ಎನ್ ಸಿ ಎ ಹುದ್ದೆ ಅಲಂಕರಿಸಲಿದ್ದಾರೆ ವಿ ವಿ ಎಸ್ ಲಕ್ಷ್ಮಣ್
ಭಾರತ ತಂಡದ ಮಾಜಿ ಕ್ರಿಕೇಟಿಗ ಕನ್ನಡಿಗ ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾದ ಮುಖ್ಯ ಕೋಚ್ ಆದ ಹಿನ್ನಲೆಯಲ್ಲಿ ತೆರವಾದ ರಾಷ್ಟ್ರೀಯ ಕ್ರಿಕೇಟ್ ಅಕಾಡೆಮಿ ( national crcicket academy) ಹುದ್ದೆಗೆ ಮಾಜಿ ಕ್ರಿಕೇಟಿಗ ವಿವಿಎಸ್ ಲಕ್ಷ್ಮಣ್ ಅವರು ಆಯ್ಕೆಯಾಗಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ.
ರಾಹುಲ್ ದ್ರಾವಿಡ್ ಅವರನ್ನ ಮುಖ್ಯಕೋಚ್ ಗಿ ಆಯ್ಕೆ ಮಾಡುವಲ್ಲಿ ದಾದ ಅವರು ಪ್ರಮುಖ ಮಾತ್ರ ವಹಿಸಿದ್ದಾರೆ. ಲಕ್ಷ್ಮಣ್ ಅವರೊಂದಿಗೆ ನಿಕಟ ಸಂಬಂಧ ಹೊಂದಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹಾಗೂ ಹಿರಿಯ ಅಧಿಕಾರಿಗಳು ಕೂಡ ಎನ್ಸಿಎ ಹುದ್ದೆಗೇರಲು ಬೆಂಬಲ ವ್ಯಕ್ತಪಡಿಸಿದ್ದರು.
ಮಾಜಿ ಕ್ರಿಕೆಟಿಗ ವಿವಿಎಸ್ ಮತ್ತು ಕೋಚ್ ಆಗಿರುವ ದ್ರಾವಿಡ್ ಯುವ ಪಡೆಯನ್ನು ಕಟ್ಟುವಲ್ಲಿ ನಿಸ್ಸಂದೇಹವಾಗಿ ಮುಂಚೂಣಿಯಲ್ಲಿರಲಿದ್ದಾರೆ. ಭಾರತೀಯ ಕ್ರಿಕೆಟ್ ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯಲು ಆ ಇಬ್ಬರು ದಿಗ್ಗಜರು ಒಟ್ಟಿಗೆ ಕಾರ್ಯ ನಿರ್ವಹಿಸುವುದು ಒಳ್ಳೆಯ ಸಂಯೋಜನೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.