ADVERTISEMENT
Saturday, June 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

Cricket: ಕೆಎಸ್‌ಸಿಎ ಟೂರ್ನಿಯಲ್ಲಿ ಬೆಂಗಳೂರಿನ ಕಿರಿಯ ಕ್ರಿಕೆಟಿಗನ ಬ್ಯಾಟಿಂಗ್‌ ಅಬ್ಬರ

1400ಕ್ಕೂ ಹೆಚ್ಚು ರನ್‌ಗಳಿಸಿ ಗಮನ ಸೆಳೆದಿರುವ ನಿತೀಶ್‌ ಆರ್ಯ

C Dinesh by C Dinesh
November 25, 2023
in Sports, ಕ್ರಿಕೆಟ್
Nitish Arya

Nitish Arya

Share on FacebookShare on TwitterShare on WhatsappShare on Telegram

ಕರ್ನಾಟಕ ಕ್ರಿಕೆಟ್‌ ವಲಯದಲ್ಲಿ ಕಿರಿಯ ಆಟಗಾರನೊಬ್ಬ ತನ್ನ ಅದ್ಭುತ ಬ್ಯಾಟಿಂಗ್‌ನಿಂದ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(KSCA) ನಡೆಸಿರುವ 2023-24ರ ಆವೃತ್ತಿಯ ವಿವಿಧ ಪಂದ್ಯಾವಳಿಗಳಲ್ಲಿ 1400 ರನ್‌ಗಳನ್ನ ಕಲೆಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಬೆಂಗಳೂರು ಮೂಲದ 13 ವರ್ಷದ ಕಿರಿಯ ಕ್ರಿಕೆಟರ್‌ ನಿತೀಶ್ ಆರ್ಯ, ಸದ್ಯ ಕರ್ನಾಟಕ ಕ್ರಿಕೆಟ್ ವಲಯದ ಸೆನ್ಸೇಷನ್‌ ಆಗಿದ್ದಾರೆ. ಬಲಗೈ ಆರಂಭಿಕ ಬ್ಯಾಟರ್‌ ಆಗಿರುವ ನಿತೀನ್‌ ಆರ್ಯ, ರಾಜಾಜಿನಗರ ಕ್ರಿಕೆಟರ್ಸ್ ಮತ್ತು ತಾನು ವ್ಯಾಸಂಗ ಮಾಡುತ್ತಿರುವ ಮ್ಯಾಕ್ಸ್ ಮುಲ್ಲರ್ ಹೈಸ್ಕೂಲ್(ಬಸವೇಶ್ವರನಗರ) ಪರವಾಗಿ ಆಡುತ್ತಿದ್ದಾರೆ. ಸದ್ಯ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ನಿತೀನ್‌, 3 ವರ್ಷ ವಯಸ್ಸಿನಲ್ಲಿ ಇದ್ದಾಗಲೇ ಕ್ರಿಕೆಟ್ ಆಡಲು ಪ್ರಾರಂಭಿಸಿದರು.

Related posts

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸತತ ಎರಡನೇ ಐಪಿಎಲ್ ಪ್ರಶಸ್ತಿ: ಫೈನಲ್ ನಲ್ಲಿ ಗುಜರಾತ್ ಟೈಟಾನ್ಸ್ ಮಣಿಸಿದ ಆರ್ ಸಿ ಬಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸತತ ಎರಡನೇ ಐಪಿಎಲ್ ಪ್ರಶಸ್ತಿ: ಫೈನಲ್ ನಲ್ಲಿ ಗುಜರಾತ್ ಟೈಟಾನ್ಸ್ ಮಣಿಸಿದ ಆರ್ ಸಿ ಬಿ

May 31, 2026
ಟೈಟಾನ್ಸ್ ಅಟ್ಟಹಾಸವೋ ಅಥವಾ ಆರ್ ಸಿಬಿ ಅಬ್ಬರವೋ ಐಪಿಎಲ್ ಫೈನಲ್ ಗೆ ಕ್ಷಣಗಣನೆ ಆರಂಭ

ಟೈಟಾನ್ಸ್ ಅಟ್ಟಹಾಸವೋ ಅಥವಾ ಆರ್ ಸಿಬಿ ಅಬ್ಬರವೋ ಐಪಿಎಲ್ ಫೈನಲ್ ಗೆ ಕ್ಷಣಗಣನೆ ಆರಂಭ

May 31, 2026

ಸದ್ಯ ಕೆಎಸ್‌ಸಿಎ ಆಯೋಜಿಸಿರುವ 16 ವರ್ಷದೊಳಗಿನ KSCA ಕಪ್ ಪಂದ್ಯಾವಳಿಯಲ್ಲಿ ಅದ್ಭುತ ಬ್ಯಾಟಿಂಗ್‌ನಿಂದ ಮಿಂಚಿದ ನಿತೀನ್‌ ಆರ್ಯ, 3 ಶತಕ ಮತ್ತು 3 ಅರ್ಧಶತಕಗಳೊಂದಿಗೆ 565 ರನ್‌ಗಳಿಸಿ ಹೆಚ್ಚು ರನ್‌ಗಳಿಸಿದ ಬ್ಯಾಟರ್‌ ಎನಿಸಿದರು. ತಮ್ಮ ಈ ಶ್ರೇಷ್ಠ ಬ್ಯಾಟಿಂಗ್‌ನಿಂದ ಅಂಡರ್‌-16 ಟೂರ್ನಿಯ ಬ್ಯಾಟರ್‌ಗಳ ಸಾಲಿನಲ್ಲಿ ಅಗ್ರಸ್ಥಾನ ಪಡೆದು ಮಿಂಚಿರುವುದು ನಿಜಕ್ಕೂ ದೊಡ್ಡ ಸಾಧನೆಯಾಗಿದೆ. ಅಷ್ಟೇ ಅಲ್ಲದೇ, ಕೆಎಸ್‌ಸಿಎ ನಡೆಸುತ್ತಿರುವ 14 ವರ್ಷದೊಳಗಿನವರ ಟೂರ್ನಿಗಳಲ್ಲೂ ಸಹ ನಿತೀನ್‌ ಆರ್ಯ, ಸತತವಾಗಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನ ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

Nitish Arya

ನಿತೀಶ್ ಅವರು ವಿಕ್ಟರಿ ಕ್ರಿಕೆಟ್ ಕ್ಲಬ್‌ಗಾಗಿ ಕೆಎಸ್‌ಸಿಎಯ 4ನೇ ಡಿವಿಷನ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಈವರೆಗೆ, ಅವರು 4 ಪಂದ್ಯಗಳಲ್ಲಿ ಒಂದು ಅರ್ಧಶತಕದೊಂದಿಗೆ ಅಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ. ನಿತೀನ್‌ ಆರ್ಯ ಅವರಲ್ಲಿ ಟ್ಯಾಲೆಂಟ್‌ ಗಮನಿಸಿದ ರಾಜಾಜಿನಗರ ಕ್ರಿಕೆಟರ್ಸ್ ಕಾರ್ಯದರ್ಶಿ ಮತ್ತು ಕರ್ನಾಟಕ ಪ್ರೀಮಿಯರ್ ಲೀಗ್‌ನ (ಕೆಪಿಎಲ್) ಶಿವಮೊಗ್ಗ ಲಯನ್ಸ್ ತಂಡದ ಮಾಲೀಕ ಆರ್.ಕುಮಾರ್ ಅವರು ಕಿರಿಯ ಆಟಗಾರ ನಿತೀಶ್‌ ಅವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.

ನಿತೀಶ್‌ ಆರ್ಯ, ರಾಜಾಜಿನಗರ ಕ್ರಿಕೆಟಿಗರ ತರಬೇತುದಾರ ಎನ್‌ಪಿ ವಿನಯ್ ಕುಮಾರ್ ಅವರ ಗರಡಿಯಲ್ಲಿ ಬೆಂಗಳೂರಿನ ಮಾಗಡಿ ರಸ್ತೆಯ ಈಸ್ಟ್ ವೆಸ್ಟ್ ಸೆಂಟರ್ ಫಾರ್ ಸ್ಪೋರ್ಟಿಂಗ್ ಎಕ್ಸಲೆನ್ಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾನೆ. ತಮ್ಮ ಆಟಗಾರನ ಟ್ಯಾಲೆಂಟ್‌ ಬಗ್ಗೆ ಮಾತನಾಡಿರುವ ವಿನಯ್‌ ಕುಮಾರ್‌, ನಿತೀಶ್‌ ಆರ್ಯ, ಡೆಡಿಕೇಟೆಡ್‌ ಕ್ರಿಕೆಟರ್‌ ಆಗಿರುವ ನಿತೀಶ್‌, ಪ್ರತಿನಿತ್ಯ 6 ರಿಂದ 7 ಗಂಟೆಗಳ ಕಾಲ ತರಬೇತಿಯಲ್ಲಿ ತೊಡಗಿಸಿಕೊಳ್ಳುತ್ತಾನೆ. ಬೆಳಗ್ಗೆ 5 ರಿಂದ 7ರವರೆಗೆ ಮತ್ತು ಸಂಜೆ 3 ರಿಂದ ಸಂಜೆ 7 ಗಂಟೆಯವರೆಗೆ ತರಬೇತಿ ನೀಡುತ್ತಾರೆ. ಆತ ಹಲವು ಗಂಟೆಗಳ ಕಾಲ ನೆಟ್ಸ್‌ನಲ್ಲಿ ಹೆಚ್ಚಿನ ಸಮಯವನ್ನ ಕಳೆಯಲಿದ್ದು, ತಾಂತ್ರಿಕವಾಗಿ ಆತ ಬಲಿಷ್ಠವಾಗಿದ್ದಾನೆ. ಅಲ್ಲದೇ ಆತ ಬ್ಯಾಕ್‌ಫುಟ್‌ ಮತ್ತು ಫ್ರಂಟ್‌ಫುಟ್‌ ಎರಡರಲ್ಲೂ ರನ್‌ಗಳಿಸಬಲ್ಲ ಎನ್ನುತ್ತಾರೆ.

Nitish Arya

ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿಯ ದೊಡ್ಡ ಅಭಿಮಾನಿಯಾಗಿರುವ ನಿತೀಶ್‌ ಆರ್ಯ, ಭವಿಷ್ಯದಲ್ಲಿ ಟೀಂ ಇಂಡಿಯಾ ಆಟಗಾರನಾಗಿ ಮೂರು ಫಾರ್ಮ್ಯಾಟ್‌ನಲ್ಲಿ ಮಿಂಚಬೇಕೆಂಬ ಮಿಂಚುವ ಕನಸು ಹೊತ್ತಿದ್ದಾರೆ. 13 ವರ್ಷದ ನಿತೀಶ್‌ ಕೇವಲ ಕ್ರಿಕೆಟ್‌ನಲ್ಲಿ ಮಾತ್ರವೇ ಯಶಸ್ಸು ಸಾಧಿಸದೆ, ಶೈಕ್ಷಣಿಕವಾಗಿಯೂ ಉತ್ತಮ ಅಂಕಗಳಿಸಿದ್ದಾನೆ. ಕ್ರಿಕೆಟ್‌ನ ಜೊತೆ ಜೊತೆಗೆ ಓದಿನ ಬಗ್ಗೆಯೂ ಆಸಕ್ತಿ ಹೊಂದಿರುವ ನಿತೀಶ್‌, 80-90% ಅಂಕ ಪಡೆದಿದ್ದಾನೆ ಎನ್ನುತ್ತಾರೆ ಆತನ ಶಾಲಾ ತಂಡದ ಕೋಚ್‌ ಲಕ್ಷ್ಮಿಕಾಂತ್‌.

Nitish Arya

ನಿತೀಶ್‌ ಆರ್ಯ ಹಿನ್ನೆಲೆ:
ತಂದೆ: ಲೋಕೇಶ್‌
ಜನನ: 13-09-2010
ಕೋಚ್‌: ಎನ್‌.ಪಿ. ವಿನಯ್‌ ಕುಮಾರ್‌
ಕ್ಲಬ್‌: ರಾಜಾಜಿನಗರ್‌ ಕ್ರಿಕೆಟರ್ಸ್‌
ಕ್ಲಬ್‌ ಕಾರ್ಯದರ್ಶಿ: ಕೆಪಿಎಲ್‌ ಟೂರ್ನಿಯ ಶಿವಮೊಗ್ಗ ಲಯನ್ಸ್‌ ತಂಡದ ಮಾಲೀಕ ಆರ್‌.ಕುಮಾರ್‌

ನಿತೀಶ್‌ ಆರ್ಯ ಪ್ರದರ್ಶನ – KSCA ಕಪ್‌ನಲ್ಲಿ
ಟಾಪ್‌ ಸ್ಕೋರರ್‌ – 565 ರನ್‌ಗಳು (3 ಶತಕ, 3 ಅರ್ಧಶತಕ)

1ನೇ ಡಿವಿಷನ್‌ ಲೀಗ್‌ನಲ್ಲಿ
ಪಂದ್ಯಗಳು – 4
ಇನ್ನಿಂಗ್ಸ್‌ – 7
ರನ್‌ಗಳು – 355
50/100 – 1/3
ಸೂಪರ್‌ ಲೀಗ್‌ನಲ್ಲಿ
ಪಂದ್ಯಗಳು – 3
ಇನ್ನಿಂಗ್ಸ್‌ – 3
ರನ್‌ಗಳು – 210
50/100 – 2/1

ಕೆಎಸ್‌ಸಿಎ ಇಂಟರ್‌ ಕ್ಲಬ್‌ ಪಂದ್ಯಾವಳಿಯಲ್ಲಿ – ಅಂಡರ್‌-14
ಪಂದ್ಯಗಳು – 4
ಇನ್ನಿಂಗ್ಸ್‌ – 4
ರನ್‌ಗಳು – 355
ಸರಾಸರಿ – 177.50
50/100 – 1/2

Cricket, Nitish Arya, KSCA tournaments, Banglore,

Tags: bangloreCricketKSCA tournamentsNitish Arya
ShareTweetSendShare
Join us on:

Related Posts

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸತತ ಎರಡನೇ ಐಪಿಎಲ್ ಪ್ರಶಸ್ತಿ: ಫೈನಲ್ ನಲ್ಲಿ ಗುಜರಾತ್ ಟೈಟಾನ್ಸ್ ಮಣಿಸಿದ ಆರ್ ಸಿ ಬಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸತತ ಎರಡನೇ ಐಪಿಎಲ್ ಪ್ರಶಸ್ತಿ: ಫೈನಲ್ ನಲ್ಲಿ ಗುಜರಾತ್ ಟೈಟಾನ್ಸ್ ಮಣಿಸಿದ ಆರ್ ಸಿ ಬಿ

by Shwetha
May 31, 2026
0

ಐಪಿಎಲ್ 2026ರ ಬಹುನಿರೀಕ್ಷಿತ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಬಗ್ಗುಬಡಿಯುವ ಮೂಲಕ ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ...

ಟೈಟಾನ್ಸ್ ಅಟ್ಟಹಾಸವೋ ಅಥವಾ ಆರ್ ಸಿಬಿ ಅಬ್ಬರವೋ ಐಪಿಎಲ್ ಫೈನಲ್ ಗೆ ಕ್ಷಣಗಣನೆ ಆರಂಭ

ಟೈಟಾನ್ಸ್ ಅಟ್ಟಹಾಸವೋ ಅಥವಾ ಆರ್ ಸಿಬಿ ಅಬ್ಬರವೋ ಐಪಿಎಲ್ ಫೈನಲ್ ಗೆ ಕ್ಷಣಗಣನೆ ಆರಂಭ

by Shwetha
May 31, 2026
0

ಕ್ರಿಕೆಟ್ ಲೋಕದ ಅತಿದೊಡ್ಡ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಅಂತಿಮ ಘಟ್ಟಕ್ಕೆ ಕ್ಷಣಗಣನೆ ಆರಂಭವಾಗಿದೆ. ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ...

ಧರ್ಮಶಾಲಾದಲ್ಲಿ ಆರ್ ಸಿಬಿ ಅಬ್ಬರ ಗುಜರಾತ್ ಟೈಟಾನ್ಸ್ ಧೂಳೀಪಟ ಮಾಡಿ ಸತತ ಎರಡನೇ ಬಾರಿಗೆ ಫೈನಲ್ ಗೇರಿದ ಹಾಲಿ ಚಾಂಪಿಯನ್ಸ್

ಧರ್ಮಶಾಲಾದಲ್ಲಿ ಆರ್ ಸಿಬಿ ಅಬ್ಬರ ಗುಜರಾತ್ ಟೈಟಾನ್ಸ್ ಧೂಳೀಪಟ ಮಾಡಿ ಸತತ ಎರಡನೇ ಬಾರಿಗೆ ಫೈನಲ್ ಗೇರಿದ ಹಾಲಿ ಚಾಂಪಿಯನ್ಸ್

by Shwetha
May 27, 2026
0

ಐಪಿಎಲ್ 2026ರ ಅಖಾಡದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯಯಾತ್ರೆ ಮುಂದುವರಿದಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಗುಜರಾತ್...

ಸೂರ್ಯ ಔಟ್, ಹೊಸ ನಾಯಕ ಇನ್?ರೇಸ್‌ನಲ್ಲಿರುವ ಆ 5 ಸ್ಟಾರ್ ಆಟಗಾರರು ಯಾರು?

ಸೂರ್ಯ ಔಟ್, ಹೊಸ ನಾಯಕ ಇನ್?ರೇಸ್‌ನಲ್ಲಿರುವ ಆ 5 ಸ್ಟಾರ್ ಆಟಗಾರರು ಯಾರು?

by Shwetha
May 25, 2026
0

ಬೆಂಗಳೂರು: ಭಾರತೀಯ ಟಿ20 ಕ್ರಿಕೆಟ್ ತಂಡದಲ್ಲಿ ಈಗ ದೊಡ್ಡ ಮಟ್ಟದ ಬದಲಾವಣೆಯ ಗಾಳಿ ಬೀಸುತ್ತಿದೆ. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುವ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್...

RCB ಆಲ್ ರೌಂಡ್ ಪ್ರದರ್ಶನಕ್ಕೆ ಪಂಜಾಬ್ ಧೂಳೀಪಟ ಪ್ಲೇಆಫ್‌ಗೆ ಲಗ್ಗೆ ಇಟ್ಟ RCB

RCB ಆಲ್ ರೌಂಡ್ ಪ್ರದರ್ಶನಕ್ಕೆ ಪಂಜಾಬ್ ಧೂಳೀಪಟ ಪ್ಲೇಆಫ್‌ಗೆ ಲಗ್ಗೆ ಇಟ್ಟ RCB

by Shwetha
May 18, 2026
0

ಐಪಿಎಲ್ 2026ರ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ನಿನ್ನೆ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಸರ್ವತೋಮುಖ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram