Hassan Mixi Blast : ವಿದಿ ವಿಜ್ಞಾನ ತಂಡದ ಅದಿಕಾರಿಗಳಿಂದ ಸ್ಥಳ ಪರಿಶೀಲನೆ
ಹಾಸನ : ಕುವೆಂಪು ನಗರದ ಕೊರಿಯರ್ ಕಚೇರಿಗೆ ಬಂದ ಪಾರ್ಸೆಲ್ ನಲ್ಲಿ ಇದ್ದ ಮಿಕ್ಸಿ ಸ್ಪೋಟಗೊಂಡಿದೆ… ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ ನಂತರ ಸದ್ಯಕ್ಕೆ ರಾಜ್ಯದಲ್ಲಿ ಮಿಕ್ಸಿ ಸ್ಪೋಟ ಜನರನ್ನ ಆತಂಕಕ್ಕೀಡು ಮಾಡಿದೆ..
ಡಿಟಿಡಿಸಿ ಕೊರಿಯರ್ ಕಚೇರಿಯಲ್ಲಿ ಡಿಸೆಂಬರ್ 26 ಸಂಜೆ 8-30 ರ ಸಮಯದಲ್ಲಿ ಸ್ಪೋಟ ಸಂಭವಿಸಿದೆ. ಕೊರಿಯರ್ ಅಂಗಡಿ ಮಾಲೀಕ ಶಶಿ ಅವರಿಗೆ ಮಿಕ್ಸಿಯಲ್ಲಿದ್ದ ಬ್ಲೇಡ್ ಗಳು ಎದೆ, ಸೊಂಟ ಮತ್ತು ಕೈ ಭಾಗಗಳಿಗೆ ತಗಲಿ ಗಾಯಗಳಾಗಿವೆ. ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸದ್ಯ ಕೊರಿಯರ್ ಕಚೇರಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.. ಎಸ್.ಪಿ. ತಮ್ಮಯ್ಯ ಸ್ಥಳ ಪರಿಶೀಲನೆ ಮಾಡಿದ್ದಾರೆ.. ವಿದಿ ವಿಜ್ಞಾನ ತಂಡದ ಅದಿಕಾರಿಗಳಿಂದ ಸ್ಥಳ ಪರಿಶೀಲನೆ ನಡೆಸಲಾಗಿದೆ.
ಸ್ಪೋಟ ಸುದ್ದಿ ಹರಡುತ್ತಿದ್ದಂತೆ ಕೊಂಚ ಆತಂಕದ ವಾತಾವರಣ ನಿರ್ಮಾಣವಾಗಿದೆ.. ಸಾಕ್ಷ ನಾಶ ಅಗದಂತೆ ಎಚ್ಚರಿಕೆ ವಹಿಸಿದ ಪೊಲೀಸರು ರಸ್ತೆ ಬಂದ್ ಮಾಡಲು ಸಿದ್ಧತೆ ನಡೆಸಿದ್ದಾರೆ.
ಸ್ಪೋಟದ ಸ್ಥಳ ಇರುವ ರಸ್ತೆ ಜನ ನಿಬಿಡ ಪ್ರದೇಶವಾದ ಕಾರಣ ಜನರ ಒಡಾಟ ಹೆಚ್ಚಾಗಿದೆ. ಇದರಿಂದ ತೊಂದರೆ ಅಗಬಾರದು ಎನ್ನುವ ಕಾರಣಕ್ಕೆ ಕ್ರಮ ಕೈಗೊಳ್ಳ ಲಾಗುತ್ತಿದೆ.