ಹೊಸದಿಲ್ಲಿ, ಮೇ 13 : ನವದೆಹಲಿಯ ಸಿ.ಆರ್.ಪಿ.ಎಫ್ ಕೇಂದ್ರದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಾಗ, ಸೋಂಕಿಗೆ ತುತ್ತಾಗಿದ್ದವರಲ್ಲಿ ಯೋಧ ಸತ್ಯಬೀರ್ ಸಿಂಗ್ ಕೂಡ ಒಬ್ಬರು. 31 ನೇ ಬೆಟಾಲಿಯನ್ನಲ್ಲಿ ರೇಡಿಯೋ ಆಪರೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸತ್ಯಬೀರ್ ಸಿಂಗ್ ಬೇಗನೇ ಸೋಂಕಿನಿಂದ ಗುಣಮುಖರಾಗಿ ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕೊರೋನಾ ಸೋಂಕಿನಿಂದ ಶೀಘ್ರ ಗುಣಮುಖರಾಗಿರುವ ಸತ್ಯಬೀರ್ ಸಿಂಗ್ ಕೊರೊನಾ ಸೋಂಕಿನ ಬಗ್ಗೆ ಮಾತನಾಡಿದ್ದು, ‘ನನಗೆ ಕೊರೋನಾ ಸೋಂಕು ದೃಢಪಟ್ಟಾಗ ನಾನು ಧೃತಿಗೆಡಲಿಲ್ಲ. ಹಿಂದೆ ನಕ್ಸಲ್ ಪೀಡಿತ ಪ್ರದೇಶಗಳಿಗೆ ವರ್ಗಾವಣೆ ಮಾಡಿದ ಹಾಗೆ ಇದೂ ಒಂದು ಹೊಸ ಪೋಸ್ಟಿಂಗ್ ನ ಆದೇಶ ಎಂದು ಭಾವಿಸಿದೆ. ಸೋಂಕಿಗೆ ಒಳಗಾದಾಗ ಧೃತಿಗೆಟ್ಟಷ್ಟು ಅದು ಮತ್ತಷ್ಟು ವ್ಯಾಪಿಸುತ್ತದೆ. ಆದರೆ ನಾನು ಕೊರೋನಾ ಸೋಂಕಿನ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ವೈದ್ಯರು ಹೇಳಿದ ಸಲಹೆ ಸೂಚನೆಗಳನ್ನು ಪಾಲಿಸುವ ಮೂಲಕ ಈ ಸೋಂಕನ್ನು ಯಾರೂ ಬೇಕಾದರೂ ಗೆಲ್ಲಬಹುದು’ ಎಂದು ಹೇಳಿದರು
ಲಿಟಲ್ ರಾಹುಲ್ ಗಾಂಧಿ” ಅವರ ಪ್ರೀತಿಯ ಅಜ್ಜಿ, ಪ್ರಸಿದ್ಧ ಇಂದಿರಾ ಗಾಂಧಿಯವರೊಂದಿಗಿನ ಸಂಭಾಷಣೆಯ ತುಣುಕು.
56 ವರ್ಷದ ರಾಹುಲ್ ಗಾಂಧಿ ಅವರು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ತಮ್ಮ ಪ್ರೀತಿಯ ಅಜ್ಜಿ ನೀಡಿದ ಸ್ಫೂರ್ತಿದಾಯಕ ಕೊಡುಗೆಯನ್ನು ಗೌರವಿಸಬೇಕೆಂದು ಹಾರೈಸುತ್ತೇನೆ. ನಮ್ಮ ದಿವಂಗತ ಪ್ರಧಾನಿಯವರು...








