ಬೆಂಗಳೂರು: ೧೩ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸುವ ಮೂಲಕ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಕಳೆದ ವರ್ಷ ಮಂಗಳೂರು ನಗರದಲ್ಲಿ ನಡೆದಿದ್ದ ಕೋಮು ಗಲಭೆ ಮತ್ತು ಗೋಲಿಬಾರ್ಗೆ ಸಂಬಂಧಿಸಿದಂತೆ ಸುದ್ದಿಯಾಗಿದ್ದ ಮಂಗಳೂರು ಪೊಲೀಸ್ ಕಮಿಷನರ್ ಪಿ.ಎಸ್. ಹರ್ಷ ಅವರನ್ನು ವಾರ್ತಾ ಇಲಾಖೆ ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದೆ.
ಕೊಡಗು ಜಿಲ್ಲೆಯ ಎಸ್ಪಿಯಾಗಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದ ಸುಮನ್ ಪನೇಕರ್ ಅವರನ್ನು ಎತ್ತಂಗಡಿ ಮಾಡಲಾಗಿದೆ. ಆ ಸ್ಥಾನಕ್ಕೆ ಮತ್ತೊಬ್ಬ ಮಹಿಳಾ ಐಪಿಎಸ್ ಅಧಿಕಾರಿ ಕ್ಷಮಾ ಮಿಶ್ರಾ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ವರ್ಗಾವಣೆಯಾದ ಐಪಿಎಸ್ ಅಧಿಕಾರಿಗಳ ಪಟ್ಟಿ..
೧. ಪಿ.ಎಸ್. ಹರ್ಷ; ಆಯುಕ್ತ, ವಾರ್ತಾ ಇಲಾಖೆ
೨. ಸೀಮಂತ್ಕುಮಾರ್ ಸಿಂಗ್; ಐಜಿಪಿ, ಕೇಂದ್ರ ವಲಯ
೩. ಕೆ.ವಿ ಶರತ್ಚಂದ್ರ; ಐಜಿಪಿ, ಆಡಳಿತ ವಿಭಾಗ ಬೆಂಗಳೂರು
೪. ಸುಮನ್ ಪನೇಕರ್; ಡಿಸಿಪಿ ಸಿಎಆರ್ ಬೆಂಗಳೂರು,
೫. ಹೆಚ್.ಡಿ ಆನಂದ ಕುಮಾರ್; ಎಸ್.ಪಿ ಐಎಸ್ಡಿ
೬. ವಿಕಾಸ್ ಕುಮಾರ್; ಮಂಗಳೂರು ನಗರ ಪೊಲೀಸ್ ಆಯುಕ್ತ
೭. ಎಸ್.ಎನ್ ಸಿದ್ದರಾಮಪ್ಪ; ಡಿಐಜಿ, ಸಿಐಡಿ ಆರ್ಥಿಕ ಅಪರಾಧ ವಿಭಾಗ
೮. ಬಿ.ಎಸ್ ಲೋಕೇಶ್ ಕುಮಾರ್; ಡಿಐಜಿ ಐಎಸ್ಡಿ
೯. ಡಾ.ಕೆ.ತ್ಯಾಗರಾಜನ್; ಬೆಳಗಾವಿ ನಗರ ಪೊಲೀಸ್ ಅಯುಕ್ತ
೧೦. ಕ್ಷಮಾ ಮಿಶ್ರಾ; ಕೊಡಗು ಎಸ್.ಪಿ
೧೧. ಹರೀಶ್ ಪಾಂಡೆ; ಎಸ್ಪಿ, ಗುಪ್ತಚರ ಇಲಾಖೆ ಬೆಂಗಳೂರು
೧೨. ದಿವ್ಯಾ ಸಾರಾ ಥಾಮಸ್; ಎಸ್ಪಿ, ಚಾಮರಾಜನಗರ
೧೩. ಹಾಕಯ್ ಅಕ್ಷಯ್ ಮಚ್ಚೀಂದ್ರ; ಎಸ್ಪಿ, ಚಿಕ್ಕಮಗಳೂರು