ಸಿಡಿ ಪ್ರಕರಣ : ನಾನೇ ಅಲ್ಲ. ನನಗೆ ಗೊತ್ತೇ ಇಲ್ಲ ಅಂತ ಹೇಳಿ ಅವರೇ ಮಾತನಾಡ್ತಿದ್ದಾರೆ – ಡಿಕೆಶಿ
ಶಿವಮೊಗ್ಗ : ಸಿಡಿ ಪ್ರಕರಣ ಹಿನ್ನೆಲೆ ಯುವತಿ ಹೇಳಿಕೆ ಬಿಡುಗಡೆ ವಿಚಾರವಾಗಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಹಿಂದಿನಿಂದಲೂ ನಮ್ಮ ಮೇಲೆ ಏನೇನು ಷಡ್ಯಂತ್ರಗಳು ನಡೆದಿವೆಯೋ ಅವು ಈಗಲೂ ಮುಂದುವರೆದಿದೆ. ನಾನಿನ್ನು ಆ ವಿಡಿಯೋ ನೋಡಿಲ್ಲ. ಇವತ್ತು ಬೆಳಿಗ್ಗೆ ಪೇಪರ್ ನಲ್ಲಿ ಸ್ವಲ್ಪ ಓದಿದ್ದೆ. ಆ ಬಗ್ಗೆ ಮಾಹಿತಿ ತೆಗೆದುಕೊಂಡು ಮಾತನಾಡುತ್ತೆನೆ. ತನಿಖೆ ನಡೆಯುವ ವೇಳೆ ನಾನು ಆ ಬಗ್ಗೆ ಮಾತನಾಡುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷದವರು ಈ ಕೇಸಿನಲ್ಲಿದ್ದಾರೆ ಎಂದು ಒಬ್ಬ ಮಂತ್ರಿ ಮಾತನಾಡಿದ್ದಾರೆ. ಹೀಗಾಗಿ ನಾವುಗಳು ಈ ಬಗ್ಗೆ ಚರ್ಚಿಸಿ ಮಾತನಾಡುತ್ತೆವೆ ಎಂದಿದ್ದಾರೆ.
ಕೊರೊನಾ 2ನೇ ಅಲೆ : ಮತ್ತೆ ಲಾಕ್ ಡೌನ್ ಆಗುತ್ತಾ…! ಸಿಎಂ ಹೇಳಿದ್ದೇನು..?
ಇದೇ ವೇಳೆ ಯುವತಿ ಹೇಳಿಕೆ ನೀಡಿರುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಾರೆ. ಮಹಿಳಾ ಆಯೋಗದವರು ಇದ್ದಾರೆ. ಪೊಲಿಟಿಕಲ್ ಬ್ಯಾಕ್ ಗ್ರೌಂಡ್ ಇಲ್ಲ ಎಂದು ಯುವತಿ ಹೇಳಿದ್ದು ಗೊತ್ತಿಲ್ಲ. ಯತ್ನಾಳ್, ರಮೇಶ್ ಕುಮಾರ್ ಸೇರಿದಂತೆ, ಹಲವರು ಹೇಳಿಕೆ ನೀಡಿದ್ದರ ಬಗ್ಗೆ ಯಾಕೆ ದೂರು ದಾಖಲಾಗಿಲ್ಲ. ಸಿಡಿ ಬಗ್ಗೆ ಇವರು ದೂರು ದಾಖಲಿಸಬೇಕಿತ್ತು. ಜಾರಕಿಹೊಳಿ ಸಿಡಿ ಗುಮ್ಮ ಅಂದ್ರು, ಸಿಡಿ ಬಗ್ಗೆ ಮಾತನಾಡಿದ್ದಾರೆ. ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ. ಮಂತ್ರಿಗಳು, ನಾನೇ ಅಲ್ಲ. ನನಗೆ ಗೊತ್ತೇ ಇಲ್ಲ ಅಂತಾ ಹೇಳಿದ್ರು. ಈಗ ಎಲ್ಲವೂ ಅವರೇ ಹೇಳುತ್ತಿದ್ದಾರೆ. ನಾಗರಾಜ್ ದೂರು ನೀಡಿದರಷ್ಟೇ ಸಾಲದು, ನ್ಯಾಯಾಲಯಕ್ಕೆ ಹೋಗಿ ಅಫಿಡೆವಿಟ್ ಫೈಲ್ ಮಾಡಬೇಕು ಎಂದಿದ್ದಾರೆ.