ಪುತ್ತೂರು ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನ್ನಛತ್ರದ ಬಳಿ ಅಪರಿಚಿತರು ಸ್ಫೋಟಕ ಸಿಡಿಸಿ ಪರಾರಿಯಾದ ಘಟನೆ ನಡೆದಿದೆ. ಮಾರ್ಚ್ 4ರ ರಾತ್ರಿ ಸುಮಾರು 11.45ರ ಸಮಯದಲ್ಲಿ ದೇವಸ್ಥಾನದ ಬಳಿಯಿಂದ ಭಾರಿ ಪ್ರಮಾಣದಲ್ಲಿ ಸಿಡಿಮದ್ದು ಸಿಡಿದ ಸದ್ದು ಕೇಳಿಸಿತ್ತು. ಇದರಿಂದ ಭಯಭೀತರಾದ ನಿವಾಸಿಗಳು ಬಂದು ನೋಡಿದಾಗ ಅಪರಿಚಿತರ ತಂಡವೊಂದು ಸ್ಫೋಟಕ ಸಿಡಿಸಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ಪುತ್ತೂರು ನಗರ ಠಾಣಾ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ತನಿಖೆ ನಡೆಸುತ್ತಿದ್ದಾರೆ.