ಎಷ್ಟೇ ಅಂತರಿಕ, ಬಾಹ್ಯ ಒತ್ತಡವಿದ್ದರೂ ಸಿಎಎ ವಿಚಾರದಲ್ಲಿ ಸರಕಾರದ ನಿರ್ಧಾರ ಅಚಲ. ಅದನ್ನು ಪುನರ್ ವಿರ್ಮಶೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರವಿವಾರ ಲೋಕಸಭಾ ಕ್ಷೇತ್ರವಾದ ವಾರಾಣಸಿಗೆ ಒಂದು ದಿನದ ಭೇಟಿ ನೀಡಿದ ಪ್ರಧಾನಿ ಮೋದಿ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.
ವಿಶ್ವವೇ ತಿರುಗಿ ಬಿದ್ದರೂ ಸಂವಿಧಾನದ 370ನೇ ವಿಧಿ, ಸಿಎಎ ಮುಂತಾದ ವಿಚಾರಗಳಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ದೇಶದ ಹಿತದೃಷ್ಟಿಯಿಂದ ಇದು ಅನಿವಾರ್ಯ. ದೇಶದ ಜನತೆಗಳೂ ದಶಕಗಳಿಂದ ಇಂಥ ದಿಟ್ಟ ನಿರ್ಧಾರದ ನಿರೀಕ್ಷೆಯಲ್ಲಿ ಇದ್ದಾರೆ ಎಂದರು.
ವಾರಾಣಸಿಯ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಮೋದಿ, 19 ಭಾಷೆಗಳಲ್ಲಿ ಭಾಷಾಂತರಿಸಿದ ಸಿದ್ಧಾಂತ ಶಿಖಾಮಣಿ ಗ್ರಂಥಗಳನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕನ್ನಡ, ತೆಲುಗು, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಮಾತನಾಡಿದಾಗ ಜನರು ಚಪ್ಪಾಳೆ ತಟ್ಟಿ ಸಂತೋಷ ವ್ಯಕ್ತಪಡಿಸಿದರು.
ಜೆನ್ಜೀ ಯುವಕರನ್ನು ಗಟರ್ ಎಂದ ಕಂಗನಾಗೆ ರಮ್ಯಾ ತರಾಟೆ-ಭಕ್ತಿ ಮತ್ತು ಗೌರವದ ಬಗ್ಗೆ ಖಡಕ್ ಪ್ರಶ್ನೆ:ಕಂಗನಾ ವರ್ಸಸ್ ರಮ್ಯಾ ಸೋಶಿಯಲ್ ಮೀಡಿಯಾ ವಾರ್
ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಯುವ ಸಮೂಹದ (ಜೆನ್ಜೀ) ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಸ್ಯಾಂಡಲ್ವುಡ್ ಮೋಹಕತಾರೆ, ಮಾಜಿ ಸಂಸದೆ ರಮ್ಯಾ...








