ಗಂಗಾ ಪ್ರವಾಹ – ಪ್ರಯಾಗ್ ರಾಜ್ ಬೀದಿ ಬೀದಿಯಲ್ಲಿ ಕಂಡು ಬಂದ ಮೊಸಳೆ….
ಉತ್ತರ ಭಾರತದಲ್ಲಿ ಸುರಿದ ಭಾರಿ ಮಳೆಯಿಂದ ನದಿಗಳೆಲ್ಲ ತುಂಬಿ ಹರಿಯುತ್ತಿವೆ. ಉತ್ತರ ಪ್ರದೇಶದ ಕಾನ್ಪುರ, ಪ್ರಯಾಗ್ರಾಜ್ ಮತ್ತು ವಾರಣಾಸಿಯಲ್ಲಿ ಗಂಗಾ-ಯಮುನಾ ನದಿಗಳು ಉಕ್ಕಿ ಹರಿಯುತ್ತಿವೆ. ಪ್ರಯಾಗ್ ರಾಜ್ ನಲ್ಲಿ ಗಂಗಾ ಯಮುನಾ ನದಿಗಳು ಅಪಾಯದ ಮಟ್ಟವನ್ನ ಮಿರಿ ಹರಿಯುತ್ತಿವೆ.
ಶನಿವಾರ ಬೆಳಿಗ್ಗೆ ಗಂಗಾನದಿ ಪಕ್ಕದ ಸಲೋರಿ ಪ್ರದೇಶದಲ್ಲಿ ಮೊಸಳೆಯೊಂದು ರಸ್ತೆಗೆ ಬಂದಿತ್ತು. 10 ರಿಂದ 12 ಅಡಿ ಎತ್ತರದ ಮೊಸಳೆ ನೋಡಿ ಭಯಭೀತರಾದ ಜನ ಛಾವಣೆ ಮೇಲೆ ಹತ್ತಿದ್ದಾರೆ.
ಅಕ್ಕ ಪಕ್ಕದ ಮನೆಯವರೆಲ್ಲರೂ ಬಾಗಿಲುಗಳನ್ನ ಮುಚ್ಚಿಕೊಂಡು ಕೂಡಲೇ ಪೊಲೀಸ್ ಇಲಾಖೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಮೊಸಳೆ ಹಿಡಿಯಲು ಹರಸಾಹಸ ಪಟ್ಟಿದ್ದಾರೆ. ಕೊನೆಗೂ ಮೊಸಳೆ ಹಿಡಿದು ಗಂಗಾ ನದಿಗೆ ಬಿಡುವಷ್ಟರಲ್ಲಿ ಅರಣ್ಯ ಇಲಾಖೆ ಹೈರಾಣಾಗಿದೆ.
Wtf!😱
Due to the flood, these crocodiles have come down on the streets of Prayagraj Salori.🫂🥲🐊🐊 pic.twitter.com/dmH2UcfDim— Vedant OutWorld (@vedantoutworld) August 27, 2022
ವಾರಣಾಸಿಯಲ್ಲಿ ಗಂಗಾನದಿ ಅಪಾಯದ ಮಟ್ಟವನ್ನ ಮೀರಿ ಹರಿಯುತ್ತಿದೆ. ಮಣಿಕರ್ಣಿಕಾ ಮತ್ತು ಹರಿಶ್ಚಂದ್ರ ಘಾಟ್ಗಳು ನೀರಿನಲ್ಲಿ ಮುಳುಗಿವೆ. ಇದೀಗ ಬೀದಿಗಳಲ್ಲಿ ಶವಸಂಸ್ಕಾರ ನಡೆಯುತ್ತಿರುವುದರಿಂದ ಶವ ಸಂಸ್ಕಾರಕ್ಕೆ ಸಾಕಷ್ಟು ಸಮಯ ಹಿಡಿಯುತ್ತಿದೆ.
ಕಾನ್ಪುರದಲ್ಲೂ ಯಮುನಾ ನದಿಯ ನೀರಿನ ಮಟ್ಟ ಹೆಚ್ಚಾಗಿದೆ. ಘಟಂಪುರ ತಹಸೀಲ್ ಮೂಲಕ ಹಾದು ಹೋಗುವ ಯಮುನಾ ನದಿಯ ನೀರು ಹಲವು ಗ್ರಾಮಗಳನ್ನು ಪ್ರವೇಶಿಸಿದೆ. ಯಮುನಾ ನದಿಯ ಅಬ್ಬರದಿಂದಾಗಿ ಕಾನ್ಪುರ ಬಂದಾ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.








