ಬಳ್ಳಾರಿ : ಗಣಿನಾಡು ಬಳ್ಳಾರಿಯಲ್ಲಿ ಕೊರೊನಾ ಮರಣ ಮೃದಂಗ ಮುಂದುವರೆದಿದೆ. ಬಳ್ಳಾರಿ ಕೊರೊನಾ ಹೊಡೆತಕ್ಕೆ 8 ಜನ ಬಲಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹೇಳಿದ್ದಾರೆ.
ಇದರ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಕೊರೊನಾ ಸೋಂಕಿನಿಂದ ನಿನ್ನೆ ನಾಲ್ಕು ಇವತ್ತು ಏಂಟು ಜನರು ಸಾವನ್ನಪ್ಪಿದ್ದಾರೆ. ವಿವಿಧ ಖಾಯಿಲೆಯಿಂದ ಬಳಲುತ್ತಿದ್ದ ಎಂಟು ಜನರು ಸಾವನ್ನಪ್ಪಿದ್ದಾರೆ. ಈವರೆಗೂ 14 ಇದ್ದ ಸಾವಿನ ಸಂಖ್ಯೆ ಇವತ್ತಿನ ಎಂಟು ಪ್ರಕರಣ ಸೇರಿ ಒಟ್ಟು 22 ಕ್ಕೆ ಏರಿಕೆಯಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ನಾಲ್ಕು ಮತ್ತು ವಿಮ್ಸ್ ಆಸ್ಪತ್ರೆಯಲ್ಲಿ ನಾಲ್ಕು ಜನರ ಸಾವಾಗಿದೆ.
ಹೊಸಪೇಟೆಯ ಆಜಾದ್ ನಗರದ 66 ವರ್ಷದ ನಿವಾಸಿ ಪುರುಷ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು- ಸ್ಯಾರಿ ಕೇಸ್. ಕೊಪ್ಪಳ ಜಿಲ್ಲೆಯ ಗಂಗಾವತಿಯ ರಂಗಾಪುರ ಕ್ಯಾಂಪ್ ನ 43 ವರ್ಷ ವ್ಯಕ್ಯಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಆಂಧ್ರಪ್ರದೇಶದ ಆದೋನಿಯ 52 ವರ್ಷದ ಮಹಿಳೆ, ಹೃದಯ ಸಂಬಂಧಿ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡ. ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದ 56 ವರ್ಷದ ಪುರುಷ ವ್ಯಕ್ತಿ ಸಾವು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.