ಮಂಡ್ಯ: ಪಾದಪೂಜೆಗೆಂದು ಬಂದಿದ್ದ ದೇವರ ಬಸಪ್ಪ(ಎತ್ತು)ನನ್ನು ರೇಗಿಸಲು ಹೋದ ಕುಡುಕನಿಗೆ ತಕ್ಕ ಶಾಸ್ತಿ ಆಗಿರುವ ಘಟನೆ ಮಂಡ್ಯ ತಾಲೂಕಿನ ಬೆನ್ನಟ್ಟಿ ಗ್ರಾಮದಲ್ಲಿ ನಡೆದಿದೆ.
ಬೆನ್ನಟ್ಟಿ ಗ್ರಾಮದ ರುಕ್ಮಿಣಿ ಎಂಬುವರ ಮನೆಗೆ ಪಾದಪೂಜೆಗೆ ಬಂದಿದ್ದ ಜಯಪುರ ಬಸಪ್ಪ(ಎತ್ತು ಅಥವಾ ಬಸವಣ್ಣ)ನನ್ನು ಯುವಕ ಸಂತೋಷ್ ಎಂಬಾತ ಎಣ್ಣೆ ಏಟಲ್ಲಿ ಹೀಯಾಳಿಸಿದ್ದಾನೆ. ತಕ್ಷಣವೆ ಬೀದಿಯಲ್ಲಿ ಅಟ್ಟಾಡಿಸಿಕೊಂಡು ಹೋಗಿ ಕೊಂಬಿನಿಂದ ಥಳಿಸಿದ ಬಸಪ್ಪನ ಉಗ್ರ ಕೋಪ ಕಂಡು ಗ್ರಾಮಸ್ಥರು ಕಂಗಾಲಾಗಿದ್ದಾರೆ.
ಬಳಿಕ ಇನ್ಮುಂದೆ ಮದ್ಯ ಕುಡಿಯುವುದಿಲ್ಲ ಎಂದು ಬಸಪ್ಪನ ಬಳಿ ಸಂತೋಷ್ ಕ್ಷಮೆ ಕೇಳಿದ್ದಾನೆ. ನಂತರ ಮದ್ಯವ್ಯಸನನಿ ಯುವಕನ ಬೆನ್ನು ಮೇಲೆ ಪಾದ ಇಟ್ಟು ಶಿಕ್ಷೆ ನೀಡಿದ ಬಸಪ್ಪ, ತಪ್ಪು ಕಾಣಿಕೆ ನೀಡಿ ಕ್ಷಮೆ ಕೇಳಿದ ಬಳಿಕ ಶಾಂತವಾಗಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಈ ಬಸಪ್ಪನನ್ನು ಸುತ್ತಮುತ್ತಲ ಗ್ರಾಮಸ್ಥರು ಪವಾಡ ಎತ್ತು(ಬಸವಣ್ಣ) ಎಂದೇ ನಂಬಿಸಿದ್ದಾರೆ. ಎತ್ತಿನ ಮೂಲಕ ಶಿವನು ಬಂದು ತಪ್ಪು ಮಾಡಿದವರಿಗೆ ಶಿಕ್ಷೆ ನೀಡುತ್ತಾನೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.
ಸುತ್ತಮುತ್ತಲ ಗ್ರಾಮಗಳಲ್ಲಿ ಕಳ್ಳತನವಾಗಿದ್ದರೆ, ಯಾರಾದರೂ ತಪ್ಪು ಮಾಡಿದ್ದರೆ, ಹೊಸ ಕೆಲಸ ಆರಂಭಿಸಲು, ಮದುವೆ ಇತ್ಯಾದಿ ವಿಚಾರಗಳ ಬಗ್ಗೆ ಈ ಬಸವಣ್ಣನಿಂದ ಗ್ರಾಮಸ್ಥರು ಭವಿಷ್ಯ ಕೇಳುತ್ತಾರೆ. ಬಸವಣ್ಣ ನೀಡುವ ಸುಳಿವು ಹಾಗೂ ತಪ್ಪು ಮಾಡಿದವರನ್ನು ಗುರುತಿಸಿ ದಾಳಿ ಮಾಡುವುದು ಬಸವಣ್ಣನ ರೂಪದಲ್ಲೇ ಶಿವನೇ ಬಂದಿದ್ದಾನೆ ಎಂಬುದು ಸುತ್ತಮುತ್ತಲ ಗ್ರಾಮಸ್ಥರ ನಂಬಿಕೆಯಾಗಿದೆ.
ಹೀಗಾಗೊ ಗ್ರಾಮಸ್ಥರು ತಮಗೆ ಹಾಗೂ ಕುಟುಂಬಸ್ಥರಿಗೆ ಒಳಿತಾಗಲೆಂದು ಬಸಣ್ಣನನ್ನು ಕರೆಸಿಕೊಂಡು ಪಾದಪೂಜೆಗೆ ಮಾಡಿಸುವುದು ವಾಡಿಕೆಯಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel