು, ಟೋಪಿ ತೆಗೆದಾಗ ಮತ್ತೊಂದು ಮಾತು! ಬಿಜೆಪಿ ಟೋಪಿಯ ಮಹಿಮೆಯೇ ಅಂತದ್ದು! ‘ಸುಳ್ಳು‘ ತಕ್ಷಣ ಜಾಗೃತವಾಗಿಬಿಡುತ್ತದೆ ಎಂದು ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಕುಟುಕಿದೆ. congress-slams-araga-jnanendra