ಉಗ್ರರೊಂದಿಗೆ ಗುಂಡಿನ ಚಕಮಕಿ : ಬೀದರ್ ನ ಯೋಧ ಹುತಾತ್ಮ
ಬೀದರ್ : ಪಂಜಾಬ್ ಗಡಿಯಲ್ಲಿ ಮಂಗಳವಾರ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಕಾರ್ಯಾಚರಣೆಯಲ್ಲಿ ಜಿಲ್ಲೆಯ ಬಿಎಸ್.ಎಫ್ ಯೋಧ ಹುತಾತ್ಮರಾಗಿದ್ದಾರೆ.
ಔರಾದ ತಾಲೂಕಿನ ಆಲೂರ(ಬಿ) ಗ್ರಾಮದ ಬಸವರಾಜ ಗಣಪತಿ (31) ಗುಂಡಿನ ಚಕಮಕಿಯಲ್ಲಿ ಅಸುನಿಗಿದ್ದಾರೆ.
ಮಂಗಳವಾರ ಸಂಜೆ 6ರ ಸುಮಾರಿಗೆ ಸೇನಾಧಿಕಾರಿಗಳು ಬಸವರಾಜ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
2013ರಲ್ಲಿ ಭಾರತೀಯ ಸೇನೆಯಲ್ಲಿ ಸೇರಿದ್ದ ಬಸವರಾಜ ಇಂದೋರನಲ್ಲಿ ತರಬೇತಿಯನ್ನು ಪಡೆದು ನಂತರ ಕಲ್ಕತ್ತಾ ಮತ್ತು ತ್ರಿಪುರಾದಲ್ಲಿ ಸೇವೆ ಸಲ್ಲಿಸಿ ಕಳೆದ 20 ದಿನಗಳ ಹಿಂದೆಯಷ್ಟೇ ಪಂಜಾಬ್ ಗಡಿಗೆ ನಿಯುಕ್ತಿ ಗೊಂಡಿದ್ದರು.
ಸ್ವ ಗ್ರಾಮಕ್ಕೆ ಪಾರ್ಥಿವವಶರೀರ ಹೈದರಾಬಾದ್ ಮೂಲಕವಾಗಿ ನಾಳೆ ಸ್ವ ಗ್ರಾಮಕ್ಕೆ ತರಲಾಗುತ್ತದೆ ಎಂಬ ಮಾಹಿತಿ ಕುಟುಂಬದ ಮೂಲಗಳು ತಿಳಿಸಿವೆ.