ADVERTISEMENT
Thursday, May 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Devaraja Arasu – ಸರ್ವರಿಗೂ ಸಮಬಾಳು ನೀಡಿದ ಏಕೈಕ ಮುಖ್ಯಮಂತ್ರಿ ‘ದೇವರಾಜ ಅರಸು’ – ಡಾ.ಕೆ. ಸುಧಾಕರ್

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಮಾತಿಗೆ ನೂರಕ್ಕೆ ನೂರರಷ್ಟು ಅರ್ಥ ನೀಡಿ ಆಡಳಿತ ನಡೆಸಿದ ಏಕೈಕ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರಾಗಿದ್ದು, ಅಂತಹ ಮಹನೀಯರಿಗೆ ಸಿಗಬೇಕಾದ ಗೌರವ ಸಿಗದಿರುವುದು ಖೇದಕರ  ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

Naveen Kumar B C by Naveen Kumar B C
August 20, 2022
in Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ಸರ್ವರಿಗೂ ಸಮಬಾಳು ನೀಡಿದ ಏಕೈಕ ಮುಖ್ಯಮಂತ್ರಿ ದೇವರಾಜ ಅರಸು – ಡಾ.ಕೆ. ಸುಧಾಕರ್

ದೇವನಹಳ್ಳಿ : ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಮಾತಿಗೆ ನೂರಕ್ಕೆ ನೂರರಷ್ಟು ಅರ್ಥ ನೀಡಿ ಆಡಳಿತ ನಡೆಸಿದ ಏಕೈಕ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರಾಗಿದ್ದು, ಅಂತಹ ಮಹನೀಯರಿಗೆ ಸಿಗಬೇಕಾದ ಗೌರವ ಸಿಗದಿರುವುದು ಖೇದಕರ  ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

Related posts

ಯುವಜನತೆಯನ್ನು ಜಿರಳೆ ಎಂದು ಅವಮಾನಿಸಿದ ಸುಪ್ರೀಂ ಜಡ್ಜ್: ತಿರುಗಿಬಿದ್ದ ನಿರುದ್ಯೋಗಿಗಳಿಂದ ಕಾಕ್ರೋಚ್ ಜನತಾ ಪಾರ್ಟಿ ಉದಯ

ಯುವಜನತೆಯನ್ನು ಜಿರಳೆ ಎಂದು ಅವಮಾನಿಸಿದ ಸುಪ್ರೀಂ ಜಡ್ಜ್: ತಿರುಗಿಬಿದ್ದ ನಿರುದ್ಯೋಗಿಗಳಿಂದ ಕಾಕ್ರೋಚ್ ಜನತಾ ಪಾರ್ಟಿ ಉದಯ

May 21, 2026
ಬಿಜೆಪಿಯಲ್ಲಿ ಶುರುವಾಯ್ತು ರಾಜ್ಯಾಧ್ಯಕ್ಷ ಪಟ್ಟಕ್ಕಾಗಿ ಬಿಗ್ ಫೈಟ್: ವಿಜಯೇಂದ್ರ ಅವಧಿ ಮುಗಿಯುವ ಮುನ್ನವೇ ಶ್ರೀರಾಮುಲು ರಣತಂತ್ರ ಶುರು!

ಬಿಜೆಪಿಯಲ್ಲಿ ಶುರುವಾಯ್ತು ರಾಜ್ಯಾಧ್ಯಕ್ಷ ಪಟ್ಟಕ್ಕಾಗಿ ಬಿಗ್ ಫೈಟ್: ವಿಜಯೇಂದ್ರ ಅವಧಿ ಮುಗಿಯುವ ಮುನ್ನವೇ ಶ್ರೀರಾಮುಲು ರಣತಂತ್ರ ಶುರು!

May 21, 2026

ದೇವನಹಳ್ಳಿಯಲ್ಲಿ ನಿರ್ಮಿಸಿರುವ ದೇವರಾಜ ಅರಸು ಭವನ ಉದ್ಘಾಟಿಸಿದ ನಂತರ ಅರಸು ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ರಾಜ್ಯದ ಸಮಸ್ತ ಹಿಂದುಳಿದವರಿಗೂ ಸಮರ್ಪಕವಾಗಿ ನ್ಯಾಯ ಒದಗಿಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದರು.

 ಅವರ ಪಕ್ಷವೇ ಅವರಿಗೆ ಮುಳುವಾಯಿತು

ಅವರ ಪಕ್ಷದ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ಉತ್ತರದಲ್ಲಿ ಸೋತಾಗ ಚಿಕ್ಕಮಗಳೂರಿನಿಂದ ಮತ್ತೆ ರಾಜಕೀಯ ಮುಖ್ಯವಾಹಿನಿಗೆ ಬರಲು ಅರಸು ಅವರು ಶ್ರಮಿಸಿದರು. ಇಂತಹ ಅರಸು ಅವರನ್ನು ಅವರ ಪಕ್ಷ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿತು. ಅವರನ್ನು ಪಕ್ಷದಿಂದಲೂ ಉಚ್ಛಾಟಿಸಿತು. ಇದು ಒಬ್ಬ ಧೀಮಂತ ನಾಯಕ ಅನುಭವಿಸಿದ ನೋವು ಎಂದರು.

ಅವರ ಜೀವನ ಚರಿತ್ರೆ ಓದಿದರೆ ಭಾವನೆಗಳಿಂದ ಕೂಡಿದ ಚರಿತ್ರೆಯಾಗಿದೆ. ರಾಜಕೀಯ ಕ್ರಾಂತಿ, ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಏಕೈಕ ಮುಖ್ಯಮಂತ್ರಿ  ಅರಸು. ಆ ಕಾಲಘಟ್ಟದಲ್ಲಿ ಜಾತಿ, ರಾಜಕೀಯ, ಆರ್ಥಿಕ ಶಕ್ತಿ ಇಲ್ಲದವರನ್ನು ಶಾಸಕರು, ಸಚಿವರನ್ನಾಗಿ ಮಾಡಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದರು.

 ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ವೀರಪ್ಪಮೊಯ್ಲಿ ಸೇರಿದಂತೆ ಅನೇಕ ನಾಯಕರನ್ನು ಬೆಳೆಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ರಾಜಕೀಯ ಕ್ರಾಂತಿ ಮಾಡಿದ ನಾಯಕ ಅರಸು. ತಾವು ಪ್ರತಿಪಾದಿಸಿದ್ದನ್ನು ಅಕ್ಷರಶಃ ಅನುಷ್ಠಾನ ಮಾಡುವ ಎದೆಗಾರಿಕೆ ತೋರಿಸಿದ ಅತ್ಯಂತ ವಿರಳ ಮುಖ್ಯಮಂತ್ರಿಗಳಲ್ಲಿ ಅರಸು ಅವರೂ ಒಬ್ಬರು. ಉಳುವವನೇ ಭೂ ಒಡೆಯ ಎಂಬ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಜಾರಿಗೊಳಿಸಿದ ಕಾಯ್ದೆಯನ್ನು ಅನೇಕ ರಾಜ್ಯಗಳು ಅನುಷ್ಠಾನ ಮಾಡದಿದ್ದರೂ, ತಮ್ಮದೇ ಸಂಪುಟದ ಸಚಿವರು ವಿರೋಧ ವ್ಯಕ್ತಪಡಿಸಿದರೂ ಎದೆಗಾರಿಕೆಯಿಂದ ಕಾಯ್ದೆ ಅನುಷ್ಠಾನ ಮಾಡಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದು ಸಚಿವರು ಸ್ಮರಿಸಿದರು.

 ಹಿಂದುಳಿದವರ ಚಾಂಪಿಯನ್

ಉಳುವವನೇ ಭೂಮಿಯ ಒಡೆಯ ಕಾಯ್ದೆಯಿಂದ ಲಕ್ಷಾಂತರ ಮಂದಿ ಜೀತದಾಳುಗಳು ಜೀತ ವಿಮುಕ್ತರಾದರು. ಅಷ್ಟೇ ಅಲ್ಲದೆ ಜೀತದಾಳುಗಳೂ ಭೂಮಿಯ ಒಡೆಯರಾದರು. ದುಡಿಯುವ ಕೈಗಳಿಗೆ ಭೂಮಿ ನೀಡಿದ ಖ್ಯಾತಿ ಅರಸು ಅವರಿಗೆ ಸಲ್ಲುತ್ತದೆ. ಹಿಂದುಳಿದ ವರ್ಗಗಳ ಪರ ಯಾವುದೇ ಕೆಲಸ ಮಾಡದವರೂ ತಾವು ಚಾಂಪಿಯನ್ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ಮಾಡಿದ್ದು ಏನೂ ಇಲ್ಲ. ಆದರೆ ನುಡಿದಂತೆ ನಡೆಯಲ್ಲಿ ತೋರಿಸಿದ ಅರಸು ಅವರು ಮಾತ್ರ ನಿಜವಾದ ಹಿಂದುಳಿದವರ ಚಾಂಪಿಯನ್ ಎಂದು ಬಣ್ಣಿಸಿದರು.

ಅರಸು ಅವರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ ಎಂಬುದು ನೋವಿನ ಸಂಗತಿ. ಅವರಿಗೆ ಸಿಗಬೇಕಾದ ಪ್ರಾತಿನಿಧ್ಯ, ಮನ್ನಣೆ ಸಿಗದಿರುವುದು ಖೇದಕರ ಸಂಗತಿ. ಮನೆಯಿಲ್ಲದವರಿಗೆ ಜನತಾ ಮನೆ ವಿತರಣೆ ಯೋಜನೆ ಜಾರಿಗೊಳಿಸಿದ ಮೊದಲ ಮುಖ್ಯಮಂತ್ರಿ, ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಏಕೈಕ ಮುಖ್ಯಮಂತ್ರಿ, ಸ್ಥಿತಿವಂತರ ಸಮಾಜವಿದ್ದ ಕಾಲದಲ್ಲಿ ಇಂತಹ ಸುಧಾರಣೆ ಮಾಡಿದ್ದು ನಿಜಕ್ಕೂ ದೊಡ್ಡ ಸಾಧನೆ ಎಂದು ಹೇಳಿದರು.

ಅರಸು ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಎಲ್ಲರೂ ಸಾಗಿದರೆ ಸುಸ್ಥಿರ ಸಮಾಜ ನಿರ್ಮಿಸಲು ಸಾಧ್ಯ. ಹಾಗಾಗಿ ಅವರು ಎಂದೆಂದಿಗೂ ನಾಡಿನ ಜನರ ಮನದಲ್ಲಿ ಚಿರಸ್ಥಾಯಿಯಾಗಿರುತ್ತಾರೆ ಎಂದು ಸಚಿವರು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ರಂಗಸ್ವಾಮಿ, ಚಂದ್ರಶೇಖರ್, ವಿಜಯ್ ಕುಮಾರ್, ಅಮರನಾಥ್, ಆಂಜಿನಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags: devanahalliDevaraja ArasuDr. K Sudhakar
ShareTweetSendShare
Join us on:

Related Posts

ಯುವಜನತೆಯನ್ನು ಜಿರಳೆ ಎಂದು ಅವಮಾನಿಸಿದ ಸುಪ್ರೀಂ ಜಡ್ಜ್: ತಿರುಗಿಬಿದ್ದ ನಿರುದ್ಯೋಗಿಗಳಿಂದ ಕಾಕ್ರೋಚ್ ಜನತಾ ಪಾರ್ಟಿ ಉದಯ

ಯುವಜನತೆಯನ್ನು ಜಿರಳೆ ಎಂದು ಅವಮಾನಿಸಿದ ಸುಪ್ರೀಂ ಜಡ್ಜ್: ತಿರುಗಿಬಿದ್ದ ನಿರುದ್ಯೋಗಿಗಳಿಂದ ಕಾಕ್ರೋಚ್ ಜನತಾ ಪಾರ್ಟಿ ಉದಯ

by Shwetha
May 21, 2026
0

ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಕೇವಲ ಮನರಂಜನೆಯ ತಾಣಗಳಾಗಿ ಉಳಿದಿಲ್ಲ. ಅವು ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವ ಶಕ್ತಿಯುತ ಅಸ್ತ್ರಗಳಾಗಿ ಬದಲಾಗಿವೆ. ಇತ್ತೀಚೆಗೆ ಸುಪ್ರೀಂ ಕೋರ್ಟ್...

ಬಿಜೆಪಿಯಲ್ಲಿ ಶುರುವಾಯ್ತು ರಾಜ್ಯಾಧ್ಯಕ್ಷ ಪಟ್ಟಕ್ಕಾಗಿ ಬಿಗ್ ಫೈಟ್: ವಿಜಯೇಂದ್ರ ಅವಧಿ ಮುಗಿಯುವ ಮುನ್ನವೇ ಶ್ರೀರಾಮುಲು ರಣತಂತ್ರ ಶುರು!

ಬಿಜೆಪಿಯಲ್ಲಿ ಶುರುವಾಯ್ತು ರಾಜ್ಯಾಧ್ಯಕ್ಷ ಪಟ್ಟಕ್ಕಾಗಿ ಬಿಗ್ ಫೈಟ್: ವಿಜಯೇಂದ್ರ ಅವಧಿ ಮುಗಿಯುವ ಮುನ್ನವೇ ಶ್ರೀರಾಮುಲು ರಣತಂತ್ರ ಶುರು!

by Shwetha
May 21, 2026
0

ರಾಜ್ಯ ಬಿಜೆಪಿಯಲ್ಲಿ ಈಗ ಸದ್ದಿಲ್ಲದೆ ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆ ಕುರಿತಾದ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಹಾಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಅಧಿಕಾರ ಅವಧಿ ಮುಕ್ತಾಯಗೊಳ್ಳಲು ಇನ್ನೂ...

FIR ಬಳಿಕ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಗಂಭೀರ ಆರೋಪ

FIR ಬಳಿಕ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಗಂಭೀರ ಆರೋಪ

by Shwetha
May 21, 2026
0

ಎಚ್. ವಿಶ್ವನಾಥ್ ವಿರುದ್ಧ ಮೈಸೂರಿನ ದೇವರಾಜ ಠಾಣೆಯಲ್ಲಿ FIR ದಾಖಲಾಗಿರುವ ಪ್ರಕರಣ ಇದೀಗ ಹೊಸ ರಾಜಕೀಯ ತಿರುವು ಪಡೆದುಕೊಂಡಿದೆ. ಸಾಲದ ಹಣ ವಾಪಸ್ ಕೇಳಲು ಹೋದ ವ್ಯಕ್ತಿಯ...

ರಾಜ್ಯಕ್ಕೆ ₹6,000 ಕೋಟಿ ಹೂಡಿಕೆ.. 74 ಸಾವಿರ ಉದ್ಯೋಗ ಸೃಷ್ಟಿ: ಎಂಬಿ ಪಾಟೀಲ್

ರಾಜ್ಯಕ್ಕೆ ₹6,000 ಕೋಟಿ ಹೂಡಿಕೆ.. 74 ಸಾವಿರ ಉದ್ಯೋಗ ಸೃಷ್ಟಿ: ಎಂಬಿ ಪಾಟೀಲ್

by Shwetha
May 21, 2026
0

ಎಂಬಿ ಪಾಟೀಲ್ ಅವರು ರಾಜ್ಯದಲ್ಲಿ ಭಾರೀ ಮಟ್ಟದ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ಬೆಂಗಳೂರು ಮೂಲದ ಆ್ಯಕ್ಸಿಸ್‌ಕೇಡ್ಸ್ ಸಂಸ್ಥೆ ಕರ್ನಾಟಕದಲ್ಲಿ ಸುಮಾರು...

ಮೋದಿ ಹಾವಾಡಿಗನಲ್ಲ ಭಾರತದ ಗತ್ತಿನ ಸಂಕೇತ: ನಾರ್ವೆ ಪತ್ರಿಕೆಯ ಜನಾಂಗೀಯ ಕುಚೇಷ್ಟೆಗೆ ಭಾರೀ ಆಕ್ರೋಶ

ಮೋದಿ ಹಾವಾಡಿಗನಲ್ಲ ಭಾರತದ ಗತ್ತಿನ ಸಂಕೇತ: ನಾರ್ವೆ ಪತ್ರಿಕೆಯ ಜನಾಂಗೀಯ ಕುಚೇಷ್ಟೆಗೆ ಭಾರೀ ಆಕ್ರೋಶ

by Shwetha
May 21, 2026
0

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಾರ್ವೆ ಪ್ರವಾಸವು ಸಾಂಸ್ಕೃತಿಕ ಮತ್ತು ರಾಜತಾಂತ್ರಿಕ ಸಂಬಂಧಗಳಿಗಿಂತ ಹೆಚ್ಚಾಗಿ ಪಾಶ್ಚಿಮಾತ್ಯ ಮಾಧ್ಯಮಗಳ ಹಳೆಯ ಚಾಳಿ ಮತ್ತು ಪೂರ್ವಾಗ್ರಹ ಪೀಡಿತ ಧೋರಣೆಗಳಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram