ನವದೆಹಲಿ : ಮುಂಗಾರಿನ ಆಗಮನಕ್ಕಾಗಿ ಕಾದು ಕುಳಿತಿರುವ ರೈತರಿಗೆ ಗುಡ್ ನ್ಯೂಸ್ ಸಿಕ್ಕಿದೆ. ನೈಋತ್ಯ ಮುಂಗಾರು ಮಾರುತಗಳು (Southwest Monsoon) ದೇಶವನ್ನು ಕೊನೆಗೂ ತಲುಪಿವೆ.
ಮುಂಗಾರು ಮಾರುತಗಳು ಇಂದು ಕೇರಳ (Kerala) ತೀರಕ್ಕೆ ಅಪ್ಪಳಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ. ಹವಾಮಾನ ಇಲಾಖೆ ಅಂದಾಜಿಗಿಂತ ಮೂರು ದಿನ ತಡವಾಗಿ ದೇಶವನ್ನು ಮುಂಗಾರು ಪ್ರವೇಶಿಸಿದೆ. ಸದ್ಯ ಲಕ್ಷದ್ವೀಪ, ಕೇರಳ ಪ್ರಾಂತ್ಯದಲ್ಲಿ ಮುಂಗಾರು ಮಾರುತಗಳು ಹರಡಿವೆ.
ಮುಂಗಾರು ಪ್ರವೇಶದ ಹಿನ್ನೆಲೆಯಲ್ಲಿ ಬುಧವಾರದಿಂದ ಕೇರಳದಲ್ಲಿ ಮಳೆ ಆಗುತ್ತಿದೆ. ಮುಂದಿನ 48 ಗಂಟೆಗಳಲ್ಲ ಕೇರಳದ ಇನ್ನಿತರ ಪ್ರಾಂತ್ಯಗಳು ಸೇರಿದಂತೆ, ಕರ್ನಾಟಕ, ತಮಿಳುನಾಡಿಗೂ ಮುಂಗಾರು ಮಾರುತಗಳು ಹಬ್ಬಲಿವೆ.
ಸಾಧಾರಣವಾಗಿ ಪ್ರತಿ ವರ್ಷ ಮೇ ಕೊನೆಯ ವಾರ ಅಥವಾ ಜೂನ್ ಮೊದಲ ವಾರದಲ್ಲಿ ನೈಋತ್ಯ ಮಾನ್ಸೂನ್ ಮಾರುತಗಳು ಕೇರಳ ಪ್ರವೇಶಿಸುತ್ತಿದ್ದವು. ಆದರೆ, ಕಳೆದ ವರ್ಷ ಮೇ 29, 2021ರಲ್ಲಿ ಜೂನ್ 3, 2020ರಲ್ಲಿ ಜೂನ್ 1, 2019ರಲ್ಲಿ ಜೂನ್8, 2018ರಲ್ಲಿ ಮೇ 29ಕ್ಕೆ ನೈರುತ್ಯ ಮಾರುತ ದೇಶಕ್ಕೆ ಪ್ರವೇಶ ಮಾಡಿದ್ದವು.