Koppala | ಕಪಟ ಸ್ವಾಮೀಜಿ ಪೊಲೀಸರ ಬಲೆಗೆ
ಜನರಿಗೆ ವಂಚಿಸುತ್ತಿದ್ದ ಕಪಟ ಸ್ವಾಮೀಜಿ ಅರೆಸ್ಟ್
ಖಾಕಿ ವಶದಲ್ಲಿ ಕಪಟ ಸ್ವಾಮೀಜಿ ಶಿವಾನಂದ ಕಡಿ
ಅಪ್ರಾಪ್ತೆಗೆ ವಂಚಿಸಿದ್ದ ಆರೋಪದಡಿ ಬಂಧನ
ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಕೊಪ್ಪಳ : ನಾನಾ ರೀತಿಯ ವೇಶ ತೊಟ್ಟು ಜನರಿಗೆ ಟೋಪಿ ಹಾಕುತ್ತಿದ್ದ ಸ್ವಾಮೀಜಿಯನ್ನ ಕೊಪ್ಪಳ ಮಹಿಳಾ ಠಾಣಾ ಪೊಲೀಸರು ಬಂಧಿದ್ದಾರೆ. ಶಿವಾನಂದ ಕಡಿ ಎಂಬಾತ ಬಂಧಿತ ಕಪಟಸ್ವಾಮೀಜಿಯಾಗಿದ್ದಾರೆ.
ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ ನಿವಾಸಿಯಾಗಿರೋ ಸಿದ್ದರಾಮ ಎಂಬ ವ್ಯಕ್ತಿ ನಾನು ಸ್ವಾಮೀಜಿ ಎಂದು ನೂರಾರು ಜನರಿಗೆ ವಂಚನೆ ಮಾಡಿದ್ದನಂತೆ.
ಅಲ್ಲದೆ ಅಪ್ರಾಪ್ತ ಬಾಲಕಿಗೆ ಮದುವೆ ಆಗೋದಾಗಿ ನಂಬಿಸಿ ವಂಚನೆ ಮಾಡಿದ್ದನಂತೆ.
ಈ ಹಿನ್ನೆಲೆಯಲ್ಲಿ ಬಾಲಕಿಯ ತಂದೆ ಕೊಪ್ಪಳ ಮಹಿಳಾ ಠಾಣೆಯಲ್ಲಿ ಸಿದ್ದರಾಮ ವಿರುದ್ಧ ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸರು ಸಿದ್ದರಾಮನನ್ನು ಬಂಧಿಸಿದ್ದಾರೆ. ಕಳ್ಳ ಸ್ವಾಮೀ ವಿರುದ್ದ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಇದಿಷ್ಟೆ ಅಲ್ಲದೇ ಈ ಕಪಟಿ ಸಿದ್ದರಾಮ, ಪೊಲೀಸ್ ವಾಕಿ ಟಾಕಿಗೆ ಪೂಜೆ ಹೆಸರಲ್ಲಿ , ನಿಧಿ ತಗೆದುಕೊಡೋದಾಗಿ ಹೇಳಿ ಕೂಡ ವಂಚನೆ ಮಾಡಿದ್ದನಂತೆ. fake swamiji arrested in koppala