ಓಂ ಶಕ್ತಿ ದೇಗುಲಕ್ಕೆ ಹೋಗಿಬಂದ ಭಕ್ತರಿಗೆ ಕರೋನಾ ಪಾಸಿಟಿವ್ Saaksha tv
ಮಂಡ್ಯ: ಓಂ ಶಕ್ತಿ ದೇಗುಲಕ್ಕೆ ಹೋಗಿಬಂದ ಶ್ರೀರಂಗಪಟ್ಟಣದ ಜನರಿಗೆ ಕರೋನಾ ಪಾಸಿಟಿವ್ ಬಂದಿದೆ ಎಂದು THO ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ತಮಿಳುನಾಡಿನ ಓಂ ಶಕ್ತಿ ದೇಗುಲಕ್ಕೆ ಹೋಗಿ ಬಂದ ಶ್ರೀರಂಗಪಟ್ಟಣದ ಭಕ್ತಾದಿಗಳಲ್ಲಿ 30 ಜನರಿಗೆ ಕರೋನ ಪಾಸಿಟಿವ್ ಎಂದು ದೃಡ ಪಟ್ಟಿದೆ. ಇವರನ್ನು ತಾಲೂಕಿನ ಸ್ಪತ್ರೆಗೆ ದಾಖಲಿಸಲಾಗಿದೆ. ಇದು ಭಕ್ತರಲ್ಲಿ ಆತಂಕತ ಮೂಡಿಸಿದೆ. ಓಂ ಶಕ್ತಿ ಗೆ ಹೋಗಿ ಬಂದವರ ಸಂಪರ್ಕಲ್ಲಿದ್ದ ಹಲವರಿಗೂ ಸೋಂಕು ಕಾಣಿಸಿಕೊಂಡಿದೆ. ಅವರನ್ನು ತಪಾಸಣೆಗೆ ಒಳಪಡಿಸಲಾಗಿದೆ.
ಇದರಿಂದ ಶ್ರೀರಂಗಪಟ್ಟಣದಲ್ಲಿ ಕರೋನಾ ಸ್ಪೋಟಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಓಂ ಶಕ್ತಿ ಹೋಗಿರುವರನ್ನು ಬರುವ ವೇಳೆ ತಪಾಸಣೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಎಂದು THO ವೆಂಕಟೇಶ್ ಹೇಳಿದರು.