ಧಾರವಾಡ: ತರಕಾರಿ ಮಾರಲು ಹಿಂದೂ ರೈತ ಬಂದಿದ್ದಕ್ಕೆ ಮುಸ್ಲಿಂ ವ್ಯಾಪಾರಿಗಳು ಹಲ್ಲೆ ನಡೆಸಿರುವ ಆರೋಪವೊಂದು ಕೇಳಿ ಬಂದಿದೆ.
ಇಲ್ಲಿಯ ಎಪಿಎಂಸಿಯಲ್ಲಿ (APMC Market) ಲೋಕೂರ ಗ್ರಾಮದ ಈರಪ್ಪ ಉಡಿಕೇರಿ ಎಂಬ ರೈತರ ಮೇಲೆಯೇ ಐವರು ಮುಸ್ಲಿಂರು ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಈರಪ್ಪ ಅವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹಿಂದೂ ವ್ಯಾಪಾರಿ ಎಂಬ ಕಾರಣಕ್ಕೆ ಹಲ್ಲೆ ನಡೆದಿದೆ ಎಂದು ಹಲ್ಲೆಗೊಳಗಾದ ರೈತ ಆರೋಪಿಸಿದ್ದಾರೆ. ನಿಮ್ಮನ್ನು ದನ ಕಡಿದಂತೆ ಕಡೆಯುತ್ತೇವೆ. ನಿಮ್ಮದು ಬಹಳವಾಗಿದೆ. ನಿಮ್ಮನ್ನು ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ ಎಂದು ರೈತ ಆರೋಪಿಸಿದ್ದಾರೆ.