ಬೆಳಗಾವಿ: ಕಾರು ತೊಳೆಯುವ ವೇಳೆ ವಿದ್ಯುತ್ ಶಾಕ್ ನಿಂದಾಗಿ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅನಗೋಳ ನಿವಾಸಿ ರಜತ್ ಗೌರವ್ (14) ಸಾವನ್ನಪ್ಪಿದ ದುರ್ದೈವಿ ಎನ್ನಲಾಗಿದೆ. ನಗರದಲ್ಲಿನ ಭಾಗ್ಯ ನಗರದಲ್ಲಿ ಈ ಘಟನೆ ನಡೆದಿದೆ. ರಜತ್ ಪೇಪರ್ ಹಾಕುತ್ತಿದ್ದ. ಈ ವೇಳೆ ಯಲ್ಲಪ್ಪ ಚೌಗಲೆ ಎಂಬುವವರು ಕಾರು ತೊಳೆಯಲು ಸೂಚಿಸಿದ್ದಾರೆ.
ಹಣ ನೀಡುವುದಾಗಿ ಹೇಳಿದ್ದಕ್ಕೆ ಬಾಲಕ ಕಾರು ತೊಳೆಯಲು ಒಪ್ಪಿಕೊಂಡಿದ್ದಾನೆ. ಈ ವೇಳೆ ಮೋಟರ್ನ ವೈಯರ್ ತುಂಡಾಗಿದ್ದು, ಅದನ್ನು ಗಮನಿಸಿದೆ ಬಾಲಕ ಮುಟ್ಟಿದ್ದಾನೆ. ಈ ವೇಳೆ ಆತ ಒದ್ದಾಡಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಕಾರು ತೊಳೆಯಲು ಹೇಳಿದ್ದ ಯಲ್ಲಪ್ಪ ಚೌಗಲೆ ಮೇಲೆ ಕ್ರಮ ಕೈಗೊಳ್ಳಬೇಕೆಂದು ರಜತ್ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಸದ್ಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಯಲ್ಲಪ್ಪ ವಿರುದ್ಧ ದೂರು ದಾಖಲಾಗಿದೆ.