ಸೋದರಿಯ ಸಾವಿನ ಆಘಾತ ತಾಳಲಾರದೇ ಚಿತಗೆ ಹಾರಿದ ಯುವಕ……
ಸೋದರ ಸಂಬಂಧಿಯ ಸಾವಿನಿಂದ ಮನನೊಂದ 18 ವರ್ಷದ ಯುವಕ ಆಕೆಯ ಉರಿಯುತ್ತಿರುವ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ.
ಸಾಗರ್ ಜಿಲ್ಲೆಯ ಮಜ್ಗವಾನ್ ಗ್ರಾಮದ ಜ್ಯೋತಿ ಎಂಬವರು ಕಳೆದ ಶುಕ್ರವಾರ ತರಕಾರಿ ತರಲು ಜಮೀನಿಗೆ ತೆರಳಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮಹಿಳೆ ಸಾವಿನ ಬಗ್ಗೆ ಮಾಹಿತಿ ತಿಳಿದ ಬಳಿಕ 430 ಕಿಮೀ ದೂರದಲ್ಲಿ ವಾಸಿಸುತ್ತಿದ್ದ ಸೋದರ ಸಂಬಂಧಿ ಕರಣ (18) ಬೈಕ್ ನಲ್ಲಿ ಆಗಮಿಸಿದ್ದಾನೆ.
ಶುಕ್ರವಾರ ಸಂಜೆ ಮಹಿಳೆಯ ಅಂತಿಮ ಸಂಸ್ಕಾರದ ಬಳಿಕ ಮನೆಯವರು ಮನೆಗ ತೆರಳುತ್ತಿದ್ದರು. ಈ ವೇಳೆ ಸ್ವಲ್ಪ ಸಮಯದ ಬಳಿಕ ಕರಣ್ ಸ್ಮಶಾನಕ್ಕೆ ಬಂದು ಉರಿಯುತ್ತಿದ್ದ ಚಿತೆಗೆ ಹಾರಿದ್ದಾನೆ.
ಗ್ರಾಮಸ್ಥರು ಆತನನ್ನ ಎಳೆದುಕೊಂಡು ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯೆ ಆತ ಸಾವನ್ನಪ್ಪಿದ್ದಾನೆ. ಆತನ ನಡೆಗೆ ಇನ್ನೂ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸು ಹೇಳಿದ್ದಾರೆ.