Darshan – Sudeep : ಬಿಗ್ ಬಾಸ್ ವೇದಿಕೆಯಲ್ಲಿ ‘ಕ್ರಾಂತಿ’ ಪ್ರಚಾರ..!
ಹಿಂದೊಮ್ಮೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಕೂಡ ಉತ್ತಮ ಸ್ನೇಹಿತರಾಗಿದ್ದರು.. ನಂತರ ಇಬ್ಬರೂ ಕಾರಣಾಂತರಗಳಿಂದ ದೂರಾಗಿದ್ದರು..
ಆಗಿನಿಂದಲೂ ದರ್ಶನ್ ಹಾಗೂ ಸುದೀಪ್ ಅಭಿಮಾಣಿಗಳು ಜೊತೆಗೆ ಸ್ಯಾಂಡಲ್ ವುಡ್ ಸಿನಿಪ್ರಿಯರು ಇವರಿಬ್ಬರು ಮತ್ತೆ ಒಂದಾಗ್ಬೇಕೆಂಬ ಕನಸು ಕಾಣ್ತಿದ್ದಾರೆ..
ಇದೀಗ ಅಭಿಮಾನಿಗಳ ಆಸೆ ಈಡೇರುವ ಲಕ್ಷಣ ಕಾಣ್ತಿದೆ..
ಇತ್ತೀಚೆಗೆ ಹೊಸಪೇಟೆಯಲ್ಲಿ ‘ಕ್ರಾಂತಿ’ ಹಾಡು ರಿಲೀಸ್ ಮಾಡಲು ದರ್ಶನ್ ಮತ್ತೆ ಕ್ರಾಂತಿ ತಂಡ ಹೊಸಪೇಟೆಗೆ ತೆರಳಿದ್ದಂತಹ ಸಮಯದಲ್ಲಿ ವೇದಿಕೆಯಲ್ಲಿ ನಿಂತಿದ್ದ ದರ್ಶನ್ ಅವರ ಮೇಲೆ ಯಾರೋ ಒಬ್ಬ ಕಿಡಿಗೇಡಿ ಚಪ್ಪಲಿ ಎಸೆದಿದ್ದ ಪ್ರಕರಣ ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು..
ಸಿನಿಮಾರಂಗದ ತಾರೆಯರು ದರ್ಶನ್ ಪರ ನಿಂತಿದ್ದರು..
ಸುದೀಪ್ ಕೂಡ ದರ್ಶನ್ ಅವರ ಪರ ಪೋಸ್ಟ್ ಹಾಗಿ ಘಟನೆಯನ್ನ ಖಂಡಿಸಿದ್ದರು.. ನಂತರ ದರ್ಶನ್ ಅವರು ಟ್ವೀಟ್ ಮೂಲಕ ಸುದೀಪ್ ಅವರಿಗೆ ಧನ್ಯವಾದ ತಿಳಿಸಿದ್ದರು..
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ‘ಕ್ರಾಂತಿ’ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಮಾಡಲಾಯ್ತು.. ಈ ವೇಳೆ ದರ್ಶನ್ ಅವರು ವಿರೋಧಿಗಳಿಗೆ ಸಖತ್ ಟಾಂಗ್ ಕೊಟ್ಟಿದ್ದರು..
ಮುಂದಿನ ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಕ್ರಾಂತಿ ಚಿತ್ರ ತೆರೆಗೆ ಬರಲಿದೆ..
ಇದೀಗ ಕಿಚ್ಚ ಸುದೀಪ್ ನಡೆಸಿಕೊಡ್ತಿರುವ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ವೇದಿಕೆ ಮೇಲೆ ಕ್ರಾಂತಿ ಪ್ರಚಾರ ಮಾಡಬೇಕೆಂಬ ಬೇಡಿಕೆಯನ್ನ ದಾಸನ ಅಭಿಮಾನಿಗಳು ಇಟ್ಟಿದ್ದಾರೆ.. ಸಾಮಾಜಿಕ ಜಾಲತಾಣ್ದಲ್ಲಿ ಈ ಬಗ್ಗೆ ಮನವಿ ಮಾಡ್ತಿದ್ದಾರೆ..