ಕೊರೊನಾಗೆ ಹೆದರಿ 70 ವರ್ಷದ ವೃದ್ಧೆ ಆತ್ಮಹತ್ಯೆ
ಹುಬ್ಬಳ್ಳಿ: ದೇಶ ಹಾಗೂ ರಾಜ್ಯದಲ್ಲಿ ಕೋವಿಡ್ 2ನೇ ಅಲೆಯ ಪರಿಣಾಮ ಅತ್ಯಂತ ಭೀಕರವಾಗಿದೆ.. ರಾಜ್ಯದಲ್ಲಿ 2ನೇ ಅಲೆ ತಡೆಗೆ ಲಾಕ್ ಡೌನ್ ವಿಧಿಸಲಾಗಿದೆ.. ಇದ್ರಿಂದಾಗಿ ದಿನಗೂಲಿ ಕಾರ್ಮಿಕರು , ಬಡವರು ತೊಂದರೆ ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ ಸೋಂಕಿತರು ಸಾವಿನ ಸಂಖ್ಯೆಗಳು ಹೆಚ್ಚಾಗ್ತಿದ್ದು, ಈ ಪರಿಸ್ಥಿರಿಯಲ್ಲಿ ಜನರು ಹಾಗೂ ಸೋಂಕಿತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲಲ್ಲಿ ಕೋವಿಡ್ ಸೋಂಕಿತರು ಹೆದರಿ ಆತ್ಮಹತ್ಯೆಗೆ ಶರಣಾಗ್ತಿದ್ದಾರೆ.
ಇಂತಹದ್ದೇ ಒಂದು ಘಟನೆ ಇದೀಗ ಹುಬ್ಬಳ್ಳಿಯಲ್ಲಿಯೂ ನಡೆದಿದೆ. ಹುಬ್ಬಳ್ಳಿ ಯ ಅದರಗುಂಚಿ ಗ್ರಾಮದ 70 ವರ್ಷ ದ ವೃದ್ದೆಗೆ ಪಾಸಿಟಿವ್ ಬಂದಿದ್ದು , ಆಕೆ ಕಲ್ಲು ಕ್ವಾರಿಯ ನೀರಿನ ಗುಂಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೇ ನನ್ನಿಂದ ಸೊಂಕು ಬೆರೆಯವರಿಗೆ ಹರಡುವುದು ಬೇಡ. ನನಗೆ ವಯಸ್ಸಾಗಿದೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.