ದೇವೇಗೌಡರು ನಂಬಿದವರೇ ಅವರ ಬೆನ್ನಿಗೆ ಚಾಕು ಹಾಕಿದ್ದಾರೆ : ಕುಮಾರಸ್ವಾಮಿ..!
ಮಧು ಬಂಗಾರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರ ಭೇಟಿ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇದರಲ್ಲಿ ವಿಶೇಷ ಏನಿಲ್ಲ, ಹಲವಾರು ರಾಜಕಾರಣಿಗಳು ಭೇಟಿ ಮಾಡ್ತಾರೆ. ಅದೆಲ್ಲ ಅಳಸಲು ಕಥೆ, ಹಳೆ ಕಥೆ ಆಗಿದೆ ಈಗ. ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಬೆಳವಣಿಗೆ ಇದು. ಈ ಡೆವಲಪ್ಮೆಂಟ್ ಬಗ್ಗೆ ಹೆಚ್ಚು ಮಹತ್ವ ಕೊಡುವ ಅಗತ್ಯ ಇಲ್ಲ.
ಮಮತಾ ಬ್ಯಾನರ್ಜಿ ಮೇಲೆ ದಾಳಿ : ಆಸ್ಪತ್ರೆಗೆ ದಾಖಲು
ಜೆಡಿಎಸ್ ಹುಟ್ಟಿದಾಗಿನಿಂದ ಅದರಲ್ಲು ದೇವೇಗೌಡರಿಗೆ ಬೆನ್ನಿಗೆ ಚಾಕು ಹಾಕೋದು ಆಗೋಗಿದೆ. ಯಾರನ್ನ ನಂಬಿರ್ತಾರೆ ಅವರೇ ಕುತ್ತಿಗೆ ಕೂಯ್ಯತಾರೆ. ಯಾರು ಹೊರಗೆ ಹೋಗ್ತಾರೆ ಅವರಿಗೆ ಬಾಗಿಲು ತೆರೆದಿದೆ. ಅವರು ಎಲ್ಲಿಗೆ ಹೋಗಬೇಕು ಹೋಗಬಹುದು. ಪಕ್ಷದಿಂದ ಎಲ್ಲ ಪಡೆದು ಹೋಗುವಾಗ ಏನಾದರು ಹೇಳಿ ಹೋಗ್ತಾರೆ. ಹೋದವರು ಹೋಗಿ ಹೊಸಬರು ಬರ್ತಾನೆ ಇರ್ತಾರೆ. ಈಗ ಎಷ್ಟು ಜನ ಹೋದರು ನೋಡಿ, ಈ ಪಕ್ಷ ಮುಳುಗಲ್ಲ, ಜೀವಂತವಾಗಿದೆ. ಅದಕ್ಕೆ ನಾವು ನಿಷ್ಠೆ ಇಲ್ಲದವರಿಗೆ ಇನ್ಮುಂದೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ.
ಕುಕ್ಕೆ ಸುಬ್ರಮಣ್ಯದಲ್ಲಿ ಹಿಂದಿನ ಸಂಪ್ರದಾಯದಂತೆ ಮಹಾಶಿವರಾತ್ರಿ ಆಚರಣೆ : ಹೈಕೋರ್ಟ್..!
ಅವರನ್ನ ನಾವು ಪಕ್ಷದಿಂದ ದೂರ ಇಡ್ತಿವಿ. ತಾತ್ಕಾಲಿಕವಾಗಿ ತೆಗೆದುಕೊಂಡ ನಿರ್ಧಾರದಿಂದ ಈ ರೀತಿ ಸಮಸ್ಯೆ ಆಗಿದೆ. ನಾವು ಇಂತವರ ವಿರುದ್ಧ ಕ್ರಮ ಕೈಗೊಂಡರೇ ಅವರಿಗೆ ಅದು ಸುಲಭವಾಗುತ್ತೆ. ಮೊದಲು ಅದು ಜನತೆಗೆ ಅರ್ಥ ಆಗಬೇಕು. ಚಾಕು ಹಾಕಿ ಹೋದವರಿಗೆ ಜನರೇ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.