ADVERTISEMENT
Monday, June 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬದಲಾಗಬೇಕಿದೆ ಅಬಕಾರಿ ನೀತಿ, ಸಾಮಾನ್ಯರ ಕೈಗೂ ಸಿಗಬೇಕು ಬೆಸ್ಟ್ ಬ್ರಾಂಡ್ ..!

Mahesh M Dhandu by Mahesh M Dhandu
December 15, 2021
in Newsbeat, State, ರಾಜ್ಯ
Mumbai home delivery of liquor
Share on FacebookShare on TwitterShare on WhatsappShare on Telegram

ಬದಲಾಗಬೇಕಿದೆ ಅಬಕಾರಿ ನೀತಿ, ಸಾಮಾನ್ಯರ ಕೈಗೂ ಸಿಗಬೇಕು ಬೆಸ್ಟ್ ಬ್ರಾಂಡ್ ..!

ಎಣ್ಣೆ ಪ್ರಿಯರುಎಣ್ಣೆ ಸಿಕ್ಕರಾಯ್ತು, ಬ್ರಾಂಡ್ ಯಾವುದಾದರೇನು..? ಕುಡಿದು ನೆಮ್ಮದಿಯಾಗಿ ಇದ್ದರೆ ಸಾಕು ಅನ್ನುವವರೇ ಹೆಚ್ಚು. ಆದರೆ ಕಡಿಮೆ ದರದ ಕಳಪೆ ಗುಣಮಟ್ಟದ ಆಲ್ಕೋಹಾಲ್ ದೇಹಕ್ಕೆ ಹಾನಿಕಾರಕ. ಇದರಿಂದ ಸರ್ಕಾರದ ಖಜಾನೆಗೂ ನಷ್ಟ. ಕೇವಲ ಕಡಿಮೆ ಬೆಲೆಯಲ್ಲಿ ಲಿಕ್ಕರ್ ಸಿಗುತ್ತದೆ ಅನ್ನುವ ಒಂದೇ ಕಾರಣಕ್ಕೆ ಕಡಿಮೆ ಗುಣಮಟ್ಟದ, ಕಳಪೆ ಬ್ರಾಂಡ್ ಗಳ ಆಲ್ಕೋಹಾಲ್ ಕರ್ನಾಟಕದಲ್ಲಿ ಮಾರಾಟವಾಗುತ್ತಿದೆ. ಕಳಪೆ ಗುಣಮಟ್ಟದ, ಕಳಪೆ ಬ್ರಾಂಡ್​​ಗಳ ಮಾರಾಟ, ದೊಡ್ಡ ದೊಡ್ಡ ಬ್ರಾಂಡ್​​ಗಳ ಮಾರಾಟಕ್ಕೆ ತೀವ್ರ ಹೊಡೆತ ನೀಡಿದೆ. ಉತ್ತಮ ಬ್ರಾಂಡ್​​ಗಳಿಗೆ ಬೆಲೆಯೂ ಹೆಚ್ಚಿರುವುದರಿಂದ ಕಡಿಮೆ ಗುಣಮಟ್ಟದ ಮತ್ತು ಕಳಪೆ ಬ್ರಾಂಡ್​​ಗಳೇ ರಾಜ್ಯದಲ್ಲಿದ ಮಾರುಕಟ್ಟೆಗಳಲ್ಲಿ ದರ್ಬಾರ್ ಮಾಡುತ್ತಿವೆ. Liquor saaksha tv

Related posts

ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಕ್ಯಾರವನ್ ಮಾಲೀಕರಾದ ಬಾದ್‌ಷಾ ಕಿಚ್ಚ ಸುದೀಪ್

ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಕ್ಯಾರವನ್ ಮಾಲೀಕರಾದ ಬಾದ್‌ಷಾ ಕಿಚ್ಚ ಸುದೀಪ್

June 28, 2026
ಬೆಂಗಳೂರು ನವನಿರ್ಮಾಣಕ್ಕೆ ಡಿಕೆ ಶಿವಕುಮಾರ್ 1.5 ಲಕ್ಷ ಕೋಟಿ ಮಾಸ್ಟರ್ ಪ್ಲಾನ್: ಟೀಕೆಗಳು ತಾತ್ಕಾಲಿಕ ಕೆಲಸಗಳು ಶಾಶ್ವತ;ಇತಿಹಾಸ ಸೃಷ್ಟಿಸಲು ಮೂರು ಕೆ ಗಳ ಮಂತ್ರ ಜಪಿಸಿದ CM

ಬೆಂಗಳೂರು ನವನಿರ್ಮಾಣಕ್ಕೆ ಡಿಕೆ ಶಿವಕುಮಾರ್ 1.5 ಲಕ್ಷ ಕೋಟಿ ಮಾಸ್ಟರ್ ಪ್ಲಾನ್: ಟೀಕೆಗಳು ತಾತ್ಕಾಲಿಕ ಕೆಲಸಗಳು ಶಾಶ್ವತ;ಇತಿಹಾಸ ಸೃಷ್ಟಿಸಲು ಮೂರು ಕೆ ಗಳ ಮಂತ್ರ ಜಪಿಸಿದ CM

June 28, 2026

ಕರ್ನಾಟಕದ ರೆಡ್ಡಿ (ಹೆಸರು ಬದಲಿಸಲಾಗಿದೆ) ಅನ್ನುವವರು ದೆಹಲಿಯ ಇಂದಿರಾ ಗಾಂಧಿ ಇಂಟರ್ ನ್ಯಾಷನಲ್ ಏರ್ಪೋಟ್ ಗೆ 4 ಗಂಟೆ ಮುಂಚಿತವಾಗಿ ತಲುಪಿದ್ದರು. ಹೇಗೂ ಸಮಯವಿದೆಯಲ್ಲ ಅನ್ನುವ ಯೋಚನೆಯಲ್ಲಿ ದೊಡ್ಡ ಕ್ಯೂ ಇದ್ದರೂ ಅದರಲ್ಲೇ ನಿಂತು ಎರಡು ಉತ್ತಮ ಬ್ರಾಂಡ್​​ನ ವಿಸ್ಕಿ ಖರೀದಿ ಮಾಡಿ ಖುಷಿಯಾಗಿದ್ದರು. ಯಾಕೆ ಹೀಗೆ ಅಂತ ಕೇಳಿದಾಗ, ರೆಡ್ಡಿಯವರು ಹೇಳಿದ್ದು ಅಚ್ಚರಿ ತಂದಿತ್ತು. ಐಜಿಐನಲ್ಲಿ ಖರೀದಿ ಮಾಡಿದ ವಿಸ್ಕಿಯ ಬೆಲೆ ಕಡಿಮೆ ಇದ್ದರೂ ಬ್ರಾಂಡ್ ದೊಡ್ಡದಿತ್ತು. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಈ ಬ್ರಾಂಡ್​​ಗಳು ಸಿಗುತ್ತಿಲ್ಲ ಅಂದಿದ್ದು ಅಚ್ಚರಿ ಮೂಡಿಸಿತ್ತು. ಇದು ರೆಡ್ಡಿ ಒಬ್ಬರ ಕಥೆಯಲ್ಲ, ಹಲವು ವಿಸ್ಕಿ ಮತ್ತು ಆಲ್ಕೋಹಾಲ್ ಪ್ರಿಯರು ದೆಹಲಿಗೆ ಹೋಗುವ ಅವಕಾಶ ಸಿಕ್ಕಾಗಲೆಲ್ಲಾ ಐಜಿಐ ಏರ್ಪೋರ್ಟ್ ನಿಂದ ಖರೀದಿ ಮಾಡಿದ ಉದಾಹರಣೆಗಳಿವೆ.

ರಾಜ್ಯದ ಈ ಸ್ಥಿತಿ ಕೇವಲ ಎಣ್ಣೆ ಪ್ರಿಯರ ಆರೋಗ್ಯಕ್ಕೆ ಮಾತ್ರ ಹೊಡೆತವಲ್ಲ. ಬದಲಾಗಿ ಆದಾಯಕ್ಕೂ ಕೊಕ್ಕೆ ಹಾಕಿದೆ. ರಾಜ್ಯದ ಲಿಕ್ಕರ್ ಪಾಲಿಸಿಯಿಂದ ಅಬಕಾರಿ ಇಲಾಖೆಯ ಆದಾಯಕ್ಕೂ ಹೊಡೆತ ಬೀಳುತ್ತಿದೆ. ಅಚ್ಚರಿ ಅಂದ್ರೆ Indian Made Foreign Liquor ಮಾರ್ಕೆಟ್ ನಲ್ಲಿ ಕರ್ನಾಟಕ ಪಾಲು ದೇಶದಲ್ಲೇ ಹೆಚ್ಚಿದೆ. ಆದರೆ ಕರ್ನಾಟಕದ ಅಬಕಾರಿ ನೀತಿ IMFL ಪ್ರಿಯರನ್ನು ಅವರ ಆಯ್ಕೆಯ ಬ್ರಾಂಡ್​​ನಿಂದ ಹೊರಗಿಟ್ಟಿದೆ. ಅಷ್ಟೇ ಅಲ್ಲ ಅಬಕಾರಿ ಇಲಾಖೆಯ ಖಜಾನೆ ಕೂಡ ತುಂಬುತ್ತಿಲ್ಲ.

Liquor saaksha tv

ಕರ್ನಾಟಕ ದಕ್ಷಣ ಭಾರತದಲ್ಲಿ ಅತೀ ಹೆಚ್ಚು ಬಾಟಲ್ಡ್ ಆಲ್ಕೋಹಾಲ್ ಮಾರಾಟ ಮಾಡುತ್ತಿದೆ. ಆದರೆ ಅಬಕಾರಿ ಇಲಾಖೆಯಿಂದ ತೆರಿಗೆ ರೂಪದಲ್ಲಿ ಖಜಾನೆ ಸೇರುವ ಮತ್ತ ಮಾತ್ರ ಇತರೆ ರಾಜ್ಯಕ್ಕೆ ಹೋಲಿಸಿದರೆ ತುಂಬಾ ಕಡಿಮೆ. ನೆರೆಯ ತೆಲಂಗಾಣದಲ್ಲಿ ಕರ್ನಾಟಕದಲ್ಲಿ ಮಾರಾಟವಾಗುವ ಆಲ್ಕೋಹಾಲ್ ಪೈಕಿ ಕೇವಲ 50 ಪ್ರತಿಶತ ಮಾತ್ರ ಮಾರಾಟವಾಗುತ್ತದೆ. ಆದರೆ ಅಲ್ಲಿನ ಅಬಕಾರಿ ಆದಾಯ ಹೆಚ್ಚಿದೆ. ಕರ್ನಾಟಕದಲ್ಲಿ ಪ್ರೀಮಿಯರ್ ಮತ್ತು IMFL ಬ್ರಾಂಡ್​ಗೆ ಹೆಚ್ಚು ಬೇಡಿಕೆ ಇದೆ ಅನ್ನುವುದು ಸ್ಪಷ್ಟ. ಇದರಿಂದ ಅಬಕಾರಿ ಇಲಾಖೆಗೂ ಹೆಚ್ಚು ಆದಾಯ ಬರುವುದು ಖಚಿತ. ಆದರೆ ಕರ್ನಾಟಕದ ಅಬಕಾರಿ ನೀತಿ ಬದಲಾಗಬೇಕಿದೆ.

ಕಡಿಮೆ ಗುಣಮಟ್ಟದ ಮತ್ತು ಕಳಪೆ ಬ್ರಾಂಡ್ ಗಳ ಮಾರಾಟದಿಂದ ಎಣ್ಣೆ ಪ್ರಿಯರ ಆರೋಗ್ಯದ ಮೇಲೂ ಪ್ರಭಾವ ಬೀರಿದೆ. ಕೆಲಸಗಾರರು ಕಡಿಮೆ ಬೆಲೆಯಲ್ಲಿ ಮದ್ಯ ಸಿಗುತ್ತದೆ ಅನ್ನುವ ಕಾರಣಕ್ಕಾಗಿ ತಮ್ಮ ಆರೋಗ್ಯವನ್ನು ಬಲಿಕೊಡುತ್ತಿದ್ದಾರೆ. ಹೀಗಾಗಿ ಸರ್ಕಾರ ಅತೀ ಶೀಘ್ರದಲ್ಲಿ ತನ್ನ ಅಬಕಾರಿ ನೀತಿಯನ್ನು ಬದಲಿಸಬೇಕಿದೆ. ಹೊಸ ಅಬಕಾರಿ ನೀತಿಯಿಂದ ಜನರ ಆರೋಗ್ಯವೂ ಉತ್ತಮಗೊಳ್ಳುವುದಲ್ಲದೆ ಅಬಕಾರಿ ಇಲಾಖೆಯ ಖಜಾನೆಗೆ ಟ್ಯಾಕ್ಸ್ ಮೂಲಕ ಕೋಟ್ಯಾಂಟರ ರೂಪಾಯಿ ಹರಿದುಬರಲಿದೆ.

Tags: #Saaksha TVForeign LiquorIndian Made Foreign LiquorLIQUOR
ShareTweetSendShare
Join us on:

Related Posts

ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಕ್ಯಾರವನ್ ಮಾಲೀಕರಾದ ಬಾದ್‌ಷಾ ಕಿಚ್ಚ ಸುದೀಪ್

ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಕ್ಯಾರವನ್ ಮಾಲೀಕರಾದ ಬಾದ್‌ಷಾ ಕಿಚ್ಚ ಸುದೀಪ್

by Shwetha
June 28, 2026
0

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ವಾಹನ ಪ್ರೇಮ ಇಡೀ ದೇಶಕ್ಕೇ ಗೊತ್ತು. ಅವರ ಬಳಿ ಇರುವ ಐಷಾರಾಮಿ ಕಾರುಗಳ ಸಾಲಿಗೆ ಈಗ ವಿಮಾನದಂತಹ...

ಬೆಂಗಳೂರು ನವನಿರ್ಮಾಣಕ್ಕೆ ಡಿಕೆ ಶಿವಕುಮಾರ್ 1.5 ಲಕ್ಷ ಕೋಟಿ ಮಾಸ್ಟರ್ ಪ್ಲಾನ್: ಟೀಕೆಗಳು ತಾತ್ಕಾಲಿಕ ಕೆಲಸಗಳು ಶಾಶ್ವತ;ಇತಿಹಾಸ ಸೃಷ್ಟಿಸಲು ಮೂರು ಕೆ ಗಳ ಮಂತ್ರ ಜಪಿಸಿದ CM

ಬೆಂಗಳೂರು ನವನಿರ್ಮಾಣಕ್ಕೆ ಡಿಕೆ ಶಿವಕುಮಾರ್ 1.5 ಲಕ್ಷ ಕೋಟಿ ಮಾಸ್ಟರ್ ಪ್ಲಾನ್: ಟೀಕೆಗಳು ತಾತ್ಕಾಲಿಕ ಕೆಲಸಗಳು ಶಾಶ್ವತ;ಇತಿಹಾಸ ಸೃಷ್ಟಿಸಲು ಮೂರು ಕೆ ಗಳ ಮಂತ್ರ ಜಪಿಸಿದ CM

by Shwetha
June 28, 2026
0

ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬರೋಬ್ಬರಿ ಒಂದೂವರೆ ಲಕ್ಷ ಕೋಟಿ ರೂಪಾಯಿಗಳ ಬೃಹತ್ ಯೋಜನೆಯನ್ನು ಘೋಷಿಸುವ ಮೂಲಕ...

ಗ್ಯಾಂಗ್‌ಸ್ಟರ್ ಅವತಾರದಲ್ಲಿ ವಿನೋದ್ ಪ್ರಭಾಕರ್ ಅಬ್ಬರ: 80ರ ದಶಕದ ಭೂಗತ ಲೋಕಕ್ಕೆ ಮತ್ತೆ ಕರೆದೊಯ್ದ ಬಲರಾಮ

ಗ್ಯಾಂಗ್‌ಸ್ಟರ್ ಅವತಾರದಲ್ಲಿ ವಿನೋದ್ ಪ್ರಭಾಕರ್ ಅಬ್ಬರ: 80ರ ದಶಕದ ಭೂಗತ ಲೋಕಕ್ಕೆ ಮತ್ತೆ ಕರೆದೊಯ್ದ ಬಲರಾಮ

by Shwetha
June 28, 2026
0

2007 ರಲ್ಲಿ ತೆರೆಕಂಡ ಆ ದಿನಗಳು ಸಿನಿಮಾ ಕನ್ನಡ ಚಿತ್ರರಂಗದ ಮಟ್ಟಿಗೆ ಒಂದು ಮೈಲಿಗಲ್ಲು. ರಕ್ತಪಾತವಿಲ್ಲದೆಯೂ ಭೂಗತ ಲೋಕದ ಕಥೆಯನ್ನು ಎಷ್ಟು ಕಲಾತ್ಮಕವಾಗಿ ಹೇಳಬಹುದು ಎಂದು ನಿರ್ದೇಶಕ...

ಕೆಂಪೇಗೌಡ ಜಯಂತಿಯಲ್ಲಿ ಹೈಡ್ರಾಮಾ ಮೀಸೆ ತಿರುವಿದ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪೊಲೀಸರಿಗೆ ಬಿತ್ತು ಪೆಟ್ಟು : ಪ್ರದೀಪ್ ಈಶ್ವರ್ ಹಾವಭಾವಕ್ಕೆ ಕೆರಳಿದ ಜೆಡಿಎಸ್ ಕಾರ್ಯಕರ್ತರು

ಕೆಂಪೇಗೌಡ ಜಯಂತಿಯಲ್ಲಿ ಹೈಡ್ರಾಮಾ ಮೀಸೆ ತಿರುವಿದ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪೊಲೀಸರಿಗೆ ಬಿತ್ತು ಪೆಟ್ಟು : ಪ್ರದೀಪ್ ಈಶ್ವರ್ ಹಾವಭಾವಕ್ಕೆ ಕೆರಳಿದ ಜೆಡಿಎಸ್ ಕಾರ್ಯಕರ್ತರು

by Shwetha
June 28, 2026
0

ಚಿಕ್ಕಬಳ್ಳಾಪುರ:ನಗರದ ಕನ್ನಡ ಭವನದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವು ರಣರಂಗವಾಗಿ ಮಾರ್ಪಟ್ಟಿತು. ಶಾಸಕ ಪ್ರದೀಪ್ ಈಶ್ವರ್ ಅವರ ವರ್ತನೆ ಹಾಗೂ ಅವರ ವಿರುದ್ಧ ಒಕ್ಕಲಿಗ...

ಆರ್‌ಎಸ್‌ಎಸ್‌ ವಿರುದ್ಧದ ಅವಹೇಳನಕಾರಿ ಹೇಳಿಕೆ ಪ್ರಕರಣ: ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮೊಹಮ್ಮದ್ ನಲಪಾಡ್‌ಗೆ ಕೋರ್ಟ್‌ನಿಂದ ಸಮನ್ಸ್ ಜಾರಿ

ಆರ್‌ಎಸ್‌ಎಸ್‌ ವಿರುದ್ಧದ ಅವಹೇಳನಕಾರಿ ಹೇಳಿಕೆ ಪ್ರಕರಣ: ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮೊಹಮ್ಮದ್ ನಲಪಾಡ್‌ಗೆ ಕೋರ್ಟ್‌ನಿಂದ ಸಮನ್ಸ್ ಜಾರಿ

by Shwetha
June 28, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರ್‌ಎಸ್‌ಎಸ್‌ ಸಂಘಟನೆಯ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಯೂತ್ ಕಾಂಗ್ರೆಸ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram