SRH ವಿರುದ್ಧ ಪಂಜಾಬ್ ಗೆ ಧವನ್ ಕ್ಯಾಪ್ಟನ್ ಆಗಿದ್ದು ಯಾಕೆ..?
ಪಂಜಾಬ್ ಕಿಂಗ್ಸ್ ತಂಡದ ನಾಯಕ ಮಯಾಂಕ್ ಅಗರ್ವಾಲ್ ಎಸ್ಆರ್ಎಚ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಬದಲು ಶಿಖರ್ ಧವನ್ ನಾಯಕತ್ವ ವಹಿಸಿಕೊಂಡಿದ್ದಾರೆ.
ಮಯಾಂಕ್ ಪಂದ್ಯದಿಂದ ದೂರ ಉಳಿದಿದ್ದು ಯಾಕೆ..? ಏಕಾಏಕಿ ಧವನ್ ಕ್ಯಾಪ್ಟನ್ ಆಗಿದ್ದು ಯಾಕೆ…? ಎಂಬ ಪ್ರಶ್ನೆಗಳಿಗೆ ಶಿಖರ್ ಧವನ್ ಸ್ಪಷ್ಟನೆ ನೀಡಿದ್ದಾರೆ.
ಟಾಸ್ ವೇಳೆ ಮಾತನಾಡಿದ ಧವನ್, ಮಯಾಂಕ್ ಅಗರ್ವಾಲ್ ಕಾಲ್ಬೆರಳ ಗಾಯದಿಂದ ಬಳಲುತ್ತಿದ್ದಾರೆ. ಸದ್ಯ ಅವರು ಈ ಪಂದ್ಯದಿಂದ ಮಾತ್ರ ಹೊರಗುಳಿದಿದ್ದಾರೆ.
ಅವರ ಸ್ಥಾನದಲ್ಲಿ ನಾನು ತಂಡವನ್ನು ಮುನ್ನಡೆಸುತ್ತೇನೆ. ಅವರ ಸ್ಥಿತಿ ಚೆನ್ನಾಗಿದೆ. ಬಹುಶಃ ಮಯಾಂಕ್ ಅಗರ್ವಾಲ್ ಮುಂದಿನ ಪಂದ್ಯಕ್ಕೆ ಲಭ್ಯರಾಗಬಹುದು ಎಂದಿದ್ದಾರೆ.
ಮತ್ತೊಂದೆಡೆ, ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ನಲ್ಲಿ ಈ ಋತುವಿನಲ್ಲಿ ಹೆಚ್ಚು ಗಮನ ಸೆಳೆಯುತ್ತಿಲ್ಲ.
ಮಯಾಂಕ್ ಬ್ಯಾಟ್ಸ್ಮನ್ ಆಗಿ ವಿಫಲವಾಗುತ್ತಿದ್ದು, ನಾಯಕನಾಗಿ ತಮ್ಮ ಪಾತ್ರವನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ.
ಪಂಜಾಬ್ ಕಿಂಗ್ಸ್ ಈ ಋತುವಿನಲ್ಲಿ ಇದುವರೆಗೆ ಆಡಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿದೆ ಮತ್ತು ಎರಡು ಪಂದ್ಯಗಳಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. dhawan-reveal-why-mayank-agarwal-not-playing