ADVERTISEMENT
Thursday, June 19, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕರೋನಾ ಮತ್ತು ನಾನು

admin by admin
June 22, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಕರೋನಾ ಮತ್ತು ನಾನು

ನಾನು ನಾನಾಗಿರುವ ನನ್ನ ಮನೋಧರ್ಮ ವನ್ನು ಮತ್ತಷ್ಟು ಹದಗೊಳಿಸಿ, ಜೀವನದ ಸತ್ಯಾಸತ್ಯತೆ ಹೃದ್ಯ ವಾಗುವಂತೆ ಮಾಡಿದ್ದು ಈ ಕರೋನ ಕಾಲ. “ಅನಾಯಾಸೇನ ಮರಣಂ” ಎಂಬಂತೆ ಆತ್ಮ ಮೋಕ್ಷ ಸೌಧವನ್ನೇರಬೇಕು ಎಂಬುದು ಎಲ್ಲರ ವಾಂಛೆ ಆಗಿದ್ದ ರೂ ಕೂಡಾ ಒಂದರೆಘಳಿಗೆ ರೋಗ ದ ಭೀತಿ ಮಾನವನನ್ನು ತಲ್ಲಣಿಸದಿರದು.

Related posts

ನೀವು ತುಂಬಾ ಗ್ರೇಟ್… ನಾನು ನಿಮ್ಮಂತೆಯೇ ಆಗಲು ಯತ್ನಿಸುತ್ತೇನೆ: G7 ಶೃಂಗಸಭೆಯಲ್ಲಿ ಮೆಲೋನಿಯ ಮೋದಿ ಮೆಚ್ಚುಗೆ

ನೀವು ತುಂಬಾ ಗ್ರೇಟ್… ನಾನು ನಿಮ್ಮಂತೆಯೇ ಆಗಲು ಯತ್ನಿಸುತ್ತೇನೆ: G7 ಶೃಂಗಸಭೆಯಲ್ಲಿ ಮೆಲೋನಿಯ ಮೋದಿ ಮೆಚ್ಚುಗೆ

June 19, 2025
ಸೋಯಾ 65 ಬಿರಿಯಾನಿ ರೆಸಿಪಿ ಒಮ್ಮೆ Try ಮಾಡಿ

ಸೋಯಾ 65 ಬಿರಿಯಾನಿ ರೆಸಿಪಿ ಒಮ್ಮೆ Try ಮಾಡಿ

June 19, 2025


ನನ್ನ ಬದುಕಿನ ನೋವನನ್ನೆಲ್ಲಾ ಯಾವುದೋ ಮಾಧ್ಯಮದಿಂದ ಮರೆಯುತ್ತಾ…ಅದೇ ಗುಂಗಿನಲ್ಲಿ ಮೆರೆಯುತ್ತಾ…ದಿನ ದಿನವೂ ಹೊಸತನಕ್ಕೆ ಒಡ್ಡಿ ಕೊಳ್ಳುವ ನನ್ನ ಜೀವನ ವಿಕಸನ ಕ್ರಮಕ್ಕೊಂದು ಹೊಸ ಆಯಾಮವನ್ನು ಕೊಟ್ಟು, ಯಾಂತ್ರಿಕ ಜೀವನಕ್ಕೊಂದು ಬ್ರೇಕ್ ಕೊಟ್ಟ ಈ ಕರೋನದಿಂದ ನಾ ಕಲಿತದ್ದು ಕವಡೆಯಷ್ಟು ಮಾತ್ರ…ಈ ಸಮಯವನ್ನು ನಾನು ದಿನದ ಅರ್ದ ಗಂಟೆ ನಾನು ನಾನಾಗಿರುವುದಕ್ಕಾಗಿ ಬಳಸಿ ಕೊಂಡ “Quality Time” ನ ವಿಸ್ತರಣೆ ಎಂದರೂ ಅತಿಶಯೋಕ್ತಿ ಯಾಗಲಾರದು.
ಸ್ಟಂತ ಅವಜ್ಞೆ ಯಿಂದಲೋ….ಇತರರ ಆಘಾತ ಗಳಿಂದಲೋ….ಕಳೆಗುಂದಿದ ನನ್ನ ಬದುಕಿಗೊಂದು ಈ ಕಾಲ ಹೊಸ ಚಾಲನೆ ಯನ್ನು ಕೊಟ್ಟು ಸಮಷ್ಟಿಯ ಕದವ ತಟ್ಟಿ….ಬಾಗಿಲ ತೆರೆದ ಹೊಸ ತನದ ಅನುಭವದ ಘಮ ನನ್ನ ಬದುಕಿನುದ್ದಕ್ಕೂ ಹಿಂಬಾಲಿಸುವಂತೆ ಮಾಡಿದ್ದಂತೂ ದಿಟವೇ ಸರಿ…


ಮಾಧ್ಯಮಗಳ ವಾರ್ತಾ ವೈಖರಿ… ಹರಿತವಾದ ತರ್ಕಭಾಷೆ…ಸರಕಾರದ ಹೊಸ ಒಡಂಬಡಿಕೆ… ಭೂಷಣ ಪ್ರಾಯವಲ್ಲದ ಪ್ರದೂಷಿತ ಹೇಳಿಕೆ…ಕರೋನ ಮಹಾಮಾರಿಯ ಪರಮಾರ್ಜನೆಗೆ ಹೋರಾಡುವುದ ಬಿಟ್ಟು ಕತ್ತಿ ಮಸೆಯುವ ಚಾಪಲ್ಯ ತೋರುವ ಸಾಮಾಜಿಕ ಪರಿಸ್ಥಿತಿಯ ನಡುವೆ ನನ್ನ ಮನಸ್ಥಿತಿ ಕಂಡು ಕೊಂಡಿದ್ದು ಇಷ್ಟೇ….
ಪರರನ್ನು ನೋಯಿಸುವುದು
ಅಲ್ಲ ಗೆಲುವು……
ಎಲ್ಲರನು ಗೆಲ್ಲುವುದೇ
ಮಹಾ ಗೆಲುವು….!!!.ಎಂಬುವುದಾಗಿ
ಪೃಕೃತಿ ಕೊಟ್ಟ ಈ ಸವಾಲನ್ನು ಮನುಷ್ಯ ಶಕ್ತಿ–ಯುಕ್ತಿ–ಬುದ್ದಿ ಸಾಮರ್ಥ್ಯ ತತ್ವಾದರ್ಶಗಳ ಸಾಧನೆಗೆ ವಿನಿಯೋಗಿಸುವುದು ಬಿಟ್ಟು ದೈತ್ಯ ಧೋರಣೆಯ ತೋರಿ ಭೂಮ್ಯಾಕಾಶವ ಅಳೆಯ ಹೊರಟವನಂತೆ ವರ್ತಿಸುವುದು ನಿಜಕ್ಕೂ ಕರೋನ ಸಂಧರ್ಭಕ್ಕೆ ಅಪಸವ್ಯವೇ ಸರಿ. ಕರೋನಾದ ಸಂಧಿಗ್ಧತೆ ಯನ್ನು ಕೆಲವರು ಬಳಸಿಕೊಂಡ ರೀತಿ….ಅವರುಗಳ ನೀತಿ…ಭೀತಿಯ ವಾತಾವರಣ ದಲ್ಲಿಯೂ ನನಗೊಂದು ರೀತಿಯ ಹೊಸ ನೀತಿ ಪಾಠ ದೊರೆ ತದ್ದಂತೂ ಸುಳ್ಳಲ್ಲ.ಅಧಿಕಾರ ಲಾಲಸೆ…ದುಡ್ಡಿನ ಮದ… ವಿಲಾಸೀ ಜೀವನ…ಮುಖ ನೋಡಿ ಮಾತು … ಧೀರ್ಘ ದ್ವೇಷ…ಕಪಟ…ಮೋಸ … ಇದೆಲ್ಲಾ ಮಾನವನ ಅಮಾನುಷತೆಗೆ ಪ್ರಕೃತಿ ಕೊಟ್ಟ ಉತ್ತರ ಎಂದು ನಾನು ಪರಿಭಾವಿಸಿರುವುದರಿಂದಲೇ ಕರೋನಾದ ಸಮಯ ನನಗೆ ಜಟಿಲವಾಗಿ ಕಾಡದೆ ಆತ್ಮವಿಮರ್ಶೆಯ ಕವಲುದಾರಿ ಯಂತೆ ಕಂಡಿತು.

ನಾನು ಈ ಸಮಯದಲ್ಲಿ ನನಸಾಗದ ಕನಸನ್ನು ಕಾಣದೆ…. ಈಡೇರದ ಆಸೆಗಳಿಗೆ ಒಡಂಬಡದೆ..ನಂದನವನದಲ್ಲಿ ಕುಳಿತು ರಾಮರಾಜ್ಯದ ಪರಿಕಲ್ಪನೆ ಮಾಡದೆ ಈ ಮಳೆಗಾಲದ ಖರ್ಚಿ ಗಾಗುವಷ್ಟು ಹಪ್ಪಳ ಸಂಡಿಗೆ ಉಪ್ಪಿನಕಾಯಿ ಮಾಡುತ್ತಾ ನಾನು ಆರಾಧಿಸುವ ಯಕ್ಷಕಲೆ ಯಲ್ಲಿ ಸಮಯವನ್ನು ವಿನಿಯೋಗಿಸುತ್ತ ಸ್ನೇಹದ ಬಾಗಿಲನ್ನು ತೆರೆದಿಟ್ಟು ತಟಸ್ಥ ವಾಗಿ ಬೆಳವಣಿಗೆಯನ್ನು ನಿರೀಕ್ಷಿಸುತಲಿದ್ದೆ. ಈ ಪರಿರ್ತನೀಯ ಜಗತ್ತಿನಲ್ಲಿ ಬದಲಾಗ ಬೇಕಾಗಿರುವುದು ನಾನೇ ಹೊರತು ಜಗತ್ತಲ್ಲ ಎಂಬ ಸತ್ಯದರ್ಶನ ದೊಂದಿಗೆ ಜನಪದೀಯ ನಿಯಮ ಸಡಿಲಗೊಳ್ಳ ಬಹುದು ಆದರೆ ಆ ನಿಯಾಮಕನ ನಿಯಮ ಸಡಿಲಿಕೆಗೊಂಡೀತೇ ಎಂಬದೇ ನನ್ನ ಜಿಜ್ಞಾಸೆ…!!!

ಮಾಲತಿ.ಜಿ.ಪೈ  ಕಾರ್ಕಳ

Tags: #IndiaFightsCorona#ಕರ್ನಾಟಕcoronavirusindiakarnatakaಭಾರತ
ShareTweetSendShare
Join us on:

Related Posts

ನೀವು ತುಂಬಾ ಗ್ರೇಟ್… ನಾನು ನಿಮ್ಮಂತೆಯೇ ಆಗಲು ಯತ್ನಿಸುತ್ತೇನೆ: G7 ಶೃಂಗಸಭೆಯಲ್ಲಿ ಮೆಲೋನಿಯ ಮೋದಿ ಮೆಚ್ಚುಗೆ

ನೀವು ತುಂಬಾ ಗ್ರೇಟ್… ನಾನು ನಿಮ್ಮಂತೆಯೇ ಆಗಲು ಯತ್ನಿಸುತ್ತೇನೆ: G7 ಶೃಂಗಸಭೆಯಲ್ಲಿ ಮೆಲೋನಿಯ ಮೋದಿ ಮೆಚ್ಚುಗೆ

by Shwetha
June 19, 2025
0

ಇತ್ತೀಚೆಗೆ ಜರುಗಿದ G7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿಯ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿ ನಡುವಿನ ಸೌಹಾರ್ದಭರಿತ ಭೇಟಿಯು ಸೋಶಿಯಲ್ ಮೀಡಿಯಾ ಮತ್ತು ರಾಜಕೀಯ...

ಸೋಯಾ 65 ಬಿರಿಯಾನಿ ರೆಸಿಪಿ ಒಮ್ಮೆ Try ಮಾಡಿ

ಸೋಯಾ 65 ಬಿರಿಯಾನಿ ರೆಸಿಪಿ ಒಮ್ಮೆ Try ಮಾಡಿ

by Shwetha
June 19, 2025
0

ಸೋಯಾ 65 ಬಿರಿಯಾನಿ ತಯಾರಿಸಲು ಬೇಕಾಗುವ ಸಾಮಗ್ರಿಗಳು: * ಸೋಯಾ 65 ಗಾಗಿ: * 1 ಕಪ್ ಸೋಯಾ ಚಂಕ್ಸ್ * 2 ಟೇಬಲ್ಸ್ಪೂನ್ ಕಾರ್ನ್ಫ್ಲೋರ್ *...

ಕತ್ತು ನೋವಿಗೆ ಯಾವ  ಮನೆ ಮದ್ದುಗಳು Best?

ಕತ್ತು ನೋವಿಗೆ ಯಾವ ಮನೆ ಮದ್ದುಗಳು Best?

by Shwetha
June 19, 2025
0

ಕತ್ತು ನೋವಿಗೆ ಕೆಲವು ಮನೆ ಮದ್ದುಗಳು ಇಲ್ಲಿವೆ * ಬಿಸಿ ಅಥವಾ ತಣ್ಣನೆಯ ಶಾಖೋಪಚಾರ: ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು 15-20 ನಿಮಿಷಗಳ ಕಾಲ ಐಸ್...

ಮಂಡ್ಯದ ಮೇಲುಕೋಟೆಯಲ್ಲಿ ನೆಲೆನಿಂತ ಶ್ರೀ ಚೆಲುವನಾರಾಯಣ ಸ್ವಾಮಿಯ ಇತಿಹಾಸದ ಅನಾವರಣ

ಮಂಡ್ಯದ ಮೇಲುಕೋಟೆಯಲ್ಲಿ ನೆಲೆನಿಂತ ಶ್ರೀ ಚೆಲುವನಾರಾಯಣ ಸ್ವಾಮಿಯ ಇತಿಹಾಸದ ಅನಾವರಣ

by Shwetha
June 19, 2025
0

ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯವು ಕರ್ನಾಟಕದ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿದೆ. ಈ ದೇವಾಲಯವು ವೈಷ್ಣವ ಸಂಪ್ರದಾಯಕ್ಕೆ ಬಹಳ ಮಹತ್ವದ್ದಾಗಿದೆ ಇತಿಹಾಸ * ಪುರಾಣಗಳ ಪ್ರಕಾರ, ಬ್ರಹ್ಮನು ವಿಷ್ಣುವಿನ...

ತಾಂತ್ರಿಕ ದೋಷದ ಕಾರಣಕ್ಕೆ ಏರ್ ಇಂಡಿಯಾದ 7 ಅಂತಾರಾಷ್ಟ್ರೀಯ ವಿಮಾನಗಳು ರದ್ದು!

ತಾಂತ್ರಿಕ ದೋಷದ ಕಾರಣಕ್ಕೆ ಏರ್ ಇಂಡಿಯಾದ 7 ಅಂತಾರಾಷ್ಟ್ರೀಯ ವಿಮಾನಗಳು ರದ್ದು!

by Shwetha
June 18, 2025
0

ಏರ್ ಇಂಡಿಯಾದ ಅಂತಾರಾಷ್ಟ್ರೀಯ ಹಾರಾಟಗಳು ತಾಂತ್ರಿಕ ದೋಷ ಸೇರಿದಂತೆ ವಿವಿಧ ಕಾರಣಗಳಿಂದ ಇಂದು ಗಂಭೀರ ಸಮಸ್ಯೆಯಾಗಿ ಕಾಡಿದೆ. ಒಟ್ಟು 7 ಅಂತಾರಾಷ್ಟ್ರೀಯ ವಿಮಾನಗಳನ್ನು ಏರ್ ಇಂಡಿಯಾ ರದ್ದುಗೊಳಿಸಿರುವುದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram