Fine to God Hanuman : ದೇವರಿಗೆ ದಂಡ ವಿಧಿಸಿದ ರೈಲ್ವೇ ಇಲಾಖೆ – ಭಜರಂಗ ಬಲಿಗೆ ನೋಟಿಸ್ ಜಾರಿ
ದೇವರಿಗೆ ದಂಡ ವಿಧಿಸಿದ ರೈಲ್ವೇ ಇಲಾಖೆ
ಭಜರಂಗ ಬಲಿಗೆ ನೋಟಿಸ್ ಜಾರಿ
ಸಾರ್ವಜನಿಕರ ಆಕ್ರೋಶ ಬೆನ್ನಲ್ಲೇ ಹಿಂಪಡೆದ ಇಲಾಖೆ
ಪೂಜಾರಿ ಬದಲಿಗೆ ದೇವರಿಗೆ ನೋಟೀಸ್ ನೀಡಿ ಎಡವಟ್ಟು
ಮಧ್ಯಪ್ರದೇಶದ ಸಬಲ್ಗಢ್ ಪಟ್ಟಣದಲ್ಲಿ ಘಟನೆ
ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಸಬಲ್ಗಢ್ ಪಟ್ಟಣದಲ್ಲಿರುವ ರೈಲ್ವೇ ಭೂಮಿಯನ್ನು ಅತಿಕ್ರಮಣ ಮಾಡಿರುವ ಬಗ್ಗೆ ಭಾರತೀಯ ರೈಲ್ವೆ ಇಲಾಖೆಯು ದೇವರಿಗೆ ನೋಟೀಸ್ ನೀಡಿದ್ದು , ಈ ಸುದ್ದಿ ಇದೀಗ ಭಾರೀ ವೈರಲ್ ಆಗ್ತಿದೆ… ಆಕ್ರೋಶ , ಟೀಕೆಗಳಿಗೆ ಗುರಿಯಾಗಿದೆ….
ಹೌದು..!
ರೈಲ್ವೇ ಭೂಮಿ ಅತಿಕ್ರಮಣ ಮಾಡಿಕೊಂಡಿರುವ ಹಿನ್ನೆಲೆ ದೇವಾಲದ ಪೂಜಾರಿ ಬದಲಾಗಿ ಭಗವಾನ್ ಹನುಮಾನ್ ಜೀಗೆ ನೋಟೀಸ್ ಜಾರಿ ಮಾಡಿದ್ದು , ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನೋಟೀಸ್ ಹಿಂಪಡೆಯಲಾಗಿದೆ..
ಭಾರತೀಯ ರೈಲ್ವೇಯು ಫೆಬ್ರವರಿ 8 ರಂದು ಭಜರಂಗ ಬಲಿಯನ್ನು ಉದ್ದೇಶಿಸಿ ಅತಿಕ್ರಮಣ ನೋಟಿಸ್ ನೀಡಿದ್ದು, ಏಳು ದಿನಗಳಲ್ಲಿ ರೈಲ್ವೆ ಭೂಮಿಯ ಮೇಲಿನ ಅತಿಕ್ರಮಣವನ್ನು ತೆಗೆದುಹಾಕದಿದ್ದರೆ ದೇವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಹಿಂದೂ ದೇವರಿಗೆ ನೀಡಿದ ನೋಟಿಸ್ ರೈಲ್ವೇ ವಿರುದ್ಧ ಆಕ್ರೋಶ ಹುಟ್ಟುವಂತೆ ಮಾಡಿದೆ…
ಭಗವಾನ್ ಹನುಮಾನ್ ಜಿ ಹೆಸರಿನಲ್ಲಿ ನೋಟಿಸ್ ಜಾರಿಯಾಗಿರುವ ಮಾಹಿತಿಯು ಇಡೀ ಮೊರೆನಾ ಜಿಲ್ಲೆಗೆ ವೇಗವಾಗಿ ಹರಡಿದೆ. ಇದಕ್ಕೆ ಸ್ಥಳೀಯರು ಮತ್ತು ಹಿಂದುತ್ವ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ರೈಲ್ವೇ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯ ಜನರೂ ಧ್ವನಿ ಎತ್ತಿದ್ದಾರೆ. ರೈಲ್ವೇ ನೋಟಿಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟಿಜನ್ಸ್ ಕಣ್ ಕೆಂಪಾಗಿಸಿದೆ.. .
ಝಾನ್ಸಿ ರೈಲ್ವೇ ವಿಭಾಗದ PRO ಆರಂಭಿಕ ಸೂಚನೆಯನ್ನು ತಪ್ಪಾಗಿ ನೀಡಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಈಗ ದೇವಸ್ಥಾನದ ಅರ್ಚಕರಿಗೆ ಹೊಸ ನೋಟಿಸ್ ನೀಡಲಾಗಿದೆ ಎಂದು ಪಿಆರ್ ಒ ತಿಳಿಸಿದ್ದಾರೆ.
Fine to God Hanuman by railway department in MP