ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಮಿತಿ ಮೀರಿದ ಕೋವಿಡ್ ಹಾವಳಿ – ರಾಜ್ಯಕ್ಕೂ ಕಂಟಕ , ಹೈ ಅಲರ್ಟ್ ಆದದ ಬಿಬಿಎಂಪಿ
ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ, ರಾಜ್ಯಕ್ಕೂ ಕಂಟಕ ಎದುರಾಗಿದೆ.. ಮಹಾರಾಷ್ಟ್ರ ಕೇರಳದಿಂದ ಗಡಿ ರಾಜ್ಯಗಳಿಗೆ ಪ್ರವೇಶಿಸುವ ್ರಯಾಣಿಕರಿಂದ ಆತಂಕ ಎದುರಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬಿಬಿಎಂಪಿಯು ಕಠಿಣ ಕ್ರಮಕ್ಕೆ ಮುಂದಾಗಿದೆ.. ಕೇರಳ ಹಾಗೂ ಮಹಾರಾಷ್ಟ್ರ ದಿಂದ ಬಂದವರ ಮೇಲೆ ಬಿಬಿಎಂಪಿ ಹದ್ದಿನ ಕಣ್ಣಿಟ್ಟಿದೆ.
ಪ್ಯಾರೇ ದೇಶ ವಾಸಿಯೋ ಗಮನಿಸಿ – ಮತ್ತೆ ಸಿಲಿಂಡರ್ ದರ ಏರಿಕೆ..!
ಕೇರಳ – ಮಹಾರಾಷ್ಟ್ರದಿಂದ ಬರುವವರ ಮೇಲೆ ನಿಗಾ ಇಡಲು ವಿಶೇಷ ತಂಡ ರಚನೆ ಮಾಡಲಾಗಿದೆ. ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ಹೆಚ್ಚಿನ ನಿಗಾ ವಹಿಸಲು ತಂಡ ರಚನೆ ಮಾಡಲಾಗಿದೆ. ಆರೋಗ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ತಂಡದಿಂದ ತಪಾಸಣೆ ಕರ್ಯ ನಡೆಸಲಾಗುತ್ತದೆ.
ಪಶ್ಚಿಮ ವಲಯದಲ್ಲಿ-ಮೆಜೆಸ್ಟಿಕ್ ರೈಲ್ವೆ ನಿಲ್ದಾಣ,ಮೆಜೆಸ್ಟಿಕ್ ಬಸ್ ನಿಲ್ದಾಣ, ಮೈಸೂರು ಸ್ಯಾಟ್ ಲೈಟ್ ಬಸ್ ನಿಲ್ದಾಣ, ಆರ್ ನಗರ-ಯಶವಂತಪುರ ಬಸ್ ನಿಲ್ದಾಣ,ಕೆಂಗೇರಿ ಸ್ಯಾಟ್ ಲೈಟ್,ಯಶವಂತಪುರ ರೈಲ್ವೆ ನಿಲ್ದಾಣ, ಬೆಂಗಳೂರು ಪರ್ವ-ಕಂಟೋನ್ಮೆಂಟ್ ರೈಲು ನಿಲ್ದಾಣ,ಯಶವಂತಪುರ ರೈಲ್ವೆ ನಿಲ್ದಾಣ, ಮಹದೇವಪುರ- ಕೆ ಆರ್ ಪುರಂ ರೈಲ್ವೆ ನಿಲ್ದಾಣಗಳಲ್ಲಿ ಆರೋಗ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ತಪಾಸಣೆ ಕರ್ಯ ನಡೆಯಲಿದೆ .