ಬಿಟ್ ಕಾಯಿನ್ ಹಗರಣ ಬೊಮ್ಮಾಯಿಯವರನ್ನ ಬಲಿ ಪಡೆಯುತ್ತೆ – ಪ್ರಿಯಾಂಕ್ ಖರ್ಗೆ
ಬಿಟ್ ಕಾಯಿನ್ ಹಗರಣದಲ್ಲಿ ಮುಖ್ಯಮಂತ್ರಿ ಬಸರಾಜ್ ಬೊಮ್ಮಾಯಿಯವರನ್ನ ಬಲಿ ಪಡೆಯುವುದು 100 % ಗ್ಯಾರಂಟಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬಿಜೆಪಿ ವರಿಷ್ಠರು ಮತ್ತು ಅವರ ಮಕ್ಕಳು ಬಿಟ್ ಕಾಯಿನ್ ಹಗರಣದಲ್ಲಿ ಶಾಮಿಲಾಗಿದ್ದಾರೆ. ಬಿಟ್ ಕಾಯಿನ್ ಹಗರಣವನ್ನ ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಸರ್ಕಾರ ಮುಂದಾಗಿದೆ ಎಂದು ಪ್ರಿಯಾಂಕ್ ಖರ್ಗೆ ಕಲಬುರಗಿಯಲ್ಲಿ ಆರೋಪಿಸಿದರು.
ಕಳೆದ ಭಾರಿ ಮೂರು ಮುಖ್ಯಮಂತ್ರಿಗಳನ್ನ ಬಿಜೆಪಿ ಕೊಟ್ಟಿತ್ತು . ಹಗರಣದ ತನಿಖೆ ಸರಿಯಾಗಿ ನಡೆದರೆ ಈ ಭಾರಿ ಮೂರು ಮುಖ್ಯ ಮಂತ್ರಿಗಳನ್ನ ಕರ್ನಾಟಕ ನೋಡಲಿದೆ. ಬೊಮ್ಮಾಯಿಯವರು ಕೆಳಗಿಳಿಯುವುದು ಗ್ಯಾರಂಟಿ ಎಂದು ಹೇಳಿದರು.