Geeta jayanthi : ಬೆಂಗಳೂರು ಇಸ್ಕಾನ್ ಗೀತಾ ಜಯಂತಿಯಲ್ಲಿ ಭಾಗವಹಿಸಿದ ರಾಜನಾಥ್ ಸಿಂಗ್..
ಬೆಂಗಳೂರಿನ ಇಸ್ಕಾನ್ ವತಿಯಿಂದ ಆಯೋಜಿಸಲಾಗಿದ್ದ ಗೀತಾ ಜಯಂತಿ ಹಾಗೂ ಗೀತಾ ಜ್ಞಾನ ಯಜ್ಞ ಮಹೋತ್ಸವದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಆರ್. ಅಶೋಕ, ಸಂಸದ ತೇಜಸ್ವಿ ಸೂರ್ಯ, ಶಾಸಕ ಎಂ. ಕೃಷ್ಣಪ್ಪ, ಇಸ್ಕಾನ್ ಅಧ್ಯಕ್ಷ ಮಧು ಪಂಡಿತ್ ದಾಸ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಜನಾಥ್ ಸಿಂಗ್, ಗೀತಾ ಜ್ಞಾನ ಭಾರತೀಯ ಸಮಾಜದ ಆಧಾರಸ್ತಂಭವಾಗಿದೆ. ಭಾರತ ಶಾಂತಿಪ್ರಿಯ ದೇಶ. ಹಿಂಸಾಚಾರ, ಯುದ್ಧ ನಮ್ಮ ಪ್ರವೃತ್ತಿಯಾಗಿರಲ್ಲಿಲ್ಲ. ಹಾಗಾಗಿಯೇ ಯಾವುದೇ ದೇಶದ ಮೇಲೆ ನಾವು ದಾಳಿ ಮಾಡಿಲ್ಲ. ಅದೇ ರೀತಿ ಅನ್ಯಾಯವನ್ನು ಸಹಿಸುವುದು, ಅಧರ್ಮದ ಬಗ್ಗೆ ತಟಸ್ಥವಾಗಿರುವುದೂ ಕೂಡ ನಮ್ಮ ಗುಣಧರ್ಮಗಳಾಗಿರಲಿಲ್ಲ ಎಂದು ಹೇಳಿದರು.
ಗೀತೆಯನ್ನು ಧಾರ್ಮಿಕ ಪುಸ್ತಕ ಎಂಬ ಚೌಕಟ್ಟಿಗೆ ಸೀಮಿತಗೊಳಿಸಬಾರದು. ಅದರಲ್ಲಿ ಅಡಗಿರುವ ಜ್ಞಾನ ಎಲ್ಲರಿಗೂ ಸ್ಫೂರ್ತಿ. ಅಮೂಲ್ಯ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸಿಗೆ ಸಹಕಾರಿಯಾಗಲಿದೆ. ಭೌತಿಕ ಯಶಸ್ವಿನ ಜೊತೆಗೆ ಆಧ್ಯಾತ್ಮಿಕ ಯೋಗಕ್ಷೇಮವು ಮುಖ್ಯ ಎಂದು ಹೇಳಿದರು.
Geeta jayanthi: Rajnath Singh participated in Bengaluru ISKCON Geeta Jayanthi..