ಅಂತಾರಾಜ್ಯ ನದಿ ನೀರು ವಿಚಾರದಲ್ಲಿ ಹೋರಾಟದಿಂದ ಗೆಲ್ಲಲು ಅಸಾಧ್ಯ : ಹೆಚ್ಡಿಡಿ H D Devegowda reaction on congress padayatra saaksha tv
ಮೈಸೂರು : ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಬಗ್ಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಪ್ರತಿಕ್ರಿಯೆ ನೀಡಿದ್ದು, ಅಂತಾರಾಜ್ಯ ನದಿ ನೀರು ಹಂಚಿಕೆಯಲ್ಲಿ ನಾವು ಹೋರಾಟದಿಂದ ಗೆಲ್ಲಲು ಅಸಾಧ್ಯವಾಗಿದೆ. ಕೋರ್ಟ್ ಗೆ ಪೂರಕ ದಾಖಲೆಗಳನ್ನು ನೀಡಬೇಕು ಎಂದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ ಡಿ ಡಿ, ಕಾಂಗ್ರೆಸ್ ನವರು ಈ ಪಾದಯಾತ್ರೆಯನ್ನು ರಾಜಕೀಯಕ್ಕಾಗಿ ಮಾಡಿದ್ದಾರೆಂದು ನಾನು ಹೇಳುವುದಿಲ್ಲ.
ಆದರೆ ಹೋರಾಟ ಮಾಡುವುದರಿಂದ ಗೆಲ್ಲಲು ಸಾಧ್ಯವಿಲ್ಲ. ಯೋಜನೆ ಜಾರಿಯಾಗಲು ಕೋರ್ಟ್ಗೆ ಪೂರಕ ದಾಖಲೆಗಳನ್ನ ನೀಡಬೇಕು ಎಂದು ತಿಳಿಸಿದರು.
ಮತ್ತೆ ರಾಮನಗರದಿಂದಲೇ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ದೇವೇಗೌಡರು, ಅಲ್ಲಿಂದಲೇ ಇನ್ನು 10 ಬಾರಿ ಬರಲಿ.
ರಾಮನಗರದ ಜನರು ನನ್ನನ್ನು ಸಿಎಂ ಮಾಡಿದರು.ಅಲ್ಲಿಂದನೇ ನಾನು ಪ್ರಧಾನಮಂತ್ರಿ ಆಗಿದ್ದು. ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿದ್ದಾರೆ ಎಂದರು.