ಕೊರೊನಾ corona ಬಗ್ಗೆ ಭಯ ಬೇಡ.. ಇರಲಿ ಎಚ್ಚರ : ಈ ಲಕ್ಷಣಗಳಿದ್ದರೇ ವೈದ್ಯರನ್ನ ಸಂಪರ್ಕಿಸಿ
ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಹುಚ್ಚು ಕುದುರೆಯಂತೆ ಓಡುತ್ತಿರುವ ಕೊರೊನಾ ದೇಶದಲ್ಲಿ ಸಿಕ್ಕ ಸಿಕ್ಕ ದೇಹವನ್ನ ಹೊಕ್ಕಿ ತಾಂಡವ ಆಡುತ್ತಿದೆ. ಈ ಹುಚ್ಚು ಕುದುರೆಗೆ ಕಡಿವಾಣ ಹಾಕಲು ಸರ್ಕಾರದ ಜೊತೆ ನಾವು ಕೈ ಜೋಡಸಬೇಕು. ಹೀಗಾಗಿ ಕೊರೊನಾ ಬಗ್ಗೆ ನಿರ್ಲಕ್ಷ್ಯ ತೋರದೇ ನಮ್ಮನ್ನ ನಾವು ಕಾಪಾಡಿಕೊಳ್ಳೋಣ.. ಋಣಾತ್ಮಾಕ ಸುದ್ದಿಗಳಿಗೆ ಕಿಡಿ ಕೊಡದೇ ಭಯ ಬಿಟ್ಟು ಧೈರ್ಯದಿಂದ ಕೊರೊನಾವನ್ನ ಎದುರಿಸೋಣ..
ಅಂದಹಾಗೆ ಕೋವಿಡ್ ಎರಡನೇ ಅಲೆಯಲ್ಲಿ ರೋಗಿಗಳಲ್ಲಿ ಹೊಸ-ಹೊಸ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಈ ಬಗ್ಗೆ ಜನ ನಿರ್ಲಕ್ಷ್ಯ ಮಾಡಬಾರದು ಎನ್ನುವುದು ವೈದ್ಯರ ಸಲಹೆಯಾಗಿದೆ.
ಹಾಗಾದ್ರೆ ಕೊರೊನಾದ ಹೊಸ ಲಕ್ಷಣಗಳೇನು ಅಂತಾ ನೋಡೋದಾದ್ರೆ..
ತೀವ್ರ ಜ್ವರ
ಒಣಕೆಮ್ಮು
ಗಂಟಲು ನೋವು
ಮೂಗು ನೋವು
ರುಚಿ ಕಳೆದುಕೊಳ್ಳುವುದು
ವಾಸನೆ ಕಂಡು ಹಿಡಿಯಲಾಗದು
ಹಸಿವು ಆಗದು
ಹೆಚ್ಚು ತಲೆನೋವು
ಆಯಾಸ, ಉಸಿರಾಟ ಸಮಸ್ಯೆ
ತೀವ್ರ ನೀರಸ
ಕಾಲು, ಕೈ, ನಡು ನೋವು
ಕಣ್ಣು ಕೆಂಪಾಗುವುದು
ನಾಲಿಗೆ ಗುಲಾಬಿ ಬಣ್ಣಕ್ಕೆ ತಿರುಗುವುದು
ಹೊಟ್ಟೆ ನೋವು
ವಾಂತಿ
ಹೊಟ್ಟೆ, ಕಾಲು ಉಬ್ಬುವುದು
ಜೀರ್ಣಕೋಶ ಸಮಸ್ಯೆ
ಅತಿಯಾದ ಮರೆವು
ನಿದ್ರಾ ಹೀನತೆ
ರಕ್ತದಲ್ಲಿ ಆಕ್ಸಿಜನ ಕಡಿಮೆ ಆಗುವುದು
ಕಫದಲ್ಲಿ ರಕ್ತ ಕಾಣಿಸಿಕೊಳ್ಳುವುದು
ಈ ಲಕ್ಷಣಗಳು ಕಾಣಿಸಿಕೊಂಡರೇ ನೀವು ಯಾವುದೇ ಭಯವಿಲ್ಲದೇ ವೈದ್ಯರನ್ನ ಸಂಪರ್ಕಿಸಿ ಸಲಹೆ ಪಡೀರಿ..