Cricket : ಶ್ರೀಲಂಕಾ ಸರಣಿಗೆ ತಂಡ ಘೋಷಣೆ; T20 ಗೆ ಹಾರ್ದಿಕ್ – ODI ಗೆ ರೋಹಿತ್ ಕಮಾಂಡ್…
ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಏಕದಿನ T20 ಸರಣಿಗಾಗಿ ಬಿಸಿಸಿಐ ಟೀಂ ಇಂಡಿಯಾ ತಂಡವನ್ನ ಪ್ರಕಟಿಸಿದೆ. ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಗೆ T20 ಕ್ಯಾಪ್ಟನ್ಸಿ ವಹಿಸಲಾಗಿದೆ. ಸೂರ್ಯ ಕುಮಾರ್ ಯಾದವ್ ಉಪನಾಯಕನಾಗಿದ್ದಾರೆ. ಏಕದಿನ ಪಂದ್ಯದ ಕಮಾಂಡ್ ರೋಹಿತ್ ಬಳಿಯೇ ಉಳಿಸಲಾಗಿದೆ. ಆದರೇ ರೋಹಿತ್ ಮತ್ತು ವಿರಾಟ್ ಕೊಹ್ಲಿಗೆ T20 ಯಿಂದ ವಿಶ್ರಾಂತಿ ನೀಡಲಾಗಿದೆ. ಇನ್ನುಳಿದಂತೆ ಶಿಖರ್ ಧವನ್ ಮತ್ತು ರಿಷಬ್ ಪಂತ್ ಏಕದಿನದಿಂದ ಹೊರಗುಳಿದಿದ್ದಾರೆ.
ದೇಶಿಯ ಕ್ರಿಕೆಟ್ ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನಡೆಸಿದ್ದ ವೇಗದ ಬೌಲಿಂಗ್ ಅಲ್ರೌಂಡರ್ ಶಿವಂ ಮಾವಿಗೆ T20 ತಂಡದಲ್ಲಿ ಅವಕಾಶ ನೀಡಲಾಗಿದೆ. ಶಿವಂ ಮಾವಿ ಕಳೆದ 5 ರಣಜಿ ಮತ್ತು ಮೂರು ಲಿಸ್ಟ್ ಎ ಪಂದ್ಯಗಳಿಂದ 19 ವಿಕೆಟ್ ಕಬಳಿಸಿದ್ದಾರೆ. ಇನ್ನು ಬಾಂಗ್ಲಾದೇಶದ ವಿರುದ್ಧ ನೆಟ್ ಸೆಷನ್ ನಲ್ಲಿ ಗಾಯಗೊಂಡಿದ್ದ ಶಮಿ ಏಕದಿನ ತಂಡಕ್ಕೆ ಮರಳಿದ್ದಾರೆ.
ಶ್ರೀಲಂಕಾ ತಂಡ ಜನವರಿಯಲ್ಲಿ ಭಾರತ ಪ್ರವಾಸಕ್ಕೆ ಆಗಮಿಸಿ ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಯನ್ನ ಆಡಬೇಕಿದೆ. ಮೊದಲ ಪಂದ್ಯ 3 ಜನವರಿ 2023 ರಂದು ಮುಂಬೈನಲ್ಲಿ ನಡೆಯಲಿದೆ. ಅದರ ನಂತರ ಜನವರಿ 5 ರಂದು ಪುಣೆ ಮತ್ತು ಜನವರಿ 7 ರಂದು ರಾಜ್ಕೋಟ್ನಲ್ಲಿ ಪಂದ್ಯಗಳು ನಡೆಯಲಿವೆ. ಜನವರಿ 10 ರಂದು ಗುವಾಹಟಿಯಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಅದರ ನಂತರ ಜನವರಿ 12 ರಂದು ಕೋಲ್ಕತ್ತಾ ಮತ್ತು ಜನವರಿ 15 ರಂದು ತಿರುವನಂತಪುರದಲ್ಲಿ ಪಂದ್ಯಗಳು ನಡೆಯಲಿವೆ.
ಭಾರತ ಟಿ20 ತಂಡ:
ಹಾರ್ದಿಕ್ ಪಾಂಡ್ಯ (c), ಇಶಾನ್ ಕಿಶನ್ (wk), ರಿತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (VC), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷ್ದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್ , ಶಿವಂ ಮಾವಿ ಮತ್ತು ಮುಖೇಶ್ ಕುಮಾರ್.
ಭಾರತ ಏಕದಿನ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಯಾದವ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ಮತ್ತು ಅರ್ಷದೀಪ್ ಸಿಂಗ್.
Cricket :Indian Players List Announced For Sri Lanka Series Hardik Pandya, Ishan Kishan, Suryakumar Yadav