ADVERTISEMENT
Tuesday, March 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

5 ಸುಲಭ ಹಾಗೂ ರುಚಿಕರ ಅಡುಗೆಗಳ ರೆಸಿಪಿಗಳು

Namratha Rao by Namratha Rao
October 29, 2021
in Cooking, Newsbeat, ಅಡುಗೆ
food
Share on FacebookShare on TwitterShare on WhatsappShare on Telegram

5 ಸುಲಭ ಹಾಗೂ ರುಚಿಕರ ಅಡುಗೆಗಳ ರೆಸಿಪಿಗಳು

1. 2 ರೀತಿಯಲ್ಲಿ ಬಾಳೆಹಣ್ಣಿನ ಪ್ಯಾನ್ ಕೇಕ್ ಮಾಡುವ ವಿಧಾನ..!

ಬನಾನಾ ಪ್ಯಾನ್ ಕೇಕ್
ಬೇಕಾಗುವ ಪದಾರ್ಥಗಳು
ಸಕ್ಕರೆ 1 ಕಪ್
ಬಾಳೆಹಣ್ಣು 2
ಮೊಟ್ಟೆ 1
ಮೈದಾ ಹಿಟ್ಟು 1 ವರೆ ಕಪ್
ಹಾಲು ಅರ್ಧ ಕಪ್
ಏಲಕ್ಕಿ ಅಥವ ವೆನ್ನಿಲಾ ಎಸೆನ್ಸ್
ಬೆಣ್ಣೆ
ಜೇನುತುಪ್ಪ
ಬೇಕಿಂಗ್ ಸೋಡಾ

ಮೊಟ್ಟೆ ಹಾಕಿ ಮಾಡುವ ವಿಧಾನ
ಮೊದಲಿಗೆ ಒಂದು ಮಿಕ್ಸಿ ಜಾರ್ ನಲ್ಲಿ 2 ಬಾಳೆಹಣ್ನನ್ನ ಹಾಕಿ. ಅದಕ್ಕೆ ಅರ್ಧ ಕಪ್ ಅಥವ ನಿಮ್ಮ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ. ಬಳಿಕ ಏಲಕ್ಕೆ ಚೆಚ್ಚಿ ಹಾಕಿ. ಆದ್ರೆ ಏಲಕ್ಕಿ ಹಾಕಿದರೆ ವೆನ್ನಿಲಾ ಎಸೆನ್ಸ್ ಹಾಕಬಾರದು. ಒಂದು ವೇಳೆ ವೆನಿಲಾ ಎಸೆನ್ಸ್ ಹಾಕಿದ್ರೆ ಏಲಕ್ಕಿ ಸೇರಿಸಬೇಡಿ. ಇದಕ್ಕೆ ಅರ್ಧ ಕಪ್ ಹಾಲು ಹಾಕಿ. ಇದೇ ಜಾರಿಗೆ 2 ಮೊಟ್ಟೆ ಹೊಡೆದು ಹಾಕಿ. ಈಗ ಈ ಮಿಶ್ರಣ ನುಣ್ಣಗಾಗುವರೆಗೂ ರುಬ್ಬಿ. ಬಳಿಕ ಒಂದು ಬೌಲ್ ಗೆ ಮೈದಾ ಹಿಟ್ಟು ಹಾಕಿ ಮೊದಲಿಗೆ 1 ಕಪ್ ಹಾಕಿ ಹಾಕಿ. ಇದಕ್ಕೆ ಚಿಟಕೆ ಅಡುಗೆ ಸೋಡಾ ಹಾಕಿ ಮೊದಲಿಗೆ ಕಲಿಸಿ. ನಂತರ ರುಬ್ಬಿದ ಮಿಶ್ರಣವನ್ನ ಇದಕ್ಕೆ ಸೇರಿಸಿ ಗಂಟು ಆಗದಂತೆ ಚೆನ್ನಾಗಿ ಸ್ಪೂನ್ ನ ಸಹಾಯದಿಂದ ಕಲಸಿ. ಈ ಮಿಶ್ರಣ ದೋಸೆ ಹಿಟ್ಟಿನ ಮಿಶ್ರಣದ ಹದಕ್ಕಿಂತ ಸ್ವಲ್ಪ ಗಟ್ಟಿಯಿರಬೇಕು. ಈಗ ಒಂದು ಪ್ಯಾನ್ ಕಾಯಲು ಸ್ಟವ್ ಮೇಲಿಡಿ. ಮೀಡಿಯಮ್ ಫ್ಲೋ ನಲ್ಲಿ ಪ್ಯಾನ್ ಕಾದ ನಂತರ, ಬೆಣ್ಣೆ ಅಥವಾ ತುಪ್ಪವನ್ನ ಪ್ಯಾನ್ ಮೇಲೆ ಸವರಿ. ಬಳಿಕ ಒಂದೊಂದೇ ಸೌಟ್ ನಲ್ಲಿ ಮಿಶ್ರಣವನ್ನ ಚಿಕ್ಕ ಚಿಕ್ಕ ದೋಸೆಗಳಂತೆ ಪ್ಯಾನ್ ಮೇಲೆ ಹಾಕಿ ಆದ್ರೆ ಅದರ ಮೇಲೆ ಸವರವುದಾಗಲಿ ಬಳೆಯುವುದಾಗಲಿ ಮಾಡದಿರಿ. ನೆನಪಿಡಿ ಸ್ವವ್ ನ ಫ್ಲೇಮ್ ತುಂಬ ಸಿಮ್ ಅಥವಾ ಮೀಡಿಯಮ್ ಆಗಿಯೇ ಇರಬೇಕು. ಪ್ಯಾನ್ ಕೇಕ್ ಒಂದು ಕಡೆ ಬೆಂದ ತಕ್ಷಣ ಅದರ ಮೇಲೆ ಚುಕ್ಕಿಗಳು ಕಾಣಿಸುತ್ತದೆ. ಇದಾದ ನಂತರ ಮತ್ತೊಂದು ಕಡೆ ತೆರುಗಿಸಿ ಬೇಯಿಸಿ. ಈಗ ಈ ಪ್ಯಾನ್ ಕೇಕ್ ಅನ್ನು ಸರ್ವಿಂಗ್ ಪ್ಲೇಟ್ ಗೆ ಹಾಕಿ ಬಿಸಿ ಇರುವಾಗಲೇ ಜೇನುತುಪ್ಪ ಒಂದು ಸ್ಪೂನ್, ಹಾಗೂ ಬೇಕಿದ್ರೆ ಬೆಣ್ಣೆಯನ್ನ ಅದರ ಮೇಲೆ ಹಾಕಿ. ಜೊತೆಗೆ ಸಕ್ಕರೆ ಪುಡಿಯಿಂದಲೂ ಗಾರ್ನಿಶ್ ಮಾಡಿ ಸವಿಯಬಹುದು. ಕೊನೆಯ ಸ್ಟೆಪ್ ಆಪ್ಷನಲ್.

ಮೊಟ್ಟೆ ಇಲ್ಲದೆ ಮಾಡುವ ವಿಧಾನ

Related posts

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

March 30, 2026
ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

March 30, 2026

ಮೊದಲಿಗೆ ಒಂದು ಮಿಕ್ಸಿ ಜಾರ್ ನಲ್ಲಿ 2 ಬಾಳೆಹಣ್ನನ್ನ ಹಾಕಿ. ಬಳಿಕ ಏಲಕ್ಕೆ ಚೆಚ್ಚಿ ಹಾಕಿ. ಆದ್ರೆ ಏಲಕ್ಕಿ ಹಾಕಿದರೆ ವೆನ್ನಿಲಾ ಎಸೆನ್ಸ್ ಹಾಕಬಾರದು. ಇದಕ್ಕೆ ಅರ್ಧ ಕಪ್ ಹಾಲು ಹಾಕಿ. ಈಗ ಈ ಮಿಶ್ರಣ ನುಣ್ಣಗಾಗುವರೆಗೂ ರುಬ್ಬಿ. ಈಗ ಒಂದು ಬೌಲ್ ಗೆ ಮೆಲ್ಟೆಡ್ ಬಟರ್ / ಬೆಣ್ಣೆ ಹಾಕಿ ಅದಕ್ಕೆ ಪುಡಿ ಮಾಡಿದ ಸಕ್ಕರೆಯನ್ನ ರುಚಿಗೆ ತಕ್ಕಷ್ಟು ಹಾಕಿ. ಬೇಕಿದ್ರೆ ಕಂಡೆನ್ಸಡ್ ಮಿಲ್ಕ್ ಅನ್ನು ಸಹ ಸಕ್ಕರೆ ಬದಲಾಗಿ ಉಪಯೋಗಿಸಬಹುದು. ಈಗ ಇದನ್ನ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನ ಹಾಗೂ ಮೊದಲು ರುಬ್ಬಿಟ್ಟುಕೊಂಡ ಮಿಶ್ರಣವನ್ನ ಒಂದು ಅಥವಾ 1 ವರೆ ಕಪ್ ಮೈದಾ ಜೊತೆಗೆ ಗಂಟು ಇಲ್ಲದ ರೀತಿಯಲ್ಲಿ ಒಟ್ಟಿಗೆ ಸೇರಿಸಿ ಕಲಸಿ ದೋಸೆ ಹಿಟ್ಟಿನ ಹದಕ್ಕೆ ತನ್ನಿ. ಈಗ ಇದಕ್ಕೆ ಚಿಟಕೆ ಅಡಿಗೆ ಸೋಡಾ ಸೇರಿಸಿ ಕಲಸಿ. ಬಳಿಕ ಪ್ಯಾನ್ ಬಿಸಿ ಮಾಡಿ ಹಿಂದೆನ ವಿದಾನದಲ್ಲಿ ಹೇಳಿದಂತೆಯೇ ಪ್ಯಾನ್ ಕೇಕ್ ತಯಾರಿಸಿ. ರುಚಿಕರ ಪ್ಯಾನ್ ಕೇಕ್ ನೀವೂ ಟ್ರೈ ಮಾಡಿ ಅಭಿಪ್ರಾಯ ತಿಳಿಸಿ.

2. ಮಸಾಲಾ ಕುಷ್ಕಾ ರೈಸ್ (plain biryani without meat or vegetables)

ಬೇಕಾಗುವ ಪದಾರ್ಥಗಳು

ಅಕ್ಕಿ- 1 ಕಪ್
ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಮೆಣಸಿನ ಪುಡಿ- 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ- 4 ಚಮಚ
ತುಪ್ಪ ‌- 2 ಚಮಚ

ಚಕ್ಕೆ, ಲವಂಗ, ಏಲಕ್ಕಿ, ಮರಾಠಿ ಮೊಗ್ಗು, ಸೋಂಪು- ಸ್ವಲ್ಪ
ಉದ್ದಕ್ಕೆ ಹೆಚ್ಚಿಕೊಂಡ‌ ಈರುಳ್ಳಿ – 1
ಗರಂ ಮಸಾಲೆ ಪುಡಿ – 1/2 ಚಮಚ
ಹಸಿಮೆಣಸಿನಕಾಯಿ-2
ಟೊಮೆಟೋ-2
ಮೊಸರು-ಅರ್ಧ ಕಪ್
ಪುದೀನಾ, ಕೊತ್ತಂಬರಿ ಸೊಪ್ಪು
ಅರಿಶಿನ ಹುಡಿ- ಸ್ವಲ್ಪ
Saakshatv cooking recipes Kuska rice
Saakshatv cooking recipes Kuska rice

ಮಾಡುವ ವಿಧಾನ

ಅಕ್ಕಿಯನ್ನು ತೊಳೆದು ನೀರಿನಲ್ಲಿ 10ನಿಮಿಷ ನೆನೆಸಿಡಿ. ‌ನಂತರ ಒಲೆಯ ಮೇಲೆ ಕುಕ್ಕರ್ ಇಟ್ಟು, ಅದಕ್ಕೆ 4 ಚಮಚ ಎಣ್ಣೆ ಮತ್ತು 2 ಚಮಚ ತುಪ್ಪ ‌ಹಾಕಿ.‌ ಕಾದ ಬಳಿಕ ಅದಕ್ಕೆ ಚಕ್ಕೆ ಲವಂಗ, ಎಲಕ್ಕಿ, ಮರಾಠಿ ಮೊಗ್ಗು, ಸೋಂಪು ಹಾಕಿ 30 ಸೆಕೆಂಡ್ ಕೆಂಪಗಾಗುವವರೆಗೆ ಹುರಿಯಿರಿ.
ಕತ್ತರಿಸಿದ ಹಸಿಮೆಣಸಿನ ಕಾಯಿ ಸೇರಿಸಿ 30 ಸೆಕೆಂಡ್ ‌ಹುರಿಯಿರಿ. ಕತ್ತರಿಸಿ ಇಟ್ಟುಕೊಂಡ ಈರುಳ್ಳಿ ಪುದೀನ ಸೇರಿಸಿ ಮಧ್ಯಮ ಜ್ವಾಲೆಯಲ್ಲಿ ‌ 3 ನಿಮಿಷ ಹುರಿಯಿರಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 30‌ ಸೆಕೆಂಡ್ ‌ಹುರಿಯಿರಿ. ನಂತರ ಕತ್ತರಿಸಿದ ಟೊಮೆಟೊ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಟೊಮೆಟೊ ಮೃದುವಾಗುವವರೆಗೆ ಬೇಯಿಸಿ. ‌
Saakshatv cooking recipes Kuska rice

ನಂತರ ಅದಕ್ಕೆ ಅರಿಶಿನ ಪುಡಿ, ಖಾರದ ಪುಡಿ, ಗರಂ ಮಸಾಲೆ ಪುಡಿ, ಮೊಸರು ಹಾಕಿ 5 ನಿಮಿಷ ಬೆರೆಸಿ. ನೆನೆಸಿಟ್ಟುಕೊಂಡ ಅಕ್ಕಿಯನ್ನು ಹಾಕಿ 2 ನಿಮಿಷ ಚೆನ್ನಾಗಿ ಬೆರೆಸಿ.ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ.
ಈಗ 2 ಬಟ್ಟಲು ನೀರು ಹಾಕಿ ಕುಕ್ಕರ್ ಮುಚ್ಚಳವನ್ನು ಮುಚ್ಚಿ 1-2 ವಿಸಿಲ್ ಕೂಗಿಸಿದರೆ ರುಚಿಕರವಾದ ಕುಷ್ಕಾ ರೈಸ್ ಸವಿಯಲು ಸಿದ್ಧ.

3. ಬಟಾಣಿ ರವೆ ಇಡ್ಲಿ  

ಬೇಕಾಗುವ ಸಾಮಗ್ರಿಗಳು

ಬಟಾಣಿ – 1ಕಪ್
ಸಾಸಿವೆ – 1 ಚಮಚ
ಸಣ್ಣಗೆ ಹೆಚ್ಚಿದ ಕರಿಬೇವಿನ ಸೊಪ್ಪು ಸ್ವಲ್ಪ
ಸಣ್ಣಗೆ ಕತ್ತರಿಸಿದ ಈರುಳ್ಳಿ 2
ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ – 6
ಚಿರೋಟಿ ರವೆ -1 ಕಪ್
ಗಟ್ಟಿ ಮೊಸರು – 1 ಕಪ್
ತುರಿದ ಕ್ಯಾರೆಟ್ – 1/2ಕಪ್
ಶುಂಠಿ – 1 ಇಂಚು
ರುಚಿಗೆ ತಕ್ಕಷ್ಟು ಉಪ್ಪು
ಅಗತ್ಯವಿರುವಷ್ಟು ನೀರು Saakshatv cooking recipes Rava idli

Saakshatv cooking recipes Rava idli

ಮಾಡುವ ‌ವಿಧಾನ

ಮೊದಲಿಗೆ ಬಟಾಣಿಯನ್ನು ಬೇಯಿಸಿ ಇಟ್ಟುಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಬಳಿಕ ಅದಕ್ಕೆ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. ಚಿರೋಟಿ ರವೆ ಸೇರಿಸಿ ಕೆಂಪಗಾಗುವವರೆಗೆ ಚೆನ್ನಾಗಿ ಹುರಿಯಿರಿ.

Saakshatv cooking recipes Rava idli

ಈಗ ಅದಕ್ಕೆ ಕ್ಯಾರೆಟ್, ಸಣ್ಣಗೆ ತುರಿದ ಶುಂಠಿ, ಬೇಯಿಸಿದ ಬಟಾಣಿ, ಗಟ್ಟಿ ಮೊಸರು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಗತ್ಯವಿರುವಷ್ಟು ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ. 20 ನಿಮಿಷ ಹಾಗೆಯೇ ಬಿಡಿ. ಬಳಿಕ ಇಡ್ಲಿ ಪಾತ್ರೆಯಲ್ಲಿ 20 ನಿಮಿಷ ಬೇಯಿಸಿ. ಈಗ ರುಚಿಕರವಾದ ಬಟಾಣಿ ರವೆ ಇಡ್ಲಿ ಸವಿಯಲು ರೆಡಿ.

4. ಮನೆಯಲ್ಲೇ ತಯಾರಿಸಿ ಗೋಬಿ ಮಂಚೂರಿ

ಬೇಕಾಗುವ ವಸ್ತುಗಳು
ಸ್ವಚ್ಛಗೊಳಿಸಿದ  ಹೂಕೋಸು(ಗೋಬಿ)  – 1 ಬೌಲ್
ಕಾರ್ನ್ ಪ್ಲೋರ್ – 1/2 ಕಪ್
ಜೋಳದ ಹಿಟ್ಟು – 2 ಚಮಚ
ಅಕ್ಕಿ ಹಿಟ್ಟು – 1 ಚಮಚ
ಮೆಣಸಿನ ಪುಡಿ  1/2-1 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಬೆಳ್ಳುಳ್ಳಿ  ಎಸಳು‌ – 8-10
ಹೆಚ್ಚಿದ ಈರುಳ್ಳಿ – 1/4 ಕಪ್
ಹೆಚ್ಚಿದ ಹಸಿಮೆಣಸಿನ ಕಾಯಿ – 4-5
ಚಿಕ್ಕದಾಗಿ ಹೆಚ್ಚಿದ ಶುಂಠಿ – 1ಚಮಚ
ಹೆಚ್ಚಿದ ದೊಣ್ಣೆ ಮೆಣಸಿನ ಕಾಯಿ – 1/2 ಕಪ್
ಟೊಮೆಟೋ ಸಾಸ್ – 4-5 ಚಮಚ
ಚಿಲ್ಲಿ ಸಾಸ್ – 2-3 ಚಮಚ
ಸೋಯಾ ಸಾಸ್ – 2 ಚಮಚ
ಮೆಣಸಿನ ಪುಡಿ  1/2-1 ಚಮಚ
ಕರಿಮೆಣಸಿನ ಪುಡಿ – 1/4 ಚಮಚ

Saakshatv cooking Gobi Manchurian

ಮಾಡುವ ವಿಧಾನ
ಮೊದಲಿಗೆ ಸ್ವಚ್ಛಗೊಳಿಸಿದ ಹೂಕೋಸನ್ನು 2 ನಿಮಿಷ ಕುದಿಯುವ ಉಪ್ಪು ನೀರಿನಲ್ಲಿ ಬೇಯಿಸಿ. ನಂತರ ನೀರು ಸೋಸಿ ಪಕ್ಕಕ್ಕಿಡಿ.

ಈಗ ಸಾಸ್ ತಯಾರಿಸಲು 2 ಟೀಸ್ಪೂನ್ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ಬಿಸಿ ಮಾಡಿ ನುಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಮತ್ತು ಶುಂಠಿ ಸೇರಿಸಿ ಹುರಿಯಿರಿ. ನಂತರ ಕತ್ತರಿಸಿದ ಈರುಳ್ಳಿ, ಹಸಿ ಮೆಣಸು ಮತ್ತು ದೊಣ್ಣೆ ಮೆಣಸು ಸೇರಿಸಿ ಹುರಿಯಿರಿ. ನಂತರ ಮೆಣಸಿನ ಪುಡಿ ಮತ್ತು ಕರಿ ಮೆಣಸಿನ ಪುಡಿ ಸೇರಿಸಿ ಕಲಸಿ. ಈಗ‌ ಅದಕ್ಕೆ ಟೊಮೆಟೊ ಸಾಸ್ ಮತ್ತು ಸೋಯಾ ಸಾಸ್ ಸೇರಿಸಿ. ಸ್ವಲ್ಪ ಮಂದವಾಗುವವರೆಗೆ ಮಗುಚಿ. ಉಪ್ಪು ಸೇರಿಸಿ ಮತ್ತೆ ಚೆನ್ನಾಗಿ ಕಲಸಿ. ಈಗ ಸಾಸ್ ತಯಾರಾಗಿದೆ.

ಈಗ ಒಂದು ಬೌಲ್ ಗೆ  ಕಾರ್ನ್ ಪ್ಲೋರ್ ಹಾಕಿ, ಜೋಳದ ಹಿಟ್ಟು, ಅಕ್ಕಿ ಹಿಟ್ಟು,  ಮೆಣಸಿನ ಪುಡಿ, ಉಪ್ಪು ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಲಸಿ.  ಈ ಮಿಶ್ರಣಕ್ಕೆ ಗೋಬಿ ಚೂರುಗಳನ್ನು ಹಾಕಿ ಕಲಸಿ.ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ನಂತರ  ಹೂಕೋಸಿನ ಚೂರುಗಳನ್ನು  ಗರಿ ಗರಿಯಾಗುವವರೆಗೆ ಮತ್ತು ಹೊಂಬಣ್ಣ ಬರುವವರೆಗೆ ಕಾಯಿಸಿ ತೆಗೆಯಿರಿ.

Saakshatv cooking Gobi Manchurian

ನಂತರ  ಮೊದಲೇ ತಯಾರಿಸಿಟ್ಟ ಸಾಸ್ ಗೆ ಕರಿದ ಗೋಬಿ ಸೇರಿಸಿ,  ದೊಡ್ಡ ಉರಿಯಲ್ಲಿ ಚೆನ್ನಾಗಿ ಕಲಸಿ.  ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ.‌ ಟೇಸ್ಟೀಯಾದ ಗೋಬಿ ಮಂಚೂರಿ ಸವಿಯಲು ರೆಡಿ

5. ತೊಗರಿ ಬೇಳೆ ಹಾಕದೆ  ಸ್ಪೆಷಲ್ ಟೊಮೆಟೊ ಸಾರು

ಟೊಮೇಟೊ                ನಾಲ್ಕು
ತೆಂಗಿನ ಕಾಯಿ ತುರಿ      ಐದು ಚಮಚ
ಹಸಿ ಮೆಣಸು             2
ಕೊತ್ತಂಬರಿ ಸೊಪ್ಪು     ಸ್ವಲ್ಪ
ಅರಿಶಿನ                      ಚಿಟಿಕೆ
ಧನಿಯ                      2 ಚಮಚ
ಜೀರಿಗೆ                       1/2 ಚಮಚ
ಮೆಂತ್ಯ                       1/4 ಚಮಚ
ಬ್ಯಾಡಗಿ  ಮೆಣಸು     4
ತುಪ್ಪ                         1 ಚಮಚ
ಎಣ್ಣೆ    1 ಚಮಚ
ಉಪ್ಪು ರುಚಿಗೆ ತಕ್ಕಷ್ಟು.
ಹುಣಿಸೆ ಹಣ್ಣು ಸ್ವಲ್ಪ,
ಬೆಲ್ಲ ಸ್ವಲ್ಪ
ಒಗ್ಗರಣೆಗೆ
ಇಂಗು ಚಿಟಿಕೆಯಷ್ಟು ,
ಸಾಸಿವೆ  1/4 ಚಮಚ
ಒಂದು ಒಣ ಕೆಂಪು ಮೆಣಸು
ಕರಿಬೇವಿನ ಸೊಪ್ಪು    ಸ್ವಲ್ಪ
Saakshatv cooking recipes tomato rasam
Saakshatv cooking recipes tomato rasam

ಟೊಮೇಟೊಗಳನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿಕತ್ತರಿಸಿ ಇಟ್ಟು ಕೊಳ್ಳಿ. ಇದರಿಂದ  ಒಂದು ಕಪ್ ನಷ್ಟು   ಟೊಮೇಟೊ ಚೂರುಗಳನ್ನು ಪ್ರತ್ಯೇಕವಾಗಿ ತೆಗೆದಿಡಿ.

ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಬಿಸಿ ಮಾಡಿ. ಅದಕ್ಕೆ  ಧನಿಯ, ಜೀರಿಗೆ, ಮೆಂತೆ ಮತ್ತು ಬ್ಯಾಡಗಿ ಮೆಣಸು ಹಾಕಿ ಹುರಿದು  ಒಂದು ಪ್ಲೇಟ್ ಮೇಲೆ ಹರಡಿ. ಅದನ್ನು ಚೆನ್ನಾಗಿ ಆರಲು ಬಿಡಿ.
ಆರಿದ ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ ಜೊತೆಗೆ ಹಸಿ ಮೆಣಸಿನಕಾಯಿ, ಕಾಯಿ ತುರಿ, ಹುಣಿಸೇಹಣ್ಣು, ಬೆಲ್ಲ,   ಟೊಮೇಟೊ, ಅರಿಶಿನ, ಉಪ್ಪು ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿ.
Saakshatv cooking recipes tomato rasam
ಈಗ ಒಂದು ಪ್ಯಾನ್ ಇಟ್ಟು ಅದು  ತುಪ್ಪ ಹಾಕಿ. ತುಪ್ಪ ಕಾದ ಮೇಲೆ ಇಂಗು,  ಸಾಸಿವೆ, ಕರಿಬೇವಿನ ಸೊಪ್ಪು ಮತ್ತು  ಒಣ ಮೆಣಸಿನ ಕಾಯಿ ಒಗ್ಗರಣೆ ಕೊಟ್ಟು ಇದಕ್ಕೆ ಪ್ರತ್ಯೇಕವಾಗಿ ತೆಗೆದಿಟ್ಟ  ಟೊಮೇಟೊ ಹಾಕಿ ಹುರಿಯಿರಿ. ಇದಕ್ಕೆ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಪುನಃ ಹುರಿಯಿರಿ. ಈಗ ಅದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ. ನಿಮಗೆ ಎಷ್ಟು ಬೇಕು ಅಷ್ಟು  ನೀರು ಸೇರಿಸಿ, ಚೆನ್ನಾಗಿ ಕುದಿಸಿ.  ನಂತರ ಚಿಕ್ಕದಾಗಿ ‌ಕತ್ತರಿಸಿದ ಕೊತ್ತಂಬರಿ ಸೊಪ್ಪು ಉದುರಿಸಿ.ರುಚಿಯಾದ ಸ್ಪೆಷಲ್ ಟೊಮೆಟೊ ಸಾರು ರೆಡಿಯಾಗಿದೆ. ಇದನ್ನು ಅನ್ನದ ಜೊತೆ ಕಲಸಿ ಊಟ ಮಾಡಿ.

ಇನ್ನಷ್ಟು ಅಡುಗೆ ರೆಸಿಪಿಗಾಗಿ  ಗೂಗಲ್ ನಲ್ಲಿ Saakshatv cooking ಎಂದು ಸರ್ಚ್ ಮಾಡಿ..

5 ಸುಲಭ , ರುಚಿಕರ , ಆರೋಗ್ಯಕರ ಹಾಗೂ ಅಡುಗೆ ರೆಸಿಪಿಗಳು ನಿಮಗಾಗಿ..!

5 ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ..!

Tags: #saakshatvcookingFood
ShareTweetSendShare
Join us on:

Related Posts

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

by Shwetha
March 30, 2026
0

ತಿಂಗಳಿಡೀ ಕತ್ತೆ ಥರ ದುಡಿಯೋದೆ ಒಂದನೇ ತಾರೀಖು ಬರೋ ಆ ಸಂಬಳದ ಮೆಸೇಜ್ ನೋಡೋಕೆ ಅಲ್ವಾ? ಆದ್ರೆ ಏಪ್ರಿಲ್ ಒಂದರಿಂದ ನಮ್ಮ ನಿಮ್ಮೆಲ್ಲರ ಸಂಬಳದ ರೂಲ್ಸ್ ಕಂಪ್ಲೀಟ್...

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

by Shwetha
March 30, 2026
0

ರಾಜ್ಯದಲ್ಲಿ ಬಜೆಟ್ ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಚಿವರು ಹಾಗೂ ಶಾಸಕರು ಸಂಪೂರ್ಣವಾಗಿ ಚುನಾವಣಾ ಮೂಡ್‌ಗೆ ಜಾರಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ...

ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

by Shwetha
March 30, 2026
0

ಮುಂಬರುವ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದ್ದು ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು...

ಖಾಲಿ ಇರುವ 8 ಸಾವಿರ ಪಿಎಸ್ಐ ಹುದ್ದೆ ಭರ್ತಿ ಅಪರಾಧಿಗಳ ವಿರುದ್ಧ ನಿಷ್ಠುರ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ಖಾಲಿ ಇರುವ 8 ಸಾವಿರ ಪಿಎಸ್ಐ ಹುದ್ದೆ ಭರ್ತಿ ಅಪರಾಧಿಗಳ ವಿರುದ್ಧ ನಿಷ್ಠುರ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

by Shwetha
March 30, 2026
0

ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಪಿಎಸ್ಐಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಯುವಜನತೆಗೆ ಹಾಗೂ ಪೊಲೀಸ್ ಇಲಾಖೆಗೆ ಭರ್ಜರಿ ಸಿಹಿಸುದ್ದಿ...

ಎಚ್ಚರ ನಿಮ್ಮ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಇದ್ದರೆ ಜೈಲು ಫಿಕ್ಸ್ ಇಂದೇ ಈ ಕಾನೂನು ತಿಳಿದುಕೊಳ್ಳಿ

ಎಚ್ಚರ ನಿಮ್ಮ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಇದ್ದರೆ ಜೈಲು ಫಿಕ್ಸ್ ಇಂದೇ ಈ ಕಾನೂನು ತಿಳಿದುಕೊಳ್ಳಿ

by Shwetha
March 30, 2026
0

ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇರುವುದು ಸಾಮಾನ್ಯ. ಗ್ಯಾಸ್ ಖಾಲಿಯಾದರೆ ಊಟಕ್ಕೆ ಪರದಾಡಬೇಕು ಎಂಬ ಭಯದಿಂದ ಅನೇಕರು ಮೂರ್ನಾಲ್ಕು ಸಿಲಿಂಡರ್ ಗಳನ್ನು ಅಡ್ವಾನ್ಸ್ ಆಗಿ ಬುಕ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram