ಕಾಂಗ್ರೆಸ್ ನವ್ರಿಗೆ ದರ್ದು ಇತ್ತು ಸಿಎಂ ಮಾಡಿದ್ರು :`ಕೈ’ ವಿರುದ್ಧ ಹೆಚ್ ಡಿಕೆ ಕಿಡಿ
ಬೆಂಗಳೂರು : ಅವರಿಗೆ ದರ್ದು ಇತ್ತು ಮುಖ್ಯಮಂತ್ರಿ ಮಾಡಿದ್ರು ಅಂತ ಡಿಕೆ ಶಿವಕುಮಾರ್ ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ ಶಾಲಿನ ಬಗ್ಗೆ ಹೆಚ್ ಡಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿಮ್ಮ ತಂದೆನಾ ಪ್ರಧಾನಿ ಮಾಡಿದ್ದು, ನಿಮ್ಮನ್ನ ಎರಡು ಬಾರಿ ಸಿಎಂ ಮಾಡಿದ್ದು ಕಾಂಗ್ರೆಸ್ ಎಂದು ತಿರುಗೇಟು ನೀಡಿದ್ದರು.
ಡಿ.ಕೆ.ಶಿವಕುಮಾರ್ ಅವರ ಈ ಹೇಳಿಕೆಗೆ ಇಂದು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ದೇವೇಗೌಡರನ್ನು ಪ್ರಧಾನಿ ಮಾಡಿ ಅಂತ ನಾವು ಯಾರ ಮನೆ ಬಾಗಿಲಿಗೆ ಹೋಗಿರಲಿಲ್ಲ.
ದೇವೇಗೌಡರ ಮನೆ ಬಾಗಿಲಿಗೆ ಬಂದು ಗೋಗರಿದದ್ದು ಅವರೇ. ಅಂದ ಕೂಡ ದೇವೇಗೌಡರು ಕರ್ನಾಟಕ ಬಿಟ್ಟು ಹೋಗೊಲ್ಲ ಅಂತ ಹೇಳಿದ್ರು.
ಆದ್ರೆ ಕಾಂಗ್ರೆಸ್ ನವರು ಗತಿ ಇಲ್ಲದೆ ದೇವೇಗೌಡರ ಮನೆ ಬಳಿ ಬಂದಿದ್ದರು ಎಂದು ಹೇಳುವ ಮೂಲಕ ದೇವೇಗೌಡರನ್ನು ಪಿಎಂ ಮಾಡಿದ್ದು ನಾವು ಎಂಬ ಡಿಕೆಶಿ ಹೇಳಿಕೆಗೆ ಟಾಂಗ್ ನೀಡಿದರು.
ಇದೇ ವೇಳೆ ಶಾಲಿನ ಬಗ್ಗೆ ಸ್ಪಷ್ಟನೆ ನೀಡಿದ ಅವರು, ನಾನು ಗಾಂಧಿಜಿ ಕಾಲದ ಕಾಂಗ್ರೆಸ್ ಶಾಲಿನ ಬಗ್ಗೆ ಮಾತನಾಡಿಲ್ಲ. ಇವತ್ತಿನ ಶಾಲಿನ ಬಗ್ಗೆ ಮಾತನಾಡಿದ್ದೀನಿ.
ಬಿಜೆಪಿಯವ್ರು ಹೆಸರು ಚೆನ್ನಾಗಿಡ್ತಾರೆ : `ಜನ ಸೇವಕ್ ಕಾರ್ಯಕ್ರಮ’ದ ಬಗ್ಗೆ ಹೆಚ್ ಡಿಕೆ ವ್ಯಂಗ್ಯ
ಈಗಿರುವ ಕಾಂಗ್ರೆಸ್ ಗಾಂಧಿಯವರು ಕಟ್ಟಿದ್ದಾ..? ಎಂದು ಪ್ರಶ್ನಿಸಿದರು. ಅಂದು ನಾನು ಹೇಳಿದ್ದು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಶಾಲ್ ಬಗ್ಗೆ ಅಂತ ಸ್ಪಷ್ಟನೆ ನೀಡಿದರು.
ಇನ್ನು ಡಿ.ಕೆ.ಶಿವಕುಮಾರ್ ಅವರು ಅಧಿಕಾರ ಇದ್ದಾಗ ಹೇಗೆ ಕೆಲಸ ಮಾಡಿದ್ದಾರೆ ಅಂತ ಎಲ್ಲರಿಗೂ ಗೊತ್ತು. ಕನಕಪುರಕ್ಕೆ ಹೋಗಿ ನೋಡಿದ್ರೆ ಏನ್ ಮಾಡಿದ್ದಾರೆ ಅಂತ ಗೊತ್ತಾಗುತ್ತೆ.
ನನ್ನ ಹತ್ರ ಇವೆಲ್ಲ ನಡೆಯೋಲ್ಲ. ನನ್ನ ಮುಖ್ಯಮಂತ್ರಿ ಮಾಡಿ ಅಂತ ನಾನು ನಿಮ್ಮ ಬಳಿ ಬಂದಿರಲಿಲ್ಲ. ನೀವೇ ಬಂದು ನನ್ನ ಸಿಎಂ ಮಾಡಿದ್ರೀ. ಕಾಂಗ್ರೆಸ್ ನವರಿಗೆ ದರ್ದು ಇತ್ತು ಅದಕ್ಕೆ ಸಿಎಂ ಮಾಡಿದ್ರು ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









