ಅಂತರಗಂಗೆ ಬೆಟ್ಟದಲ್ಲಿ ಅಮೂಲ್ಯವಾದ ವನಸಂಪತ್ತು ನಾಶ
ಕೋಲಾರ : ನಗರ ಹೊರವಲಯದಲ್ಲಿರುವ ಅಂತರಗಂಗೆ ಬೆಟ್ಟಕ್ಕೆ ಕಿಡಿಗೇಡಿಗಳು ಸಂಜೆ ಬೆಂಕಿ ಹಾಕಿದ್ದಾರೆ.
ಬೆಟ್ಟಕ್ಕೆ ಮೋಜು ಮಸ್ತಿ ಮಾಡಲು ಬರುವ ಕಿಡಿಗೇಡಿಗಳು ಅಥವಾ ಕುರಿ ಮೇಹಿಸುವವರು ಬೆಂಕಿ ಹಾಕಿರಬಹುದು ಎಂದು ಶಂಕಿಸಲಾಗಿದೆ.
ಬೆಂಕಿಯ ಕೆನ್ನಾಲಿಗೆಗೆ ಅಪಾರ ಪ್ರಮಾಣದ ಹಸಿರು, ಪ್ರಕೃತಿ ಸೌಂದರ್ಯ ಆಹುತಿಯಾಗಿದೆ. ನಿನ್ನೆ ಸಂಜೆಯಿಂದ ಬೆಂಕಿ ಹೊತ್ತಿ ಉರಿಯುತ್ತಿದೆ.
ಈ ಬೆಟ್ಟದಲ್ಲಿ ಚಿರತೆ, ನವೀಲು, ಮೊಲ ಸೇರಿದಂತೆ ಅನೇಕ ಕಾಡು ಪ್ರಾಣಿಗಳು ವಾಸ ಮಾಡುತ್ತಿವೆ. ಅತ್ಯಮೂಲ್ಯವಾದ ವನಸಂಪತ್ತು ಇದೆ.
ಹೀಗಾಗಿ ಅಂತರಗಂಗೆ ಬೆಟ್ಟಕ್ಕೆ ಸೂಕ್ತ ಕಾವಲು ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.