ಮಂಗಳವಾರದವರೆಗೂ ರಾಜ್ಯದಲ್ಲಿ ಮಳೆಯ ಅಬ್ಬರ
ಬೆಂಗಳೂರು : ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಇನ್ನೆರಡು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನವೆಂಬರ್ 23 ಅಂದರೆ ಮಂಗಳವಾರದವರೆಗೂ ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಖ್ಯವಾಗಿ ಇವತ್ತು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ವರುಣ ಅಬ್ಬರಿಸಿಲಿದ್ದಾನೆ.
ಈ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಇತ್ತ ರಾಜ್ಯ ರಾಜಧಾನಿಯಲ್ಲಿ ನಿನ್ನೆ ಸಂಜೆಯಿಂದ ವರುಣ ಬಿಡುವು ನೀಡಿದಂತಿದೆ.
ಕಳೆದ ಒಂದು ವಾರದಿಂದ ಬಿಟ್ಟುಬಿಡದೇ ಅಬ್ಬರಿಸಿದ್ದ ಮಳೆರಾಯ ಇಂದು ಸೈಲೆಂಟ್ ಆಗಿದ್ದಾನೆ.
ಆದ್ರೂ ಇಂದು ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರುನಾಡು ಕಂಗಾಲು
ಅಕಾಲಿಕ ಮಳೆಗೆ ಕರುನಾಡು ಕಂಗಾಲಾಗಿದೆ. ರಾಜ್ಯದಲ್ಲಿ ಬಿಟ್ಟುಬಿಡಲೇ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಸೂರ್ಯ ಕಳೆದುಹೋಗಿದ್ದಾನೇನೋ ಅನ್ನುವಂತೆ ಮಳೆರಾಯನ ಅಬ್ಬರಕ್ಕೆ ಸೂರ್ಯದೇವ ಮರೆಯಾಗಿದ್ದಾನೆ.
ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆ ನಾನಾ ಅವಾಂತರಗಳನ್ನು ಸೃಷ್ಠಿಸಿದ್ದಾರೆ. ಸಾವಿರಾರೂ ಎಕರೆ ಬೆಳೆ ನೀರುಪಾಲಾಗಿದೆ. ನೂರಾರು ಕೆರೆಗಳು ಕೋಡಿ ಹೊಡೆದು ಸಾವಿರಾರು ಎಕರೆ ಜಮೀನುಗಳು ಜಲಮಯವಾಗಿದೆ.
ಇನ್ನು ಬಿಟ್ಟುಬಿಡದೇ ಸುರಿದ ಮಳೆಗೆ ಸಾಕಷ್ಟು ಗ್ರಾಮಗಳು ನಡುಗಡ್ಡೆಗಳಾಗಿದ್ದರೇ ಮನೆಗಳು ಕುಸಿದಿವೆ. ಮರಗಳು ಧರೆಗುರುಳಿವೆ.