ಸೇನಾ ಹೆಲಿಕಾಫ್ಟರ್ ಪತನದ ಬಗ್ಗೆ ಪ್ರತ್ಯಕ್ಷದರ್ಶಿಯ ಮಾತು
ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರಿದ್ದ ಹೆಲಿಕಾಫ್ಟರ್ ಪತನದ ಬಗ್ಗೆ ಪ್ರತ್ಯಕ್ಷದರ್ಶಿಗಳು ನೋಡಿ ಅದನ್ನ ತಿಳಿಸಿದ್ದಾರೆ. ಅಪಘಾತದ ನಂತರ, ಹೆಲಿಕಾಪ್ಟರ್ ಮರಗಳಿಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು, ಅದರಿಂದ ಬೆಂಕಿ ಹೊತ್ತಿಕೊಂಡ ಜನರು ಹೊರಬಂದರು ಎಂದು ತಿಳಿಸಿದ್ದಾರೆ.
ಸೇನೆಯ ಎಂಐ-17 ಹೆಲಿಕಾಪ್ಟರ್ ತಮಿಳುನಾಡಿನ ಕೂನೂರಿನಲ್ಲಿ ಬುಧವಾರ ಪತನಗೊಂಡಿದೆ. ಅದರಲ್ಲಿ 14 ಮಂದಿ ಇದ್ದರು. ಅವರಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ಸೇರಿದ್ದಾರೆ. ಅಪಘಾತ ಸಂಭವಿಸಿದ ಪ್ರದೇಶದಲ್ಲಿ ದಟ್ಟವಾದ ಹೊಗೆ ಕವಿದಿತ್ತು. ಅವಘಡಕ್ಕೆ ಹವಾಮಾನ ವೈಪರೀತ್ಯವೇ ಕಾರಣ ಎಂದು ಅಂದಾಜಿಸಲಾಗಿದೆ.
ಅಪಘಾತ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳ ಪ್ರಕಾರ.., ಹೆಲಿಕಾಪ್ಟರ್ ವೇಗವಾಗಿ ಮರಗಳ ಮೇಲೆ ಬಿತ್ತು, ತಕ್ಷಣವೆ ಬೆಂಕಿ ಹೊತ್ತಿಕೊಂಡಿತು. ಎಂದು ಹೇಳಿದ್ದಾರೆ.
ಘಟನೆಯ ಪ್ರತ್ಯಕ್ಷದರ್ಶಿ ಕೃಷ್ಣಸ್ವಾಮಿ ಮಾತನಾಡಿ, ನಾನು ಮನೆಯಲ್ಲಿದ್ದೆ ಹೊರಗಡೆ ದೊಡ್ಡ ಶಬ್ದ ಕೇಳಿಸಿತು. ಹೊರಗೆ ಬಂದು ನೋಡಿದಾಗ ಹೆಲಿಕಾಪ್ಟರ್ ಪತನವಾಗಿತ್ತು. ಒಂದರ ಹಿಂದೆ ಒಂದರಂತೆ ಎರಡು ಮರಗಳಿಗೆ ಅಪ್ಪಳಿಸಿತು. ಆ ಬಳಿಕ ಬೆಂಕಿ ಹೊತ್ತಿಕೊಂಡಿದೆ. ಹೆಲಿಕಾಪ್ಟರ್ನಿಂದ ಇಬ್ಬರು ಅಥವಾ ಮೂರು ಜನರು ಹೊರಬರುವುದನ್ನು ನಾನು ನೋಡಿದೆ, ಅವರ ದೇಹಕ್ಕೆ ಬೆಂಕಿ ಹತ್ತಿಕೊಂಡಿತ್ತು. ನಾನು ಹತ್ತಿರದ ಜನರನ್ನು ಕರೆದು ಸಹಾಯ ಮಾಡಲು ಪ್ರಯತ್ನಿಸಿದೆ. ಬಳಿಕ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗೆ ಮಾಹಿತಿ ನೀಡಲಾಯಿತು.
ಮೊದಲು ಸ್ಥಳಕ್ಕಾಗಮಿಸಿದ ಕೃಷ್ಣಸ್ವಾಮಿ ಅವರ ಮನೆ ಹೆಲಿಕಾಪ್ಟರ್ ಬಿದ್ದ ಸ್ಥಳದಿಂದ ಕೇವಲ 100 ಮೀಟರ್ ದೂರದಲ್ಲಿದೆ. ಮಧ್ಯಾಹ್ನ 12.20ರ ಸುಮಾರಿಗೆ ಈ ಘಟನೆ ನಡೆದಿದೆ.
ಈ ಪ್ರದೇಶದಲ್ಲಿ ವಾಸಿಸುವ ಕುಮಾರ್ ಎಂಬ ಬಾಲಕ ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲು ಓಡಿಹೋದನು. ಮರಗಳ ನಡುವೆ ಬಿದ್ದ ಹೆಲಿಕಾಪ್ಟರ್ನಿಂದ ಇಬ್ಬರು-ಮೂರು ಜನ ಬೀಳುತ್ತಿರುವುದು ಕೂಡ ಕಂಡು ಬಂದಿದೆ. ಎಲ್ಲರ ಮೈಯಲ್ಲಿ ಬೆಂಕಿ ಹೊತ್ತಿಕೊಂಡಿತ್ತು.