ADVERTISEMENT
Tuesday, August 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮೀನು ಹರಾಜು ವಿಚಾರವಾಗಿ ಮೀನುಗಾರರ ನಡುವೆ ಘರ್ಷಣೆ: ದೋಣಿ ಮೇಲೇರಿ ಲಾಠಿಚಾರ್ಜ್

Kariyappa N by Kariyappa N
November 8, 2020
in Newsbeat, Samagra karnataka, ರಾಜ್ಯ
udupi
Share on FacebookShare on TwitterShare on WhatsappShare on Telegram

ಉಡುಪಿ: ಜಿಲ್ಲೆಯ ಬೈಂದೂರು ಸಮೀಪದ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಕಿರು ಮೀನುಗಾರಿಕಾ ಬಂದರಿನಲ್ಲಿ ಮೀನು ಹರಾಜು ಸಂಬಂಧ ಉಪ್ಪುಂದ ಹಾಗೂ ಕೊಡೇರಿ ಮೀನುಗಾರರ ನಡುವೆ ಕೆಲಕಾಲದಿಂದ ಹೊಗೆಯಾಡುತ್ತಿದ್ದ ಅಸಮಾಧಾನ ಸ್ಫೋಟಗೊಂಡಿದೆ. ಈ ಅಸಮಧಾನ ಭಾರಿ ಘರ್ಷಣೆಗೆ ಕಾರಣವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ ಘಟನೆ ನಡೆದಿದೆ.

lati charge
ಮೀನುಗಾರಿಕೆ ಇಲಾಖೆಯು ಕೊಡೇರಿ ಬಂದರಿನ ಮೀನು ಹರಾಜು ಪ್ರಾಂಗಣದಲ್ಲಿ ಮೀನು ಹರಾಜು ಮಾಡಲು ಉಪ್ಪುಂದ, ಕೊಡೇರಿ ಹಾಗೂ ಮರವಂತೆ ಭಾಗದ ಮೀನುಗಾರರಿಗೆ ಇತ್ತೀಚೆಗಷ್ಟೆ ತಾತ್ಕಾಲಿಕ ಅನುಮತಿ ನೀಡಿತ್ತು.
ಉಪ್ಪುಂದ ಭಾಗದ ನೂರಕ್ಕೂ ಹೆಚ್ಚು ದೋಣಿಗಳು ಶನಿವಾರ ಮಧ್ಯಾಹ್ನ ಮೀನುಗಾರಿಕೆ ನಡೆಸಿ, ಎಡಮಾವಿನ ಹೊಳೆಯ ಮೂಲಕ ಮೀನು ಮಾರಾಟ ಮಾಡಲು ಬಂದರಿನ ಪ್ರಾಂಗಣ ಪ್ರವೇಶ ಮಾಡಿವೆ. ಈ ವೇಳೆ ಕೊಡೇರಿಯ ಮೀನುಗಾರರು ಅಲ್ಲಿ ತಮಗೆ ಮೂಲಸೌಕರ್ಯ ಕಲ್ಪಿಸುವ ಮತ್ತು ಪ್ರಾಂಗಣ ಇರುವ ದಂಡೆಗೆ ಹೋಗಲು ನದಿಗೆ ಸೇತುವೆ ನಿರ್ಮಾಣ ಮಾಡಬೇಕು. ಅಲ್ಲಿಯವರೆಗೆ ಮೀನು ಹರಾಜಿಗೆ ಅವಕಾಶ ನೀಡುವುದಿಲ್ಲ ಎಂದು ನದಿಯಲ್ಲಿ ಉಪ್ಪುಂದದ ದೋಣಿಗಳು ಸಂಚರಿಸದಂತೆ ತಮ್ಮ ದೋಣಿಯನ್ನು ಅಡ್ಡ ಇರಿಸಿ ತಡೆಯೊಡ್ಡಿದರು.

Related posts

ತಮಿಳುನಾಡಿನಲ್ಲಿ ಮಹತ್ವದ ಘೋಷಣೆ; ಮಹಿಳೆಯರಿಗೆ ಉಚಿತ ಬಸ್, ಬಡ ಕುಟುಂಬಗಳಿಗೆ 3 ಉಚಿತ LPG ಸಿಲಿಂಡರ್

ತಮಿಳುನಾಡಿನಲ್ಲಿ ಮಹತ್ವದ ಘೋಷಣೆ; ಮಹಿಳೆಯರಿಗೆ ಉಚಿತ ಬಸ್, ಬಡ ಕುಟುಂಬಗಳಿಗೆ 3 ಉಚಿತ LPG ಸಿಲಿಂಡರ್

August 25, 2026
ರಾಹುಲ್ ಗಾಂಧಿ ಈ ದೇಶದಲ್ಲಿರಲು ನಾಲಾಯಕ್- ನಕ್ಸಲಿಸಂ ಹೊಸಕಿ ಹಾಕಿದ ಅಮಿತ್ ಶಾ ಟೀಕಿಸಲು ರಾಹುಲ್‌ಗೆ ಯೋಗ್ಯತೆ ಇಲ್ಲ: 70 ವರ್ಷದ ಕಾಂಗ್ರೆಸ್ ಪಾಪವನ್ನು ತೊಳೆದಿದೆ ಬಿಜೆಪಿ- ರಾಹುಲ್‌ಗೆ ವಿ.ಸೋಮಣ್ಣ ತಿರುಗೇಟು.

ರಾಹುಲ್ ಗಾಂಧಿ ಈ ದೇಶದಲ್ಲಿರಲು ನಾಲಾಯಕ್- ನಕ್ಸಲಿಸಂ ಹೊಸಕಿ ಹಾಕಿದ ಅಮಿತ್ ಶಾ ಟೀಕಿಸಲು ರಾಹುಲ್‌ಗೆ ಯೋಗ್ಯತೆ ಇಲ್ಲ: 70 ವರ್ಷದ ಕಾಂಗ್ರೆಸ್ ಪಾಪವನ್ನು ತೊಳೆದಿದೆ ಬಿಜೆಪಿ- ರಾಹುಲ್‌ಗೆ ವಿ.ಸೋಮಣ್ಣ ತಿರುಗೇಟು.

August 25, 2026

fishers
ಕುಂದಾಪುರ ಎಎಸ್‍ಪಿ ಹರಿರಾಮ್ ಶಂಕರ ಅಗಮಿಸಿ, ಎರಡು ಭಾಗದ ಮೀನುಗಾರರ ನಡುವೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರು. ಆದರೆ, ತಮ್ಮ ಬೇಡಿಕೆ ಈಡೇರುವ ತನಕ ಹರಾಜು ಪ್ರಾಂಗಣ ಬಳಕೆಗೆ ಅವಕಾಶ ನೀಡುವುದಿಲ್ಲ ಎಂದು ಕೊಡೇರಿ ಮೀನುಗಾರರು ಪಟ್ಟುಹಿಡಿದರು.

ಮಾತುಕತೆ ವಿಫಲ, ಲಾಠಿಚಾರ್ಜ್
ಸುಮಾರು ನಾಲ್ಕು ತಾಸು ಉಪ್ಪುಂದದ ಮೀನುಗಾರರು ತಮ್ಮ ದೋಣಿಯಲ್ಲಿದ್ದ ಮೀನು ಖಾಲಿ ಮಾಡದೆ ದೋಣಿಗಳನ್ನು ನದಿಯಲ್ಲೇ ನಿಲ್ಲಿಸಿದ್ದರು. ಬಳಿಕ ತಹಶೀಲ್ದಾರ ಬಿ.ಪಿ. ಪೂಜಾರ್ ಭೇಟಿ ನೀಡಿ ಎರಡು ಭಾಗದ ಮೀನುಗಾರರೊಂದಿಗೆ ಮಾತುಕತೆ ನಡೆಸಿದರು.


ಆದರೆ ಮಾತುಕತೆ ಫಲ ನೀಡಲಿಲ್ಲ. ಮೀನು ಹರಾಜಿಗೆ ತಡೆಯೊಡ್ಡಿದ ಕಾರಣ ಉಪ್ಪುಂದದ ಕಡೆಯವರು ತಮ್ಮ ದೋಣಿಗಳನ್ನು ಕೊಡೇರಿ ಕಡೆಯ ದೋಣಿಗಳತ್ತ ನುಗ್ಗಿಸಿದರು. ಆಗ ಎರಡೂ ಕಡೆಯವರ ನಡುವೆ ಘರ್ಷಣೆ ನಡೆದು ನದಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಪೊಲೀಸರು ದೋಣಿ ಮೇಲೇರಿ ಲಾಠಿಬೀಸಿ ತಹಬಂದಿಗೆ ತರುವ ಪ್ರಯತ್ನ ನಡೆಸಿದರು.

ಕೊಡೇರಿ ಮೀನುಗಾರರ ವಾದ
ಬಂದರು ನಿರ್ಮಾಣ ಸಂದರ್ಭ ನೀಡಿದ ಸೇತುವೆ ಭರವಸೆ ಈಡೇರಿಲ್ಲ. ಸೇತುವೆ ನಿರ್ಮಿಸಬೇಕು, ಬಂದರು ಪ್ರದೇಶದಲ್ಲಿ ಎಲ್ಲ ಮೂಲ ಸೌಲಭ್ಯ ಕಲ್ಪಿಸಬೇಕು. ಅಲ್ಲಿಯ ತನಕ ಪ್ರಾಂಗಣದಲ್ಲಿ ಹರಾಜಿಗೆ ಅವಕಾಶ ನೀಡಬಾರದು ಎನ್ನುವುದು ಕೊಡೇರಿ ಜನರ ಪರವಾಗಿ ಅಲ್ಲಿನ ಟ್ರಾಲ್‍ಬೋಟ್ ಸಂಘದ ಅಧ್ಯಕ್ಷ ಶುಕ್ರದಾಸ್ ಖಾರ್ವಿ ವಾದಿಸುತ್ತಿದ್ದಾರೆ.

ತಮಗೆ ಹರಾಜಿಗೆ ಅನುಮತಿ ನೀಡಿದ್ದಾರೆ
ಬಂದರಿನಲ್ಲಿ ಮೀನು ಹರಾಜಿಗೆ ಸಂಬಂಧಿಸಿ ಕೊಡೇರಿ ಭಾಗದ ಮೀನುಗಾರರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದೇವೆ. ಅವರು ವಿಧಿಸಿದ್ದ ಷರತ್ತಿನಂತೆ ಮೀನುಗಾರಿಕೆ ಇಲಾಖೆಯಿಂದ ಷರತ್ತುಬದ್ಧ ತಾತ್ಕಾಲಿಕ ಲಿಖಿತ ಅನುಮತಿ ಪಡೆದಿದ್ದೇವೆ.
ಆದರೂ ಕೊಡೇರಿ ಭಾಗದವರು ಕೆಲವು ಬೇಡಿಕೆ ಮುಂದಿಟ್ಟು ಮೀನು ಹರಾಜಿಗೆ ತಡೆಯೊಡ್ಡುತ್ತಿದ್ದಾರೆ. ಬಂದರು ಕೊಡೇರಿಗೆ ಮಾತ್ರ ಸೀಮಿತವಲ್ಲ, ಬದಲಾಗಿ ಎಲ್ಲ ಮೀನುಗಾರರಿಗೂ ಮುಕ್ತವಾಗಿದೆ. ಮೂಲ ಸೌಕರ್ಯ, ಸೇತುವೆ ಬಗ್ಗೆ ನಾವೂ ಅವರೊಡನೆ ಸೇರಿ ಹೋರಾಡಲು ಸಿದ್ಧ ಎನ್ನುವುದು ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ ಅವರ ನಿಲುವು.


ಈ ನಡುವೆ, ಎರಡು ತಂಡಗಳ ಮೀನುಗಾರರ ಭಿನ್ನಾಭಿಪ್ರಾಯವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಆದರೆ ಯಾರೇ ಆದರೂ ಕಾನೂನು ಕೈಗೆತ್ತಿಕೊಂಡರೆ ಅದನ್ನು ನಿಭಾಯಿಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದು ಹೆಚ್ಚುವರಿ ಎಎಸ್‍ಪಿ ಕುಮಾರಚಂದ್ರ ತಿಳಿಸಿದ್ದಾರೆ.
ಲಾಠಿಚಾರ್ಜ್ ಬಳಿಕವೂ ಬಂದರು ಪ್ರದೇಶದಲ್ಲಿ ಮತ್ತೆ ಘರ್ಷಣೆ ನಡೆದಿದೆ. ಕೆಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಉಭಯ ತಂಡಗಳ ದಾಂಧಲೆ ನಿಯಂತ್ರಿಸಲು ಮುಂದಾದ ಪೊಲೀಸರ ಮೇಲೆ ಕಲ್ಲು ತೂರಲಾಗಿದೆ. ಈ ಹಿನ್ನೆಲೆಯಲ್ಲಿ ಬಂದರಿನಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: fishers galatekundapuralatichargenew fish yardUdupi
ShareTweetSendShare
Join us on:

Related Posts

ತಮಿಳುನಾಡಿನಲ್ಲಿ ಮಹತ್ವದ ಘೋಷಣೆ; ಮಹಿಳೆಯರಿಗೆ ಉಚಿತ ಬಸ್, ಬಡ ಕುಟುಂಬಗಳಿಗೆ 3 ಉಚಿತ LPG ಸಿಲಿಂಡರ್

ತಮಿಳುನಾಡಿನಲ್ಲಿ ಮಹತ್ವದ ಘೋಷಣೆ; ಮಹಿಳೆಯರಿಗೆ ಉಚಿತ ಬಸ್, ಬಡ ಕುಟುಂಬಗಳಿಗೆ 3 ಉಚಿತ LPG ಸಿಲಿಂಡರ್

by Shwetha
August 25, 2026
0

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ವಿಧಾನಸಭೆಯಲ್ಲಿ ಹಲವು ಮಹತ್ವದ ಕಲ್ಯಾಣ ಯೋಜನೆಗಳನ್ನು ಘೋಷಿಸಿದ್ದಾರೆ. ಮಹಿಳೆಯರು ಮತ್ತು ತೃತೀಯಲಿಂಗಿಗಳಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ವಿಸ್ತರಿಸುವುದರ ಜೊತೆಗೆ,...

ರಾಹುಲ್ ಗಾಂಧಿ ಈ ದೇಶದಲ್ಲಿರಲು ನಾಲಾಯಕ್- ನಕ್ಸಲಿಸಂ ಹೊಸಕಿ ಹಾಕಿದ ಅಮಿತ್ ಶಾ ಟೀಕಿಸಲು ರಾಹುಲ್‌ಗೆ ಯೋಗ್ಯತೆ ಇಲ್ಲ: 70 ವರ್ಷದ ಕಾಂಗ್ರೆಸ್ ಪಾಪವನ್ನು ತೊಳೆದಿದೆ ಬಿಜೆಪಿ- ರಾಹುಲ್‌ಗೆ ವಿ.ಸೋಮಣ್ಣ ತಿರುಗೇಟು.

ರಾಹುಲ್ ಗಾಂಧಿ ಈ ದೇಶದಲ್ಲಿರಲು ನಾಲಾಯಕ್- ನಕ್ಸಲಿಸಂ ಹೊಸಕಿ ಹಾಕಿದ ಅಮಿತ್ ಶಾ ಟೀಕಿಸಲು ರಾಹುಲ್‌ಗೆ ಯೋಗ್ಯತೆ ಇಲ್ಲ: 70 ವರ್ಷದ ಕಾಂಗ್ರೆಸ್ ಪಾಪವನ್ನು ತೊಳೆದಿದೆ ಬಿಜೆಪಿ- ರಾಹುಲ್‌ಗೆ ವಿ.ಸೋಮಣ್ಣ ತಿರುಗೇಟು.

by Shwetha
August 25, 2026
0

ಮೈಸೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾವಚಿತ್ರವನ್ನು ಪೊಲೀಸ್ ಠಾಣೆಗಳಲ್ಲಿ ಅಳವಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ರೈಲ್ವೆ...

ಕೇರಳದ ಕಾಜಿಯಾ ಲಿಜ್ ಮೆಜೊ ಮುಡಿಗೆ ‘ಮಿಸ್ ಯೂನಿವರ್ಸ್ ಇಂಡಿಯಾ 2026’ ಕಿರೀಟ

ಕೇರಳದ ಕಾಜಿಯಾ ಲಿಜ್ ಮೆಜೊ ಮುಡಿಗೆ ‘ಮಿಸ್ ಯೂನಿವರ್ಸ್ ಇಂಡಿಯಾ 2026’ ಕಿರೀಟ

by Shwetha
August 25, 2026
0

ಕೇರಳದ 19 ವರ್ಷದ ಕಾಜಿಯಾ ಲಿಜ್ ಮೆಜೊ ಅವರು 'ಮಿಸ್ ಯೂನಿವರ್ಸ್ ಇಂಡಿಯಾ 2026' ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.ರಾಜಸ್ಥಾನದ ಜೈಪುರದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ 52 ಸ್ಪರ್ಧಿಗಳನ್ನು ಹಿಂದಿಕ್ಕಿ...

ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ‘ಟಾಕ್ಸಿಕ್’ ಸುನಾಮಿ; ಮುಂಗಡ ಬುಕ್ಕಿಂಗ್‌ನಲ್ಲೇ ₹35 ಕೋಟಿ ದಾಟಿದ ಕಲೆಕ್ಷನ್!

ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ‘ಟಾಕ್ಸಿಕ್’ ಸುನಾಮಿ; ಮುಂಗಡ ಬುಕ್ಕಿಂಗ್‌ನಲ್ಲೇ ₹35 ಕೋಟಿ ದಾಟಿದ ಕಲೆಕ್ಷನ್!

by Shwetha
August 25, 2026
0

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾ ಬಿಡುಗಡೆಯ ಮುನ್ನವೇ...

ವಾಲ್ಮೀಕಿ ಹಗರಣ- ಸದನದಲ್ಲಿ ಸಾಕ್ಷಿ ನೀಡಲು ಯೋಗ್ಯತೆ ಇಲ್ಲದವರು ಈಗ ಪಾದಯಾತ್ರೆ ಮಾಡ್ತಿದ್ದಾರೆ: ಕುರ್ಚಿ ಉಳಿಸಿಕೊಳ್ಳಲು ಬಿಜೆಪಿ ನಾಯಕರ ಪಾದಯಾತ್ರೆ ನಾಟಕ- ಸಚಿವ ನಾಗೇಂದ್ರ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್

ಉಪ್ಪು ತಿಂದವರು ನೀರು ಕುಡಿಯಲೇಬೇಕು,ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡಿದರೆ ಮುಲಾಜಿಲ್ಲ:ಅಧ್ಯಕ್ಷರೇ ಇರಲಿ, ಐಎಎಸ್ ಅಧಿಕಾರಿಯೇ ಇರಲಿ ಶಿಕ್ಷೆ ಖಚಿತ- ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ

by Shwetha
August 25, 2026
0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷಾ ಅಕ್ರಮ ಹಾಗೂ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅತ್ಯಂತ ಕಠಿಣ ನಿಲುವು ತಳೆದಿದೆ. ಈ ಹಗರಣದಲ್ಲಿ ಭಾಗಿಯಾಗಿರುವವರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram