ಮೈಸೂರು: ಸ್ನೇಹಿತರ ಮಧ್ಯೆ ಶುರುವಾದ ಹಣಕಾಸಿನ ವಿಚಾರದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಆಸಿಫ್ ಅಲಿಯಾಸ್ ಬಿಲ್ಲಾ ಆಸಿಫ್ (36) ಕೊಲೆಯಾದ ವ್ಯಕ್ತಿ ಎನ್ನಲಾಗಿದೆ. ಆತನ ಸ್ನೇಹಿತ ಸಲೀಂ ಪಾಷಾ ಕೊಲೆ ಆರೋಪಿಯಾಗಿದ್ದು, ಘಟನೆಯಲ್ಲಿ ಆರೋಪಿಗೂ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸಿಫ್ ಹಾಗೂ ಆರೋಪಿಯ ನಡುವೆ ಬೀಡಿ ಕಾಲೋನಿ ಹತ್ತಿರ ಜಗಳ ಶುರುವಾಗಿತ್ತು. ಈ ಗಲಾಟೆ ಗಂಭೀರ ಸ್ವರೂಪಕ್ಕೆ ಶುರುವಾಗಿತ್ತು. ಆಸಿಫ್ ತಲೆಗೆ ನೀಲಗಿರಿ ಮರದ ಪಟ್ಟಿಯಿಂದ ಸಲೀಂ ಹೊಡೆದಿದ್ದಾನೆ. ಕೂಡಲೇ ಆತನನ್ನು ಕೆ.ಆರ್ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಕುರಿತು ಉದಯಗಿರಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.