ಬಳ್ಳಾರಿ : ನಮಗೆ ಜನರ ಪ್ರಾಣ ಮುಖ್ಯ ಹಾಗಾಗಿ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಅನಿವಾರ್ಯವಾದರೇ ಲಾಕ್ ಡೌನ್ ಮಾಡಲು ಹಿಂಜರಿಯುವುದಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಇಂದು ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಶ್ರೀ ರಾಮುಲು, ರಾಜ್ಯದಲ್ಲಿ ಮಕ್ಕಳು ಧೈರ್ಯದಿಂದ ಪರೀಕ್ಷೆ ಬರೆಯುತ್ತಿದ್ದಾರೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಈಗಾಗಲೇ ಕೈಗೊಳ್ಳಲಾಗಿದೆ. ಇನ್ನು ಬೇರೆ ರಾಜ್ಯಗಳಲ್ಲಿ ಪರೀಕ್ಷೆ ಮುಂದೂಡಿದ್ದಾರೆ. ಆದರೆ ನಾವು ಮಾಡುತ್ತಿದ್ದೇವೆ ರಾಜ್ಯದ ಎಲ್ಲ ಮಕ್ಕಳಿಗೆ ಒಳ್ಳೆಯದಾಗಲಿ.
ಇನ್ನೂ ಬಳ್ಳಾರಿಯಲ್ಲಿ ಕೊರೊನಾ ಹೆಚ್ಚಳದ ಬಗ್ಗೆ ಕೇಳಿದ ಪ್ರಶ್ನೆಗೆ, ಎಲ್ಲ ಕಡೆಯೂ ಹೆಚ್ತಿದೆ ಈ ಬಗ್ಗೆ ಸರ್ವಪಕ್ಷ ಸಭೆ ನಡೆಸಿ ಸಲಹೆಗಳನ್ನು ಸ್ವೀಕರಿಸಿದ್ದೇವೆ. ನಿಯಂತ್ರಣ ಬಗ್ಗೆ ಹೆಚ್ಚು ನಿಗಾ ವಹಿಸಿದ್ದೇವೆ. ಜೊತೆಗೆ ಜಿಂದಾಲ್ ನಲ್ಲಿ ಹೆಚ್ಚಳವಾಗುತ್ತಿರುವ ಪ್ರಕರಣಗಳ ಬಗ್ಗೆ ಉಲ್ಲೇಖಿಸಿ. ಜನರ ಪ್ರಾಣ ನಮಗೆ ಮುಖ್ಯ ಜಿಂದಾಲ್ ಸಂಬಂದ ನಮಗೂ ದೂರುಗಳು ಬರುತ್ತಿವೆ. ಈ ವಿಚಾರವನ್ನು ನಿನ್ನೆ ಮತ್ತು ಮೊನ್ನೆಯೂ ನಾನು ಸಿ.ಎಂ ಗಮನಕ್ಕೆ ತಂದಿರುವೆ. ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ.
ಅಲ್ಲದೇ ಕೊರೊನಾ ಇನ್ನೂ ಮೂರನೇ ಹಂತಕ್ಕೆ ತಲುಪಿಲ್ಲ ಎರಡು ಮತ್ತು ಮೂರನೇ ಹಂತದ ನಡುವೆ ಇದೆ. ಮೂರನೇ ಹಂತಕ್ಕೆ ಕ್ರೂಷಿಯಲ್ ಅಗುತ್ತೆ. ನಾವು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.