ಚುನಾವಣೆಗೆ ಕೊರೊನಾ ( Corona ) ಹೆದರಿಕೊಂಡು ಓಡಿ ಹೋಗುತ್ತಾ : ಹೆಚ್ ಡಿಕೆ ಪ್ರಶ್ನೆ
ರಾಮನಗರ : ಚುನಾವಣೆಗೆ ಕೊರೊನಾ ಹೆದರಿಕೊಂಡು ಓಡಿ ಹೋಗುತ್ತಾ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಉಪ ಚುನಾವಣೆಗೆ ಕೊರೊನಾ ನಿಯಮಗಳು ಅನ್ವಯವಾಗಲ್ಲ ಎಂಬ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ರಾಮನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆ ಮಾಡಲಿದೆ. ಮಸ್ಕಿ ಮತ್ತು ಬೆಳಗಾವಿಯಲ್ಲಿ ಜೆಡಿಎಸ್ ಪಕ್ಷ ಸ್ಪರ್ಧಿಸಲಿದೆ ಎಂದು ತಿಳಿಸಿದರು.
ಇದೇ ವೇಳೆ ರಾಜ್ಯದಲ್ಲಿ ಕೊರೊನಾ ಹೆಚ್ಚಳದ ಬಗ್ಗೆ ಮಾತನಾಡಿ, ಕೋವಿಡ್ ತಡೆಗೆ ಸರ್ಕಾರ ನಿಯಮಗಳನ್ನ ತಂದಿದ್ದು, ಮುಂದೆ ಅನಾಹುತ ಆಗದಂತೆ ಸರ್ಕಾರ ನಿಯಮಗಳನ್ನ ತೆಗೆದುಕೊಳ್ಳಬೇಕು.
ನಮ್ಮ ಅನಕೂಲಗಳಿಗೆ ಬೇಕಾದಂತೆ ಕೊರೊನಾ ನಿಯಮಗಳನ್ನ ಮಾರ್ಪಾಡು ಮಾಡಿಕೊಂಡು ಅನಾಹುತಗಳಿಗೆ ದಾರಿ ಮಾಡಿಕೊಡಬಾರದು ಎಂದು ಸಲಹೆ ನೀಡಿದರು.