Corona ಕೊರೊನಾ ಹೆಚ್ಚಳ | ಪ್ರಧಾನಿ ಮೋದಿ ತುರ್ತುಸಭೆ, ಲಾಕ್ ಡೌನ್ ಬಗ್ಗೆ ಚರ್ಚೆ..?
ನವದೆಹಲಿ : ಭಾರತದಲ್ಲಿ ಕೊರೊನಾ ಎರಡನೇ ಅಲೆ ಹುಚ್ಚು ಕುದುರೆಯಂತೆ ದಿಕ್ಕಾಪಾಲಾಗಿ ಓಡುತ್ತಿದೆ. ಸಿಕ್ಕ ಸಿಕ್ಕವರ ದೇಹ ಹೊಕ್ಕುತ್ತಿರುವ ಹೆಮ್ಮಾರಿ ವೈರಸ್ ಪ್ರತಿ ದಿನ ಸಾವಿರಕ್ಕೂ ಹೆಚ್ಚು ಮಂದಿಯನ್ನ ಬಲಿ ಪಡೆದುಕೊಳ್ಳುತ್ತಿದೆ.
ನಿನ್ನೆ ದೇಶದಲ್ಲಿ ಕೊರೊನಾ ಸ್ಫೋಟವಾಗಿದ್ದು, 2 ಲಕ್ಷ 70 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ಕರೆದಿದ್ದಾರೆ.
ಕೊರೊನಾ ಸ್ಫೋಟ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳೊಂದಿಗೆ ತುರ್ತುಸಭೆ ನಡೆಸಲಿದ್ದಾರೆ. ಈ ವೇಳೆ ದೇಶದಲ್ಲಿ ಕೊರೊನಾ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಯಾವ ರಾಜ್ಯದಲ್ಲಿ ಯಾವ ರೀತಿ ಪರಿಸ್ಥಿತಿ ಇದೆ. ಎಲ್ಲಿ ಕಠಿಣ ನಿಯಮಗಳು ಅನಿವಾರ್ಯ.. ಲಾಕ್ ಡೌನ್ ಅನಿವಾರ್ಯವೇ.. ಅಥವಾ ಲಾಕ್ ಡೌನ್ ಹೊರತಾಗಿ ಬೇರೆ ಮಾರ್ಗ ಏನಾದ್ರೂ ಇದಿಯಾ ಎಂಬ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.