ADVERTISEMENT
Friday, July 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Kalyana karnataka

ಕಲ್ಯಾಣ ಕರ್ನಾಟಕದ ಆರೋಗ್ಯ ಕ್ಷೇತ್ರದಲ್ಲಿ ಯುನೈಟೆಡ್ ಆಸ್ಪತ್ರೆಯ ಕೊಡುಗೆ ಅಪಾರ : ಹೆಚ್ ಡಿ ಕುಮಾರಸ್ವಾಮಿ

Namratha Rao by Namratha Rao
March 7, 2022
in Kalyana karnataka, Newsbeat, ಕಲ್ಯಾಣ ಕರ್ನಾಟಕ
Share on FacebookShare on TwitterShare on WhatsappShare on Telegram

ಕಲ್ಯಾಣ ಕರ್ನಾಟಕದ ಆರೋಗ್ಯ ಕ್ಷೇತ್ರದಲ್ಲಿ ಯುನೈಟೆಡ್ ಆಸ್ಪತ್ರೆಯ ಕೊಡುಗೆ ಅಪಾರ: ಹೆಚ್ ಡಿ ಕುಮಾರಸ್ವಾಮಿ

– ಕಲಬುರ್ಗಿ ಯಲ್ಲಿ ಯುನೈಟೆಡ್ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆ.

Related posts

fifa world cup trophy

fifaworldcup -ಕ್ರೀಡಾಪತ್ರಕರ್ತ ಬಿತ್ತಿದ್ದ ಫಿಫಾ ಬೀಜ..! ಫಿಫಾ ವಿಶ್ವಕಪ್ ಟ್ರೋಫಿಯ ಮೂಲಕ ಹೆಮ್ಮರವಾಗಿ ಬೆಳೆಸಿದ್ದ ವಕೀಲ..! ಫುಟ್‍ಬಾಲ್ ಕ್ರೀಡೆಯ ಇತಿಹಾಸವನ್ನೇ ಬದಲಾಯಿಸಿದ್ದ #229ರ ರೋಚಕ ಕಥೆ..!

July 17, 2026
ಸ್ವಚ್ಛ ಬೆಂಗಳೂರು ಎಂಬುದು ಕೇವಲ ಘೋಷಣೆಯೇ?ಅಭಿವೃದ್ಧಿಯ ಮಂತ್ರ ಜಪಿಸುವ ಅಧಿಕಾರಿಗಳೇ, ಈ ಕಸದ ರಾಶಿಯೇ ನಿಮ್ಮ ಸಾಧನೆಯೇ? 500 ಕುಟುಂಬಗಳ ಉಸಿರು ಕಟ್ಟುತ್ತಿದೆ ಈ ಡಂಪಿಂಗ್ ಯಾರ್ಡ್!ಹೆಮ್ಮಿಗೆಪುರ ನಿವಾಸಿಗಳ ಕಣ್ಣೀರಿನ ಕಥೆ

ಸ್ವಚ್ಛ ಬೆಂಗಳೂರು ಎಂಬುದು ಕೇವಲ ಘೋಷಣೆಯೇ?ಅಭಿವೃದ್ಧಿಯ ಮಂತ್ರ ಜಪಿಸುವ ಅಧಿಕಾರಿಗಳೇ, ಈ ಕಸದ ರಾಶಿಯೇ ನಿಮ್ಮ ಸಾಧನೆಯೇ? 500 ಕುಟುಂಬಗಳ ಉಸಿರು ಕಟ್ಟುತ್ತಿದೆ ಈ ಡಂಪಿಂಗ್ ಯಾರ್ಡ್!ಹೆಮ್ಮಿಗೆಪುರ ನಿವಾಸಿಗಳ ಕಣ್ಣೀರಿನ ಕಥೆ

July 17, 2026

ಕಲಬುರ್ಗಿ  : ತೀವ್ರ ಅನಾರೋಗ್ಯದ ಚಿಕಿತ್ಸೆಗೆ ಹೈದರಾಬಾದ್ ಆಥವಾ ಬೆಂಗಳೂರಿನ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಕಲ್ಯಾಣ ಕರ್ನಾಟಕದ ಜನರ ಪರಿಸ್ಥಿತಿಯಲ್ಲಿ ಆಮೂಲಾಗ್ರ ಸುಧಾರಣೆಯನ್ನ ತರುವ ನಿಟ್ಟಿನಲ್ಲಿ ಕಳೆದೊಂದು ದಶಕಗಳಿಂದ ಅತ್ಯುತ್ತಮ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಯುನೈಟೆಡ್ ಆಸ್ಪತ್ರೆಯ ಪಾತ್ರ ಪ್ರಮುಖವಾದದ್ದು. ಜನರ ಕೈಗೆಟಕುವ ರೀತಿಯಲ್ಲಿ ಅತ್ಯತ್ತಮ ವೈದ್ಯಕೀಯ ಸೇವೆಯನ್ನು ನೀಡುವ ಅವರ ಕಾರ್ಯಕ್ಕೆ ನಿರಂತರವಾಗಿ ಸಾಗಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾರೈಸಿದರು.

ಇಂದು ಕಲಬುರ್ಗಿ ನಗರದ ಸಿದ್ದಾರ್ಥ ಕಾನೂನು ಕಾಲೇಜಿನ ಎದುರಿಗೆ ನಿರ್ಮಿಸಲಾದ ಯುನೈಟೆಡ್ ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ವೈದ್ಯಕೀಯ ಸೇವೆಯನ್ನು ಲಭ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಗಳು ಇತ್ತೀಚಿನ ದಿನಗಳಲ್ಲಿ ಆದ್ಯತೆ ನೀಡುತ್ತಿವೆ. 2018 ರಲ್ಲಿ ಜಯದೇವ ಆಸ್ಪತ್ರೆಯ ಶಾಖೆಯನ್ನು ಸ್ಥಾಪಿಸಲಾಯಿತು. ಇದಕ್ಕೂ ಮುನ್ನ ಈ ಭಾಗದ ಜನರು ಹೃದ್ರೋಗ, ಕ್ಯಾನ್ಸರ್ ಹಾಗೂ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಗೆ ಹೈದರಾಬಾದ್ ಅಥವಾ ಬೆಂಗಳೂರನ್ನು ಅವಲಂಬಿಸಬೇಕಾಗಿತ್ತು. ಆದರೆ, ಈ ಪರಿಸ್ಥಿತಿಯಲ್ಲಿ ಆಮೂಲಾಗ್ರ ಸುಧಾರಣೆಯನ್ನು ತರುವಲ್ಲಿ ಯುನೈಟೆಡ್ ಆಸ್ಪತ್ರೆ ಮುಖ್ಯ ಪಾತ್ರ ವಹಿಸಿದೆ ಎನ್ನುವುದು ಸಂತಸದ ವಿಷಯ. ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ವೈದ್ಯಕೀಯ ಸೌಲಭ್ಯ ನೀಡುತ್ತಿರುವ ಯುನೈಟೆಡ್ ಆಸ್ಪತ್ರೆ ಡಾ. ವಿಕ್ರಂ ಸಿದ್ದಾರೆಡ್ಡಿ ಅವರ ನೇತೃತ್ವದ ಯುವ ವೈದ್ಯರ ತಂಡ ಕೋವಿಡ್ ಸಂಧರ್ಭದಲ್ಲಿ ಈ ಭಾಗದ ಜನರಿಗೆ ನೀಡಿದ ಸೇವೆ ಶ್ಲಾಘನೀಯ. ಇಂತಹ ಸೇವಾ ಮನೋಭಾವ ಎಲ್ಲಾ ಯುವಕರಿಗೂ ಅದರ್ಶಪ್ರಾಯ ಎಂದು ಹೇಳಿದರು.

ಮಾಜಿ ಸಚಿವರಾದ ಸಿ ಎಂ ಇಬ್ರಾಹಿಂ ಮಾತನಾಡಿ, ಕಲ್ಯಾಣ ಕರ್ನಾಟಕ ದಲ್ಲಿ ಡಾ. ಸಿದ್ದಾರೆಡ್ಡಿ ಅವರು ನೀಡಿದ ವೈದ್ಯಕೀಯ ಸೇವೆ ಬಹಳ ಮಹತ್ವದ್ದು. ಆಗಿನ ಕಾಲದಲ್ಲಿ ಸರಿಯಾದ ಸೌಲಭ್ಯಗಳಿಲ್ಲದ ಸಂಧರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ ಅವರು ಸೇವೆ ಸಲ್ಲಿಸಿದ್ದಾರೆ. ಈಗ ಅವರ ಮಗ ವಿಕ್ರಂ ಸಿದ್ದಾರೆಡ್ಡಿ ಯುವಕ ವೈದ್ಯರ ತಂಡವನ್ನು ಕಟ್ಟಿಕೊಂಡು ಆ ಸೇವೆಯನ್ನು ಮುಂದುವರೆಸಿದ್ದಾರೆ. ಕಷ್ಟದ ದಿನಗಳಲ್ಲಿ ಅವರು ಇಲ್ಲಿನ ಜನತೆಗೆ ನೀಡಿದ ವೈದ್ಯಕೀಯ ಸೇವೆ ಅದರ್ಶಪ್ರಾಯ. ಕೋವಿಡ್ ಸಂಧರ್ಭದಲ್ಲಿ ಅತ್ಯಾಧುನಿಕ ಚಿಕಿತ್ಸೆ ಯನ್ನು ಅಳವಡಿಸಿಕೊಂಡು ಸಾವಿರಾರು ಜನರ ಜೀವವನ್ನು ಉಳಿಸಿದ್ದಾರೆ ಎಂದು ಹೇಳಿದರು.

ಥೈರೋಕೆರ್ ಸಂಸ್ಥಾಪಕ ಡಾ. ಆರೋಕಿಯಾಸ್ವಾಮಿ ವೇಲುಮಣಿ ಮಾತನಾಡಿ, 2040 ರ ಒಳಗಾಗಿ ರಾಜ್ಯದ ಪ್ರತಿಜಿಲ್ಲೆಯಲ್ಲೂ ಆಸ್ಪತ್ರೆಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಯೋಚಿಸಿ. ಸಣ್ಣ ಗ್ರಾಮದವನಾದ ನಾನು ಪರಿಶ್ರಮ ಹಾಗೂ ಹೊಸ ಆಲೋಚನೆಗಳ ಮೂಲಕ 5 ಸಾವಿರ ಕೋಟಿ ರೂಪಾಯಿ ಮೌಲ್ಯದ ಕಂಪನಿಯನ್ನು ಕಟ್ಟಿದ್ದೇನೆ. ದೊಡ್ಡದಾಗಿ ಯೋಚನೆ ಮಾಡುವುದರಿಂದ ಸಾಧನೆ ಸಾಧ್ಯ. ಈ ಹಿನ್ನಲೆಯಲ್ಲಿ ಯುನೈಟೆಡ್‌ ಆಸ್ಪತ್ರೆಯ ವ್ಯವಹಾರದ ಆಲೋಚನೆಗಳು ಬಹಳ ಗಟ್ಟಿಯಾಗಿದ್ದು, ಈ ಸಂಸ್ಥೆಯನ್ನು ಇನ್ನೂ ವಿಸ್ತಾರಕ್ಕೆ ಬೆಳೆಸಿ ಎಂದು ಸಲಹೆ ನೀಡಿದರು.

ಯುನೈಟೆಡ್‌ ಆಸ್ಪತ್ರೆಯ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ವಿಕ್ರಂ ಸಿದ್ದಾರೆಡ್ಡಿ ಮಾತನಾಡಿ, ನೂತನ ಕಟ್ಟಡದಲ್ಲಿ ಅತ್ಯಾಧುನಿಕ ಕ್ಯಾಥ್‌ಲ್ಯಾಬ್‌, ಐಸಿಯು, ವೆಂಟಿಲೇಟರ್‌ ವ್ಯವಸ್ಥೆಯಿದ್ದು ಸುಪರ್‌ಸ್ಪೇಷಾಲಿಟಿ ವೈದ್ಯಕೀಯ ಸೇವೆಗಳ ಸೌಲಭ್ಯ ಲಭ್ಯವಿದೆ. ಅಪಘಾತ ಪ್ರಕರಣಗಳಿಗೆ ಅತ್ಯುತ್ತಮ ಚಿಕಿತ್ಸೆಯನ್ನು ಯುನೈಟೆಡ್‌ ಆಸ್ಪತ್ರೆ ನೀಡುತ್ತಾ ಬಂದಿದೆ. ಬಡ ರೋಗಿಗಳಿಗೂ ಕೈಗೆಟಕುವ ದರದಲ್ಲಿ ಅತ್ಯುತ್ತಮ ಚಿಕಿತ್ಸೆಯನ್ನು ನೀಡುವ ಬದ್ದತೆಯನ್ನು ನಾವು ಹೊಂದಿದ್ದು ಅದನ್ನು ಮುಂದುವರೆಸಿಕೊಂಡು ಹೋಗಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಗಳಖೋಡ-ಜಿಡಗಾ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಷಡಕ್ಷರಿ ಶಿವಯೋಗಿ ಮುರುಘರಾಜೇಂದ್ರ ಮಹಾಸ್ವಾಮಿಗಳು, ಯುನೈಡೆಟ್‌ ಆಸ್ಪತ್ರೆಯ ಅಧ್ಯಕ್ಷರಾದ ಶ್ರೀ. ಡಾ. ವಿಕ್ರಮ್‌ ಸಿದ್ದಾರೆಡ್ಡಿ, ನಿರ್ದೇಶಕಿ ಡಾ ಶ್ರೀಮತಿ ಡಾ. ವೀಣಾ ವಿಕ್ರಮ್‌ ಸಿದ್ಧಾರೆಡ್ಡಿ, ಡಾ. ಶಾಂತಕುಮಾರ್‌, ಟ್ರಾಮಾ ಸರ್ಜನ್‌ ಡಾ. ಮೊಹಮ್ಮದ್‌ ಅಬ್ದುಲ್‌ ಬಷೀರ್‌, ಆರ್ಥೋಪೆಡಿಕ್‌ ಸರ್ಜನ್‌ ಡಾ. ರಾಜು ಕುಲಕರ್ಣಿ, ಡಾ ಉಡುಪಿ ಕೃಷ್ಣ ಜೊಶಿ ಹಾಗೂ ಡಾ. ರಾಜೀವ್‌ ಬಶೆಟ್ಟಿ. ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

Tags: #saakshatvH D KUMarswamyKalaburagikarnataka
ShareTweetSendShare
Join us on:

Related Posts

fifa world cup trophy

fifaworldcup -ಕ್ರೀಡಾಪತ್ರಕರ್ತ ಬಿತ್ತಿದ್ದ ಫಿಫಾ ಬೀಜ..! ಫಿಫಾ ವಿಶ್ವಕಪ್ ಟ್ರೋಫಿಯ ಮೂಲಕ ಹೆಮ್ಮರವಾಗಿ ಬೆಳೆಸಿದ್ದ ವಕೀಲ..! ಫುಟ್‍ಬಾಲ್ ಕ್ರೀಡೆಯ ಇತಿಹಾಸವನ್ನೇ ಬದಲಾಯಿಸಿದ್ದ #229ರ ರೋಚಕ ಕಥೆ..!

by admin
July 17, 2026
0

  fifa founders first meeting # 229...! ಇದು ಪ್ಯಾರಿಸ್ ನಗರದ ಐತಿಹಾಸಿಕ ರೂ ಸೇಂಟ್ - ಹೋನೋರೆ ರಸ್ತೆಯಲ್ಲಿರುವ ಹೆಸರಿಲ್ಲದ ಹಳೆಯ ಕಟ್ಟಡದ ಡೋರ್...

ಸ್ವಚ್ಛ ಬೆಂಗಳೂರು ಎಂಬುದು ಕೇವಲ ಘೋಷಣೆಯೇ?ಅಭಿವೃದ್ಧಿಯ ಮಂತ್ರ ಜಪಿಸುವ ಅಧಿಕಾರಿಗಳೇ, ಈ ಕಸದ ರಾಶಿಯೇ ನಿಮ್ಮ ಸಾಧನೆಯೇ? 500 ಕುಟುಂಬಗಳ ಉಸಿರು ಕಟ್ಟುತ್ತಿದೆ ಈ ಡಂಪಿಂಗ್ ಯಾರ್ಡ್!ಹೆಮ್ಮಿಗೆಪುರ ನಿವಾಸಿಗಳ ಕಣ್ಣೀರಿನ ಕಥೆ

ಸ್ವಚ್ಛ ಬೆಂಗಳೂರು ಎಂಬುದು ಕೇವಲ ಘೋಷಣೆಯೇ?ಅಭಿವೃದ್ಧಿಯ ಮಂತ್ರ ಜಪಿಸುವ ಅಧಿಕಾರಿಗಳೇ, ಈ ಕಸದ ರಾಶಿಯೇ ನಿಮ್ಮ ಸಾಧನೆಯೇ? 500 ಕುಟುಂಬಗಳ ಉಸಿರು ಕಟ್ಟುತ್ತಿದೆ ಈ ಡಂಪಿಂಗ್ ಯಾರ್ಡ್!ಹೆಮ್ಮಿಗೆಪುರ ನಿವಾಸಿಗಳ ಕಣ್ಣೀರಿನ ಕಥೆ

by Shwetha
July 17, 2026
0

ಬೆಂಗಳೂರು ದಕ್ಷಿಣದ ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿಯಲ್ಲಿರುವ ಕಾವೇರಿ ಪೈಪ್ ಲೈನ್ ರಸ್ತೆ ಇಂದು ಅಭಿವೃದ್ಧಿಯ ಸಂಕೇತವಾಗುವ ಬದಲು, ಅನಾರೋಗ್ಯದ ಅಗರವಾಗಿ ಮಾರ್ಪಟ್ಟಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ...

ನಿಮ್ಮ ಪಿಎಫ್ ಖಾತೆಗೆ ಬಡ್ಡಿ ಹಣ ಬಂದಿದೆಯೇ ಮನೆಯಲ್ಲೇ ಕುಳಿತು ಚೆಕ್ ಮಾಡಲು ಹೀಗೆ ಮಾಡಿ ಸಾಕು

ನಿಮ್ಮ ಪಿಎಫ್ ಖಾತೆಗೆ ಬಡ್ಡಿ ಹಣ ಬಂದಿದೆಯೇ ಮನೆಯಲ್ಲೇ ಕುಳಿತು ಚೆಕ್ ಮಾಡಲು ಹೀಗೆ ಮಾಡಿ ಸಾಕು

by Shwetha
July 17, 2026
0

ಕೋಟ್ಯಂತರ ಖಾಸಗಿ ವಲಯದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್‌ಒ) 2025-26ನೇ ಹಣಕಾಸು ವರ್ಷದ ವಾರ್ಷಿಕ ಬಡ್ಡಿ ಹಣವನ್ನು...

ಸಚಿವ ಸ್ಥಾನಕ್ಕೆ ಅವಕಾಶ ನೀಡಿ; ವರಿಷ್ಠರಿಗೆ ಶಾಸಕ ಅಶೋಕ್ ಪಟ್ಟಣ್ ಮನವಿ

ಸಚಿವ ಸ್ಥಾನಕ್ಕೆ ಅವಕಾಶ ನೀಡಿ; ವರಿಷ್ಠರಿಗೆ ಶಾಸಕ ಅಶೋಕ್ ಪಟ್ಟಣ್ ಮನವಿ

by Shwetha
July 17, 2026
0

ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯ ಚರ್ಚೆ ಮತ್ತೆ ತೀವ್ರಗೊಂಡಿರುವ ನಡುವೆ, ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್ ಅವರು ಸಚಿವ ಸ್ಥಾನಕ್ಕಾಗಿ ತಮ್ಮ ಆಕಾಂಕ್ಷೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ...

ಸಾರ್ವಜನಿಕರೇ ಗಮನಿಸಿ ಬಿಎಲ್‌ಒ ಸೋಗಿನಲ್ಲಿ ಬರುವ ಕರೆಗಳಿಗೆ ಒಟಿಪಿ ನೀಡಿದರೆ ಖಾಲಿಯಾಗಲಿದೆ ನಿಮ್ಮ ಹಣ

ಸಾರ್ವಜನಿಕರೇ ಗಮನಿಸಿ ಬಿಎಲ್‌ಒ ಸೋಗಿನಲ್ಲಿ ಬರುವ ಕರೆಗಳಿಗೆ ಒಟಿಪಿ ನೀಡಿದರೆ ಖಾಲಿಯಾಗಲಿದೆ ನಿಮ್ಮ ಹಣ

by Shwetha
July 17, 2026
0

ಸದ್ಯ ದೇಶಾದ್ಯಂತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಅಂದರೆ ಎಸ್‌ಐಆರ್ ಪ್ರಕ್ರಿಯೆಯು ಅತ್ಯಂತ ವೇಗವಾಗಿ ನಡೆಯುತ್ತಿದೆ. ಮತದಾನದ ಹಕ್ಕನ್ನು ಪಡೆಯಲು ಅಥವಾ ತಿದ್ದುಪಡಿ ಮಾಡಲು ಲಕ್ಷಾಂತರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram