ಮಾಜಿ ಸಿಎಂ ಎಂ. ವೀರಪ್ಪ. ಮೊಯ್ಲಿಯವರಿಗೆ ಕೊರೊನಾ ಪಾಸಿಟಿವ್ Saaksha Tv
ಬೆಂಗಳೂರು: ರಾಜ್ಯದ ಮಾಜಿ ಸಿಎಂ ಡಾ. ಎಂ. ವೀರಪ್ಪ. ಮೊಯ್ಲಿಯವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಲಘು ರೋಗ ಲಕ್ಷಣಗಳು ಕಂಡು ಬಂದಿದ್ದರಿಂದ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದರು.
ನಿನ್ನೆ ಸಂಜೆ ಪಾಸಿಟಿವ್ ವರದಿ ಬಂದಿದೆ. ಇವರು ಕೆಮ್ಮು ಮತ್ತು ಜ್ವರದ ಲಕ್ಷಣಗಳಿಂದ ಬಳಲುತ್ತಿದ್ದು, ವ್ಯಾಕ್ಸಿನ್ ಪಡೆದಿರುವುದರಿಂದ ಬಹಳಷ್ಟು ಪರಿಣಾಮ ಬೀರಿಲ್ಲ. ಸಧ್ಯ ಓಮ್ ಕ್ವಾರೆಂಟೈನ್ ಆಗಿದ್ದು ಇವರ ಸಂಪರ್ಕಕ್ಕೆ ಬಂದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಟ್ವಿಟ್ ಮಾಡಿದ್ದಾರೆ.
ಅಲ್ಲದೇ ಇವರು ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಈ ಯಾತ್ರೆಯಲ್ಲಿ ಪಾಲ್ಗೊಂಡ ಮಾಜಿ ಸಚಿವ ಹೆಚ್. ಎಮ್. ರೇವಣ್ಣ ಹಾಗೂ ಸಿ. ಎಮ್ ಇಬ್ರಾಹಿಂ ಅವರಿಗೂ ಪಾಸಿಟಿವ್ ಬಂದಿದೆ. ಹಾಗೇ ನಿನ್ನೆ ಎನ್ .ಹೆಚ್. ಶಿವಶಂಕರ್ ರೆಡ್ಡಿ ಅವರಿಗು ಪಾಸಿಟಿವ್ ಬಂದಿದೆ ಎಂದು ಹೇಳಲಾಗಿದೆ