ಬಸ್ ಗೆ ಎಲೆಕ್ಟ್ರಿಕ್ ಕೇಬಲ್ ತಗುಲಿ ಬೆಂಕಿ ಅವಘಡ: 6 ಮಂದಿ ಸಜೀವ ದಹನ
ರಾಜಸ್ಥಾನ: ಎಲೆಕ್ಟ್ರಿಕ್ ಕೇಬಲ್ ಗೆ ತಾಗಿ ಬಸ್ ಗೆ ಬೆಂಕಿ ತಗುಲಿದ ಪರಿಣಾಮ 6 ಮಂದಿ ಸ್ಥಳದಲ್ಲೇ ಸಜೀವ ದಹನವಾಗಿರುವ ದುರ್ಘಟನೆ ರಾಜಸ್ಥಾನದ ಜಾಲೋರ್ ನಲ್ಲಿ ನಡೆದಿದೆ. ಖಾಸಗಿ ಬಸ್ ಒಂದು ಮಂಡೋರ್ನಿಂದ ಬ್ಯಾವರ್ಗೆ ಹೋಗುತ್ತಿದ್ದ ವೇಳೆ ಮಹೇಶ್ಪುರ ಗ್ರಾಮದ ಬಳಿ ಬಸ್ ನಿಲುಗಡೆ ಮಾಡಲಾಗಿತ್ತು. ಬಸ್ ನ ಮೇಲ್ಭಾಗ ಎಲೆಕ್ಟ್ರಕ್ ಕೇಬಲ್ ಗೆ ತಗುಲಿತ್ತು. ಇದು ಚಾಲಕನ ಗಮನಕ್ಕೆ ಬಂದಿರಲಿಲ್ಲ. ಕೇಬಲ್ನಲ್ಲಿ ವಿದ್ಯುತ್ ಪ್ರಸರಣವಾಗುತ್ತಿದ್ದುದರಿಂದ ಅದು ಬಸ್ಗೆ ತಗುಲಿದ್ದು, ಧಗ್ಗನೆ ಬೆಂಕಿ ಹೊತ್ತಿಕೊಂಡಿದೆ. ಬಸ್ ನಲ್ಲಿ ಸುಮಾರು 40 ಮಂದಿ ಪ್ರಯಾಣಿಕರಿದ್ದರು. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಎಲ್ಲರೂ ಒಳಗಡೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಆರು ಮಂದಿ ಅದಾಗಲೇ ಸುಟ್ಟುಹೋಗಿದ್ದರು. ಘಟನೆಯಲ್ಲಿ 19 ಜನರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆಯಿದೆ ಎನ್ನಲಾಗಿದೆ.
ಮದುವೆ ಮಂಟಪಕ್ಕೆ ಡ್ರೋಣ್ನಲ್ಲಿ ಹಾರಿ ಬಂತು ಮಾಂಗಲ್ಯ ಸರ..!
ದೆಹಲಿಯಲ್ಲಿ ಕೊರೊನಾ ಲಸಿಕೆ ಪಡೆದ 52 ಜನರಿಗೆ ಸೈಡ್ ಎಫೆಕ್ಟ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel