ವರದಕ್ಷಿಣೆ ಕಿರುಕುಳ – ಮಗುವಿನೊಂದಿಗೆ ತಾಯಿ ಆತ್ಮಹತ್ಯೆ…
ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಗುವಿನೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೊರಬ ತಾಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ನಡೆದಿದೆ.
27 ವರ್ಷದ ನಯನಾ ಮತ್ತು ಆಕೆಯ ಮಗ ಗುರು (4) ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಗಳು. 5 ವರ್ಷಗಳ ಹಿಂದೆ ಕುಂಭತ್ತಿ ಗ್ರಾಮದ ನಯನಾ, ಕಪ್ಪಗಳಲೆ ಗ್ರಾಮದ ಶರತ್ ಪ್ರೀತಿಸಿ ವಿವಾಹವಾಗಿದ್ದರು. ಮಗಳು ಮತ್ತು ಮೊಮ್ಮಗನ ಸಾವಿಗೆ ಆಕೆಯ ಪತಿ ಮತ್ತವನ ಕುಟುಂಬ ಕಾರಣ ಎಂದು ತಂದೆ ನಾಗರಾಜ್ ದೂರು ನೀಡಿದ್ದಾರೆ.
ನಯನಾ ಪತಿ ಶರತ್, ಮಾವ ಹಾಲೇಶ್ ಹಾಗೂ ಅತ್ತೆ ಸೀತಮ್ಮ ನೀಡುತ್ತಿದ್ದ ವರದಕ್ಷಿಣೆ ಕಿರುಕುಳ ಕಾರಣ ಎಂದು ನಾಗರಾಜ್ ದೂರು ನೀಡಿದ್ದಾರೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪತಿ ಶರತ್ ನನ್ನ ಬಂಧಿಸಿದ್ದಾರೆ.
Dowry case mother and toddler commit suicide in Soraba taluk in Shivamogga husband arrested