ಬೆಂಗಳೂರು: ಡ್ರಗ್ಸ್ ಮಾಫಿಯಾ ನಂಟು ಸ್ಯಾಂಡಲ್ವುಡ್ಗೆ ಮಾತ್ರವಲ್ಲ, ಕನ್ನಡದ ಕಿರುತೆರೆ ಲೋಕಕ್ಕೂ ಅಂಟಿಕೊಂಡಿದೆ. ದೇಶಾದ್ಯಂತ ಜಾರಿ ಮಾಡಲಾದ ಲಾಕ್ಡೌನ್ನಿಂದ ಜನರು ಮನೆಯಲ್ಲಿ ಇದ್ದರೆ, ಈ ನಟ-ನಟಿಯರು, ಡ್ರಗ್ಸ್ ಪೆಡ್ಲರ್ಗಳು, ರಾಜಕಾರಣಿಗಳ ಮಕ್ಕಳು, ಸೀರಿಯಲ್ ನಟ-ನಟಿಯರು ಸ್ಮೈಲ್ ಪಾರ್ಟಿಗಳ ನೆಪದಲ್ಲಿ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದರು.
ಡ್ರಗ್ಸ್ ಜಾಲದ ನಂಟಿನೊಂದಿಗೆ ಸಂಪರ್ಕಹೊಂದಿರುವ ಆರೋಪದಡಿ ಗಟ್ಟಿಮೇಳ ಧಾರಾವಾಹಿಯ ಪಾತ್ರ ನಿರ್ವಹಿಸುತ್ತಿರುವ ನಟ ಅಭಿಷೇಕ್ ದಾಸ್, ರಶ್ಮಿಕಾ ಚಂಗಪ್ಪ ಹಾಗೂ ಬ್ರಹ್ಮಗಂಟು ಧಾರಾವಾಹಿಯ ಗೀತಾ ಪಾತ್ರದಾರಿ ಗೀತಾ ಭಾರತಿ ಭಟ್ಗೆ ಐಎಸ್ಡಿ(ಆತಂರಿಕ ಭದ್ರತಾ ದಳ) ನೋಟಿಸ್ ನೀಡಿತ್ತು.
ಇಂದು ಬೆಳಿಗ್ಗೆ 10 ಗಂಟೆಗೆ ಮೂವರೂ ವಿಚಾರಣೆಗೆ ಹಾಜರಾಗುವಂತೆ ಐಎಸ್ಡಿ ನೋಟಿಸ್ ನೀಡಿದೆ. ಈ ಹಿನ್ನೆಲೆಯಲ್ಲಿ ಅಭಿಷೇಕ್, ರಶ್ಮಿಕಾ ಹಾಗೂ ಗೀತಾ ಅವರನ್ನು ಶಾಂತಿನಗರದಲ್ಲಿರುವ ಆತಂರಿಕ ಭದ್ರತಾ ದಳದ ಕಚೇರಿಯಲ್ಲಿ ವಿಚಾರಣೆ ನಡೆಯಲಿದೆ.
ಮಾಜಿ ಪೊಲೀಸ್ ಕಮೀನಷರ್ ಹಾಗೂ ಹಾಲಿ ಐಎಸ್ಡಿ ಮುಖ್ಯಸ್ಥ ಭಾಸ್ಕರರಾವ್ ನೇತೃತ್ವದ ತಂಡ ಮೂವರು ನಟ-ನಟಿಯರ ವಿಚಾರಣೆ ನಡೆಸಲಿದೆ.
ಕೇವಲ ಸಿಸಿಬಿ ಪೊಲೀಸರು ನೋಟಿಸ್ ಕೊಡ್ತಾರೋ ಇಲ್ಲವೋ ಎಂದುಕೊಂಡಿದ್ದ ಡ್ರಗ್ಸ್ ನಶೆಕೋರರಿಗೆ ಐಎಸ್ಡಿ ಗುನ್ನಾ ಕೊಟ್ಟಿದೆ. ಲೂಸ್ ಮಾದ ಯೋಗೇಶ್, ಕ್ರಿಕೆಟಿಗ ಅಯ್ಯಪ್ಪ ವಿಚಾರಣೆ ಬಳಿಕ ಸ್ಯಾಂಡಲ್ವುಡ್ ಹಾಗೂ ಕ್ರಿಕೆಟಿಗರಿಗೆ ಮರ್ಮಾಘಾತವಾಗಿದೆ. ವಿಚಾರಣೆ ಬಳಿ ಲೂಸ್ ಮಾದ ಯೋಗೇಶ್ ಫೋನ್ ಸ್ವಿಚ್ ಮಾಡಿಕೊಂಡಿದ್ದಾರೆ. ಮುಂದೇನು ಕಾದಿದೆಯೋ ಎಂಬ ಆತಂಕ ಹಲವರನ್ನು ಕಾಡಲಾರಂಭಿಸಿದೆ.