ಐಪಿಎಲ್ : ಕೊಹ್ಲಿ ವರ್ಸಸ್ ಎಂಎಸ್ಡಿ.. ಗೆಲುವು ಯಾರಿಗೆ..?
ಈ ಬಾರಿಯ ಐಪಿಎಲ್ ನ ಬಹು ನಿರೀಕ್ಷಿತ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಪಾಯಿಂಟ್ ಟೇಬಲ್ ಟಾಪರ್ ಗಳಾದಂತಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಇವತ್ತು ಮುಖಾಮುಖಿಯಾಗಲಿವೆ. ಈಗಾಗಲೇ ಆಡಿದ ನಾಲ್ಕೂ ಪಂದ್ಯಗಳನ್ನ ಗೆದ್ದು ರೆಡ್ ಹಾರ್ಸ್ ಫಾರ್ಮ್ ನಲ್ಲಿರುವ ಬೆಂಗಳೂರು ತಂಡಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಸವಾಲ್ ಹಾಕಿದ್ದು, ಈ ಜಿದ್ದಾಜಿದ್ದಿನ ಮ್ಯಾಚ್ ಗಾಗಿ ಕ್ರಿಕೆಟ್ ಅಭಿಮಾನಿಗಳು ಕಾದುಕುಳಿತ್ತಿದ್ದಾರೆ.
ಹೆಡ್ ಟು ಹೆಡ್
ಐಪಿಎಲ್ ನಲ್ಲಿ ಈವರೆಗೂ ಈ ಎರಡು ತಂಡಗಳು 25 ಬಾರಿ ಮುಖಾಮುಖಿಯಾಗಿದ್ದು, ಚೆನ್ನೈ ತಂಡ ಮೇಲುಗೈ ಸಾಧಿಸಿದೆ. ಸಿಎಸ್ ಕೆ ತಂಡ 16 ಬಾರಿ ಆರ್ ಸಿಬಿಯನ್ನ ಸೋಲಿಸಿದ್ದು, ಬೆಂಗಳೂರು ತಂಡ 9 ಬಾರಿ ಗೆಲುವು ಸಾಧಿಸಿದೆ.
ಗ್ರೌಂಡ್ ರಿಪೋರ್ಟ್
ಇವತ್ತಿನ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆಯಲಿದೆ. ಇದು ಮುಂಬೈನಲ್ಲಿ ನಡೆಯುತ್ತಿರುವ ಮೊದಲ ಮತ್ತು ಕೊನೆಯ ಡೇ ಮ್ಯಾಚ್ ಆಗಿದೆ. ಡೇ ಮ್ಯಾಚ್ ಆಗಿರುವುದರಿಂದ ಡ್ಯೂವ್ ಪಾಕ್ಟರ್ ಇರುವುದಿಲ್ಲ. ಅಂದ್ರೆ ಮಂಜು ಬೀಳುವುದಿಲ್ಲ. ಇದರಿಂದ ಸೆಕೆಂಡ್ ಬೌಲ್ ಮಾಡುವ ತಂಡಕ್ಕೆ ಯಾವುದೇ ಸಮಸ್ಯೆಗಳು ಇರೋದಿಲ್ಲ. ಬದಲಾಗಿ ಫುಲ್ ರನ್ಸ್ ಇರುತ್ತೆ. ಅಂದಹಾಗೆ ಇವತ್ತು ಟಾಸ್ ಕೂಡ ಯಾವುದೇ ಪರಿಣಾಮ ಬೀರುವುದಿಲ್ಲ. ಯಾಕೆಂದರೇ ಮೊದಲು ಬ್ಯಾಟ್ ಮಾಡಿದ್ರೂ, ಸೆಕೆಂಡ್ ಬ್ಯಾಟ್ ಮಾಡಿದ್ರೂ ಪಿಚ್ ಒಂದೇ ರೀತಿ ಇರುತ್ತದೆ.
ಬಲಾಬಲಗಳೇನು..?
ಆರ್ ಸಿಬಿ ತುಂಬಾ ಸ್ಟ್ರಾಂಗ್ ಆಗಿ ಕಾಣುತ್ತಿದೆ. ದೇವದತ್ ಪಡಿಕಲ್, ವಿರಾಟ್, ಮ್ಯಾಕ್ಸಿ, ಎಬಿಡಿ ರೆಡ್ ಹಾರ್ಸ್ ಪಾರ್ಮ್ನಲ್ಲಿರೋದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಇನ್ನು ದೆತ್ ಬೌಲಿಂಗ್ ನಲ್ಲೂ ತಂಡ ತುಂಬಾ ಸ್ಟ್ರಾಂಗ್ ಆಗಿದೆ. ಬೌಲಿಂಗ್ ನಲ್ಲಿ ಸಾಕಷ್ಟು ಆಯ್ಕೆಗಳಿವೆ. ಒಟ್ಟಾರೆ ತಂಡ ಸಾಲಿಡ್ ಆಗಿದೆ.
ಚೆನ್ನೈ ವಿಚಾರಕ್ಕೆ ಬಂದ್ರೆ ಮೊದಲ ಮ್ಯಾಚ್ ಸೋತರೂ ಕಳೆದ ಮೂರು ಪಂದ್ಯಗಳನ್ನ ಗೆದ್ದು ಆತ್ಮವಿಶ್ವಾಸದಲ್ಲಿದೆ. ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. 10ಕ್ರಮಾಂಕದಲ್ಲೂ ಕೂಡ ಬ್ಯಾಟಿಂಗ್ ಮಾಡಬಲ್ಲ ಆಟಗಾರರು ಇರೋದು ತಂಡದ ಪ್ಲಸ್ ಪಾಯಿಂಟ್. ಗಾಯಕ್ವಾಡ್, ಡುಪ್ಲಸಿಸ್, ಮೊಯಿಲ್ ಅಲಿ, ರೈನಾ ಒಳ್ಳೆ ಟಚ್ ನಲ್ಲಿ ಕಾಣಿಸುತ್ತಿದ್ದರೇ ಆಲ್ ರೌಂಡರ್ ಗಳಾದ ಬ್ರಾವೋ, ಜಡೇಜಾ, ಸ್ಯಾಮ್ ಕರನ್ ಒಳ್ಳೆ ಪ್ರದರ್ಶನ ನೀಡುತ್ತಿದ್ದಾರೆ. ಇದು ಕೂಡ ತಂಡಕ್ಕೆ ನೆರವಾಗುತ್ತದೆ.
ಆದ್ರೆ ಬೌಲಿಂಗ್ ನಲ್ಲಿ ದೀಪಕ್ ಚಹಾರ್ ಮಾತ್ರ ಕೀ ಪ್ಲೆಯರ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನುಳಿದಂತೆ ಶಾರ್ದೂಲ್ ಠಾಕೂರ್, ಜಡೇಜಾ ವಿಕೆಟ್ ಗಾಗಿ ಪರದಾಡುತ್ತಿದ್ದಾರೆ. ಇದು ಬಿಟ್ಟರೇ ತಂಡ ಬಲಿಷ್ಠವಾಗಿಯೇ ಕಾಣಿಸುತ್ತಿದೆ.
ಟೀಂ ಇಲೆವೆನ್
ಆರ್ ಸಿಬಿಯಲ್ಲಿ ಒಂದು ಬದಲಾವಣೆಯನ್ನ ನಿರೀಕ್ಷೆ ಮಾಡಬಹುದು. ಬ್ಯಾಟಿಂಗ್ ಸ್ಟ್ರೆಂಥ್ ಹೆಚ್ಚಿಸಿಕೊಳ್ಳಲು ಶಹಬಾಜ್ ಅಹಮದ್ ಅವರ ಬದಲಾಗಿ ಪಟಿದಾರ್ ಅವರನ್ನ ಆಡಿಸುವ ಸಾಧ್ಯತೆಗಳಿವೆ. ಅಥವಾ ವಿನ್ನಿಂಗ್ ಕಾಂಬಿನೇಷನ್ ನೊಂದಿಗೆ ಯಾವುದೇ ಬದಲಾಣೆಗಳನ್ನ ಮಾಡದೇ ಕಣಕ್ಕಿಳಿಯಬಹುದು.
ತಂಡ : ಪಡಿಕಲ್, ಕೊಹ್ಲಿ, ಶಹಬಾಜ್/ ಪಟಿದಾರ್, ಮ್ಯಾಕ್ಸ್ ವೆನ್, ಎ ಬಿ ಡಿ ವಿಲಿಯರ್ಸ್, ವಾಷಿಂಗ್ ಟನ್ ಸುಂದರ್, ಜಾಮಿನ್ಸನ್,ಹರ್ಷಲ್ ಪಟೇಲ್, ಕೇನ್ ರಿಚರ್ಡ್ ಸನ್, ಸಿರಾಜ್, ಚಹಾಲ್
ಚೆನ್ನೈ ವಿಚಾರಕ್ಕೆ ಬಂದ್ರೆ ಇದರಲ್ಲಿ ಯಾವುದೆ ಬದಲಾವಣೆಗಳನ್ನ ಮಾಡುವ ನಿರೀಕ್ಷೆಗಳಿಲ್ಲ. ಮಾಡಿದ್ರೆ ಗಾಯಕ್ವಾಡ್ ಬದಲಿಗೆ ಉತ್ತಪ್ಪ ಅವರನ್ನ ಆಡಿಸಬಹುದು.
ತಂಡ : ಗಾಯಕ್ವಾಡ/ ಉತ್ತಪ್ಪ, ಫಾಫ್ ಡುಪ್ಲಸಿಸ್, ಮೊಯಿನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಧೋನಿ, ಜಡೇಜಾ, ಸ್ಯಾಮ್ ಕರನ್, ಶರ್ದೂಲ್ ಠಾಕೂರ್, ದೀಪಕ್ ಚಹಾರ್, ಎಂಗಿನಿ
ಫ್ಯಾಂಟಸಿ ಪಿಕ್ಸ್
ವಿಕೆಟ್ ಕೀಪರ್ : ಎಬಿಡಿ.
ಬ್ಯಾಟ್ಸ್ ಮೆನ್ : ವಿರಾಟ್ ಕೊಹ್ಲಿ, ಪಡಿಕಲ್(ಕ್ಯಾಪ್ಟನ್), ಗಾಯಕ್ವಾಡ್
ಆಲ್ ರೌಂಡರ್ : ಜಡೇಜಾ,ಮ್ಯಾಕ್ ವೆಲ್, ಮೋಯಿನ್ ಅಲಿ( ಉಪನಾಯಕ), ವಾಷಿಂಗ್ ಟನ್ ಸುಂದರ್
ಬೌಲರ್ : ಹರ್ಷಲ್ ಪಟೇಲ್, ದೀಪಕ್ ಚಹಾರ್, ಸಿರಾಜ್
ವಿನ್ನಿಂಗ್ ಚಾನ್ಸ್
ಎರಡೂ ತಂಡಗಳು ಸೂಪರ್ ಪಾರ್ಮ್ ನಲ್ಲಿದ್ದು, ಆರ್ ಸಿಬಿ 51%, ಸಿಎಸ್ ಕೆ 49% ಗೆಲ್ಲೋ ಚಾನ್ಸ್ ಇದೆ.