ADVERTISEMENT
Tuesday, July 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಇವರು ಶವದ ಪೆಟ್ಟಿಗೆ ಹೊತ್ತು ಸ್ಟೆಪ್ ಹಾಕೋದ್ಯಾಕೆ ಗೊತ್ತಾ: ಇವರ ಹಿಂದಿದೆ ರೋಚಕ ಕಹಾನಿ..!

admin by admin
May 19, 2020
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಕಪ್ಪು ಬಣ್ಣದ ಸೂಟು ತೊಟ್ಟ 6 ಯುವಕರು, ಅವರ ಕಣ್ಣಲ್ಲಿ ರಾರಾಜಿಸೋ ಕೂಲ್ ಇನ್ ಗ್ಲಾಸ್ ಗಳು, ಲೆದರ್ ಶೂಸ್ ಜೊತೆಗೆ ಟೆಕ್ನೋ ಬೀಟಿಗೆ ಹೆಜ್ಜೆ ಹಾಕೋ ಹುಡುಗರು. ಸದ್ಯ ಇವರೇ ಸಾಮಾಜಿಕ ಜಾಲತಾಣಗಳ ಸೂಪರ್ ಸ್ಟಾರ್ ಗಳು..

ಹೌದು..! ಶವಪೆಟ್ಟಿಗೆಯನ್ನು ನಾಲ್ಕೂ ಮೂಲೆಯಿಂದಲೂ ಹೆಗಲ ಮೇಲೆ ಹೊತ್ತು ಕುಣಿಯೋ ಈ ಯುವಕರ ಸ್ಟೈಲ್ ಇತ್ತೀಚೆಗೆ ಎಲ್ಲೆಡೆ ಸಖತ್ ವೈರಲ್ ಆಗ್ತಿದೆ. ಆದ್ರೆ, ಹೀಗೆ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ಕುಣಿಯುವ ಈ ಹುಡುಗರು ನೋಡುಗರ ಕಣ್ಣಿಗೆ ಕಾಮಿಡಿಯನ್ ಗಳಾಗಿ ಕಂಡರೂ ಅವರು ಹಾಗೆ ಶವಪೆಟ್ಟಿಗೆಯನ್ನ ಹೊತ್ತು ಕುಣಿಯುವುದರ ಹಿಂದೆ ರೋಚಕ ಕಹಾನಿಯೇ ಅಡಗಿದೆ.

Related posts

guru-purnima-2026-gajakesari-yoga-rashi-bhavishya

Astro- 2026ರ ಗುರು ಪೂರ್ಣಿಮೆಯಂದು ಗಜಕೇಸರಿ ಯೋಗ ಸಿಗಲಿದೆ..ಈ 12 ರಾಶಿಗಳಲ್ಲಿ ಯಾರಿಗೆ ಶುಭ..? ಯಾರಿಗೆ ಅಶುಭ..?

July 28, 2026
rishikanta-singh-commonwealth-games-silver-medal-journey

Rishikantha singh – ಪಾತ್ರೆ ತೊಳೆಯುತ್ತಿದ್ದ ಕೈಗಳಲ್ಲಿ ಕಾಮನ್‌ವೆಲ್ತ್ ಗೇಮ್ಸ್ ನ ಬೆಳ್ಳಿಯ ಪದಕ..! ಢಾಬಾದಿಂದ ಗ್ಲಾಸ್ಗೋ ಪೋಡಿಯಂ ತನಕದ ರೋಚಕ ಜರ್ನಿ..!

July 28, 2026

ಇದೊಂದು ಪ್ರಾಚೀನ ಸಂಸ್ಕೃತಿ
ಹೌದು..! ಪ್ರಿಯ ಓದುಗ ದೊರೆಯೇ, ಪಶ್ಚಿಮ ಆಫ್ರಿಕಾದ ಘಾನಾ ದೇಶದಲ್ಲಿ ಇಂತಹದೊಂದು ಪ್ರಾಚೀನ ಸಂಸ್ಕೃತಿ ಇನ್ನೂ ಚಾಲ್ತಿಯಲ್ಲಿದೆ. ಯಾರಾದರೂ ಅಲ್ಲಿ ಮರಣ ಹೊಂದಿದರೆ ಅವರನ್ನ ಖುಷಿಯಿಂದ ಮತ್ತೊಂದು ಲೋಕಕ್ಕೆ ಬೀಳ್ಕೊಡಬೇಕು. ಅದಕ್ಕೆ ಅಂತಾನೇ ಘಾನಾದಲ್ಲಿ ವಿಶೇಷ ನೃತ್ಯ ತಂಡಗಳಿವೆ. ಅವರನ್ನ ಡ್ಯಾನ್ಸಿಂಗ್ ಪಾಲ್ ಬೇರರ್ಸ್ ಎಂದೂ ಸಹ ಕರೆಯಲಾಗುತ್ತೆ.
ಘಾನಾ ದೇಶದಲ್ಲಿ ಯಾರಾದರೂ ಮರಣ ಹೊಂದಿದರೇ ಈ ಡ್ಯಾನ್ಸಿಂಗ್ ಪಾಲ್ ಬೇರರ್ಸ್ ಗಳನ್ನು ಅಂತ್ಯಕ್ರಿಯೆಯ ದಿನ ಹಣ ಕೊಟ್ಟು ಕರೆಸಿಕೊಳ್ಳಲಾಗುತ್ತೆ. ನಾಲ್ಕರಿಂದ 6 ಜನರಿರುವ ಈ ತಂಡದವರು ಅಂತ್ಯಸಂಸ್ಕಾರದ ದಿನ ಕಪ್ಪು ಬಣ್ಣದ ಸೂಟು ತೊಟ್ಟು, ಕೂಲ್ ಇನ್ ಗ್ಲಾಸ್ ಹಾಕಿಕೊಂಡು ಲೆದರ್ ಶೂಸ್ ಧರಿಸಿ ಸಖತ್ ಸ್ಟೈಲಿಶ್ ಆಗಿ ರೆಡಿಯಾಗಿ ಬರುತ್ತಾರೆ. ಹಾಗೇ ಬಂದವರು.. ಮೃತದೇಹವನ್ನು ಮಣ್ಣು ಮಾಡುವ ಮುನ್ನ ಶವಪೆಟ್ಟಿಗೆಯನ್ನ ಹೊತ್ತು ಬೊಂಬಾಟ್ ಸ್ಟೆಪ್ಸ್ ಹಾಕುತ್ತಾರೆ. ಈ ಮೂಲಕ ಮೃತನಿಗೆ ಬೀಳ್ಕೊಡುಗೆ ನೀಡುತ್ತಾರೆ. ಜೊತೆಗೆ ಮೃತರ ಕುಟುಂಬಸ್ಥರ ಬೀಳ್ಕೊಡುಗೆಯ ಆಸೆಯನ್ನ ನೆರವೇರಿಸುತ್ತಾರೆ.

ಇದು ಒಂದು ಮೂಲದ ಕಹಾನಿಯಾದರೇ…. ಈ ಕಫಿನ್ ಡ್ಯಾನ್ಸಿಂಗ್ ಹಿಂದೆ ಮತ್ತೊಂದು ಕಥೆ ಇದೆ.
ಪ್ರಿಯ ಓದುಗರೇ ಈ “ಡ್ಯಾನ್ಸಿಂಗ್ ಪಾಲ್ ಬೇರರ್ಸ್” ವಿಡಿಯೋ ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ. ಈ ವಿಡಿಯೋದಲ್ಲಿ ಬರುವ ಮ್ಯೂಸಿಕ್ ಗೆ ಯುವ ಜನತೆ ಫಿದಾ ಆಗಿದ್ದು, ಆ ಸಂಗೀತವನ್ನೇ ಎಷ್ಟೋ ಮಂದಿ ತಮ್ಮ ಮೊಬೈಲ್ ನ ರಿಂಗ್ ಟೂನ್ ಆಗಿ ಮಾಡಿಕೊಂಡಿದ್ದಾರೆ.

ಇನ್ನು ಕಫಿನ್ ಡ್ಯಾನ್ಸಿಂಗ್ ಹಿಂದಿರುವ ಮತ್ತೊಂದು ಕಹಾನಿಗೆ ದಕ್ಷಿಣ ಅಮೇರಿಕ ಖಂಡದ ಲಿಂಕ್ ಇದೆ. ಅದೇನಂದ್ರೆ, ದಕ್ಷಿಣ ಅಮೇರಿಕ ಖಂಡದ ಉತ್ತರ ಭಾಗದಲ್ಲಿ ಸುರಿನಾಮ್ ಎಂಬ ದೇಶ ಇದೆ. ಮೊದಲು ಈ ದೇಶವನ್ನ ಡಚ್ ಘಯಾನಾ ಎಂದು ಕರೆಯಲಾಗುತ್ತಿತ್ತು. 1975ರಲ್ಲಿ ಸ್ವತಂತ್ರವಾಗುವ ಮೊದಲು ಸುರಿನಾಮ್ ನೆದರ್ಲೆಂಡ್ಸ್ ಪ್ರದೇಶದ ಹಿಂದಿನ ಸಾಮ್ರಾಜ್ಯವಾಗಿತ್ತು. ಆದ್ರೆ ಆಫ್ರಿಕಾದಲ್ಲಿ ಉಳಿದುಕೊಂಡ ಸುರಿನಾಮ್ ಜನಾಂಗದವರಲ್ಲಿ ಹಿಂದಿನಿಂದಲೂ ಮರಣವನ್ನು ಈ ರೀತಿ ಶವಪೆಟ್ಟಿಗೆ ಹೊತ್ತು ಕುಣಿದು ಸಂಭ್ರಮದಿಂದ ಆಚರಿಸುವ ಪ್ರತೀತಿ ಇತ್ತಂತೆ. ಅದು ಘಯಾನಾದಲ್ಲಿ ಇಂದಿಗೂ ಮುಂದುವರಿಯುತ್ತಿದೆ ಎಂದು ಹೇಳಲಾಗ್ತಿದೆ.

ರಾತ್ರೋ ರಾತ್ರಿ ಫೇಮಸ್ : ಮಿಲಿಯನ್ ಗಟ್ಟಲೇ ವೀವ್ಸ್
ಸಾಮಾಜಿಕ ಜಾಲತಾಣದಲ್ಲಿ ಇವರ ವಿಡಿಯೋ ಅಪ್ ಲೋಡ್ ಆಗುತ್ತಿದ್ದಂತೆ ಈ ನೃತ್ಯಗಾರರು (ಡ್ಯಾನ್ಸಿಂಗ್ ಪಾಲ್ ಬೇರರ್ಸ್) ರಾತ್ರೋ ರಾತ್ರಿ ಫೇಮಸ್ ಆಗಿರೋದು ಅಲ್ಲದೆ ವಿಡಿಯೋ ಸಖತ್ ವೈರಲ್ ಆಗಿದೆ.

ಇನ್ನು ತಮ್ಮ ವಿಡಿಯೋ ಕ್ಲಿಪ್ಪಿಂಗ್ ಅಷ್ಟೊಂದು ವೈರಲ್ ಆಗಿರುವ ಬಗ್ಗೆ ಕಫಿನ್ ಡ್ಯಾನ್ಸರ್ಸ್ ನ ನಾಯಕ ಬೆಂಜಮಿನ್ ಎಯ್ಡೂ ಅಚ್ಚರಿ ಪಟ್ಟಿದ್ದಾರೆ. ಎಲ್ಲರಂತೆ ನಾವು ಇದ್ದೇವು, ಆದ್ರೆ, ಮಾರ್ಚ್ ತಿಂಗಳ ಒಂದು ಮುಂಜಾನೆ ಎದ್ದು ನೋಡಿದ್ರೆ ನಾವು ವಿಶ್ವಾದ್ಯಂತ ವೈರಲ್ ಆಗಿದ್ದೇವೆ. ಇದು ಹೇಗಾಯ್ತು ಗೊತ್ತಿಲ್ಲ. ಆದರೂ ತುಂಬಾ ಫನ್ನಿಯಾಗಿದೆ ಅಂತಾ ಹೇಳಿದ್ದಾರೆ.

ಒಟ್ಟಾರೆ, ಶವದ ಪೆಟ್ಟಿಗೆಗೆ ಸಂಭ್ರಮದ ಮುಕ್ತಿ ನೀಡುವ ಈ ಆಫ್ರಿಕಾದ ಕಫಿನ್ ಡ್ಯಾನ್ಸರ್ ಗಳು ಇಂದಿನ ಸಾಮಾಜಿಕ ಜಾಲತಾಣದ ಸ್ಟಾರ್ ಗಳು ಅಂದ್ರೆ ತಪ್ಪಾಗಲ್ಲ.

Tags: Rarazziso
ShareTweetSendShare
Join us on:

Related Posts

guru-purnima-2026-gajakesari-yoga-rashi-bhavishya

Astro- 2026ರ ಗುರು ಪೂರ್ಣಿಮೆಯಂದು ಗಜಕೇಸರಿ ಯೋಗ ಸಿಗಲಿದೆ..ಈ 12 ರಾಶಿಗಳಲ್ಲಿ ಯಾರಿಗೆ ಶುಭ..? ಯಾರಿಗೆ ಅಶುಭ..?

by admin
July 28, 2026
0

ಬುಧವಾರ ಜುಲೈ 29ರಂದು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೂರ್ಣಿಮೆ ಎನ್ನಲಾಗುವುದು ಈ ಮಂಗಳಕರ ದಿನ ಜ್ಯೋತಿಷ್ಯದಲ್ಲಿ ತುಂಬಾ ವಿಶೇಷವಾಗಿದೆ. ಯಾಕೆಂದರೆ ಈ...

rishikanta-singh-commonwealth-games-silver-medal-journey

Rishikantha singh – ಪಾತ್ರೆ ತೊಳೆಯುತ್ತಿದ್ದ ಕೈಗಳಲ್ಲಿ ಕಾಮನ್‌ವೆಲ್ತ್ ಗೇಮ್ಸ್ ನ ಬೆಳ್ಳಿಯ ಪದಕ..! ಢಾಬಾದಿಂದ ಗ್ಲಾಸ್ಗೋ ಪೋಡಿಯಂ ತನಕದ ರೋಚಕ ಜರ್ನಿ..!

by admin
July 28, 2026
0

ಪಾತ್ರೆ ತೊಳೆಯುತ್ತಿದ್ದ ಕೈಗಳಲ್ಲಿ ಕಾಮನ್‌ವೆಲ್ತ್ ಗೇಮ್ಸ್ ನ ಬೆಳ್ಳಿಯ ಪದಕ..! ಢಾಬಾದಿಂದ ಗ್ಲಾಸ್ಗೋ ಪೋಡಿಯಂ ತನಕದ ರೋಚಕ ಜರ್ನಿ..! ಅವನು ಶಾಲೆಗೆ ಹೋಗಿ ಓದಿದ್ದು ಬರೀ 8ನೇ...

‘ಸಿದ್ದರಾಮಯ್ಯ ನಿವೃತ್ತಿಯಾದರೆ ಕಾಂಗ್ರೆಸ್‌ಗೆ ಕಷ್ಟ’: ಎಚ್.ಸಿ. ಬಾಲಕೃಷ್ಣ

‘ಸಿದ್ದರಾಮಯ್ಯ ನಿವೃತ್ತಿಯಾದರೆ ಕಾಂಗ್ರೆಸ್‌ಗೆ ಕಷ್ಟ’: ಎಚ್.ಸಿ. ಬಾಲಕೃಷ್ಣ

by Shwetha
July 28, 2026
0

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ರಾಜಕೀಯ ನಿವೃತ್ತಿಯ ಸುಳಿವು ನೀಡಿದ ಬೆನ್ನಲ್ಲೇ, ಕಾಂಗ್ರೆಸ್‌ನಲ್ಲಿ ಈ ಕುರಿತು ಚರ್ಚೆಗಳು ಜೋರಾಗಿವೆ. ಈ...

ಸಿ.ಟಿ. ರವಿ ವಿರುದ್ಧದ FIR ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ

ಸಿ.ಟಿ. ರವಿ ವಿರುದ್ಧದ FIR ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ

by Shwetha
July 28, 2026
0

ಮುಸ್ಲಿಂ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವಿರುದ್ಧ ದಾಖಲಾಗಿದ್ದ FIR ಅನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ...

ಖರ್ಗೆ ನಂತರ ಸಿದ್ದರಾಮಯ್ಯ ರಾಷ್ಟ್ರೀಯ ಕೈ ಸಾರಥಿ? ಲೋಕಸಭೆ ವಿರೋಧ ಪಕ್ಷದ ನಾಯಕನ ಸ್ಥಾನದ ಬಗ್ಗೆ ಶಿವಲಿಂಗೇಗೌಡರ ಸ್ಫೋಟಕ ಭವಿಷ್ಯವಾಣಿ

ಖರ್ಗೆ ನಂತರ ಸಿದ್ದರಾಮಯ್ಯ ರಾಷ್ಟ್ರೀಯ ಕೈ ಸಾರಥಿ? ಲೋಕಸಭೆ ವಿರೋಧ ಪಕ್ಷದ ನಾಯಕನ ಸ್ಥಾನದ ಬಗ್ಗೆ ಶಿವಲಿಂಗೇಗೌಡರ ಸ್ಫೋಟಕ ಭವಿಷ್ಯವಾಣಿ

by Shwetha
July 28, 2026
0

ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಕುರಿತು ಅರಸೀಕೆರೆ ಶಾಸಕ ಕೆ ಎಂ ಶಿವಲಿಂಗೇಗೌಡ ಮಹತ್ವದ ಸುಳಿವು ನೀಡಿದ್ದಾರೆ. ಸಿದ್ದರಾಮಯ್ಯ ಕೇವಲ ರಾಜ್ಯಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram